ಸಾರಾಂಶ
ಹೊಸಕೋಟೆ: ಕಲೆ ಯಾರೊಬ್ಬರ ಸ್ವತ್ತಲ್ಲ, ಪ್ರತಿಭಾವಂತರಿಗೆ ಒಲಿಯುವ ವರ. ಒಂದಕ್ಕಿಂತ ಒಂದು ಕಲೆ ಹೆಚ್ಚಾಗಿರಬಹುದು. ಆದರೆ, ಪ್ರತಿಭೆಗಳ ಹುಡುಕಾಟ ಮಾತ್ರ ನಿರಂತರವಾಗಿರಬೇಕು ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.ನಗರದ ಹೊರವಲಯದ ನಿಂಬೇಕಾಯಿಪುರದ ಜನಪದರು ಸಾಂಸ್ಕೃತಿಕ ವೇದಿಕೆ ಜನಪದರು ರಂಗಮಂದಿರದಲ್ಲಿ ಏರ್ಪಡಿಸಿದ್ದ ರಂಗಮಾಲೆ 100ರ ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಎಲ್ಲಾ ಭಾಷೆಯ ಗ್ರಾಮೀಣ ಜನರ ನಡುವೆ ಪಾರಂಪರಿಕವಾಗಿ ನಡೆದು ಬಂದಿರುವ ಜಾನಪದ ಕಲೆಗಳಾದ ಹಾಡು, ಪಾಡುಕತೆ, ನೃತ್ಯ ಸವೃದ್ಧವಾಗಿವೆ. ಈ ಕಲೆ, ಕಲಾವಿದರನ್ನು ಪ್ರೋತ್ಸಾಹಿಸಿ ಹೊರತರುವ ಕೆಲಸ ನಿರಂತರವಾಗಿ ನಡೆಯುತ್ತಿರಬೇಕು. ಜನಪದರು ಸಾಂಸ್ಕೃತಿಕೆ ವೇದಿಕೆಯಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚಾಗಬೇಕು. ಪ್ರತಿಭೆಯನ್ನು ಹೊರತೆಗೆಯಲು ಈ ವೇದಿಕೆಗಳು ಸಹಾಯಕವಾಗಲಿ ಎಂದರು.ಸಾಕ್ರೋಫೋನ್ ವಾದನ ನುಡಿಸುವುದರಲ್ಲಿ ಜನಪದರು ವೇದಿಕೆಯಲ್ಲಿ ವಿಶ್ವ ದಾಖಲೆ ಸಾಧಿಸಿದ ಸಾಕ್ರೋಫೋನ್ ವಾದಕರಾದ ಎಂ.ಎಸ್.ಸುಬ್ಬಲಕ್ಷ್ಮಿ ಅವರನ್ನು ಜನಪದರು ವೇದಿಕೆಯಿಂದ ಸನ್ಮಾನಿಸಲಾಯಿತು. ಜನಪದರು ವೇದಿಕೆ ಕಾರ್ಯದರ್ಶಿ ಸಿದ್ದೇಶ್ವರ ನನಸುಮನೆ ರಚಿಸಿದ ''''''''ಜ್ಞಾನದೇಗುಲ ನಮ್ಮೂರ ಸರ್ಕಾರಿ ಶಾಲೆ'''''''' ಪುಸ್ತಕವನ್ನು ಅರವಿಂದ ಲಿಂಬಾವಳಿ ಬಿಡುಗಡೆಗೊಳಿಸಿದರು. ನಾಟಕೋತ್ಸವದ ಮೊದಲ ನಾಟಕವಾಗಿ ಸಿದ್ದೇಶ್ವರ ನನಸುಮನೆಯವರು ರಚಿಸಿ ನಿರ್ದೇಶಿಸಿದಜ್ಞಾನದೇಗುಲ ನಮ್ಮೂರ ಸರಕಾರಿ ಶಾಲೆ ನಾಟಕ ಪ್ರದರ್ಶಿಸಲಾಯಿತು.
ಜನಪದರು ಅಧ್ಯಕ್ಷ ಕಾಟಂನಲ್ಲೂರು ಪಾಪಣ್ಣ, ಗ್ರಾಪಂ ಮಾಜಿ ಅಧ್ಯಕ್ಷ ಜ್ಯೋತಿಪುರ ವೇಣು, ಚಿತ್ರನಟರಾದ ಮೂಗುಸುರೇಶ್, ಎಂ ಸುರೇಶ್, ಮಧುಸೂದನ್, ತಾವರೆಕೆರೆ ಶಿವಕುಮಾರ್, ಮುನಿರಾಜು ಬಿದರೆಅಗ್ರಹಾರ, ಶಿವಕುಮಾರ್ ಕಾಟಂನಲ್ಲೂರು, ವೆಂಕಟಾಚಲಪತಿ, ರಾಜಣ್ಣ, ಮಮತಾ, ಬಸವರಾಜು, ಕೃಷ್ಣಸುರೇಶ, ಜಿ.ಬಿ.ಚಂದ್ರಶೇಖರ್, ಬಾಗೇಪಲ್ಲಿ ಕೃಷ್ಣಮೂರ್ತಿ, ಪ್ರಭುದೇವ ಮುಂತಾದವರಿದ್ದರು.ಫೋಟೋ : 13 ಹೆಚ್ಎಸ್ಕೆ 1
ಹೊಸಕೋಟೆಯ ನಿಂಬೇಕಾಯಿಪುರದ ಜನಪದರು ಸಾಂಸ್ಕೃತಿಕ ವೇದಿಕೆ ಜನಪದರು ರಂಗಮಂದಿರದಲ್ಲಿ ಏರ್ಪಡಿಸಿದ್ದ ರಂಗಮಾಲೆ 100ರ ಪ್ರದರ್ಶನದ ಅಂಗವಾಗಿ ಹಮ್ಮಿಕೊಂಡಿದ್ದ ಮೂರು ದಿನಗಳ ನಾಟಕೋತ್ಸವವನ್ನು ಮಾಜಿ ಸಚಿವ ಅರವಿಂದ ಲಿಂಬಾವಳಿ ಉದ್ಘಾಟಿಸಿದರು.;Resize=(128,128))
;Resize=(128,128))
;Resize=(128,128))
;Resize=(128,128))