ಸಾರಾಂಶ
12ನೇ ಶತಮಾನದಲ್ಲಿ ಬಾಳಿ ಹೋದ ಶರಣರ ವಚನಗಳನ್ನು ಜನ ಮಾನಸದಲ್ಲಿ ಬಿತ್ತುವ ಕಾರ್ಯವನ್ನು ಶರಣು ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳು ಮಾಡಬೇಕು ಎಂದು ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗಾರ ಹೇಳಿದರು.
ಲಕ್ಷ್ಮೇಶ್ವರ: 12ನೇ ಶತಮಾನದಲ್ಲಿ ಬಾಳಿ ಹೋದ ಶರಣರ ವಚನಗಳನ್ನು ಜನ ಮಾನಸದಲ್ಲಿ ಬಿತ್ತುವ ಕಾರ್ಯವನ್ನು ಶರಣು ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆಗಳು ಮಾಡಬೇಕು ಎಂದು ಶರಣು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೆ.ಎ. ಬಳಿಗಾರ ಹೇಳಿದರು.
ಪಟ್ಟಣದ ಅಕ್ಕ ಮಹಾದೇವಿ ದೇವಸ್ಥಾನದಲ್ಲಿ ಗುರುವಾರ ಸಂಜೆ ಜರುಗಿದ ಪದಾಧಿಕಾರಿಗಳು ಸಭೆಯಲ್ಲಿ ಅವರು ಮಾತನಾಡಿದರು. ಬಸವಾದಿ ಶರಣರು ಬರೆದಿರುವ ವಚನಗಳು ಕನ್ನಡ ಸಾಹಿತ್ಯದ ಅಮೂಲ್ಯ ರತ್ನಗಳು. ಪ್ರತಿ ತಿಂಗಳಲ್ಲಿ ಎರಡು ಬಾರಿ ಶರಣು ಸಾಹಿತ್ಯ ಪರಿಷತ್ತಿನ ಗೋಷ್ಠಿಗಳು ನಡೆಯುವಂತಾಗುವ ಮೂಲಕ ಶರಣರ ವಚನಗಳ ಮಹತ್ವವನ್ನು ಇಂದಿನ ಮಕ್ಕಳಲ್ಲಿ ಬೆಳೆಸಬೇಕು. ಶರಣರ ನುಡಿಗಟ್ಟುಗಳನ್ನು ಕಂಠಪಾಠ ಮಾಡುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಶರಣರು ಕನ್ನಡ ಸಾಹಿತ್ಯಕ್ಕೆ ವಚನಗಳು ಮೂಲಕ ಚೈತನ್ಯ ತುಂಬುವ ಕೆಲಸ ಮಾಡಿದರು. ಶರಣರ ವಚನಗಳು ಎಂದೆಂದೂ ಅಳಿಸಲಾಗದ ಹಾಗೂ ಸಮಾಜದ ಅಂಕು ಡೊಂಕು ತಿದ್ದಿದ ಕಾರ್ಯ ಮಾಡುತ್ತಿವೆ. ಶರಣು ಸಾಹಿತ್ಯ ಪರಿಷತ್ತಿಗೆ ಸದಸ್ಯರನ್ನು ಮಾಡುವುದು, ದತ್ತಿ ನಿಧಿ ಸ್ಥಾಪನೆ ಮಾಡುವ ಮೂಲಕ ಶರಣರ ಚಿಂತನ ಮಂಥನ ನಡೆಸುವ ಮೂಲಕ ಜನ ಸಾಮಾನ್ಯರಲ್ಲಿ ವಚನಗಳು ಬಗ್ಗೆ ಆಸಕ್ತಿ ಮೂಡಿಸುವ ಕಾರ್ಯ ಮಾಡುವುದು ಅಗತ್ಯವಾಗಿದೆ.ಲಕ್ಷ್ಮೇಶ್ವರ ತಾಲೂಕಿನಲ್ಲಿ ಶರಣು ಸಾಹಿತ್ಯ ಪರಿಷತ್ತಿನ ಸಮ್ಮೇಳನ ನಡೆಯಲಿ ಎಂಬುದು ಎಲ್ಲರ ಆಶಯವಾಗಿದೆ. ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಶರಣು ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಚಿಂತನೆ ಮಾಡಲಾಗುತ್ತದೆ. ಜುಲೈ 2ರಂದು ವಚನ ಪಿತಾಮಹ ಫ.ಗು. ಹಳಕಟ್ಟಿ ಅವರು ಜನ್ಮ ದಿನ ಆಚರಿಸುವಂತೆ ಮನವಿ ಮಾಡಿದರು. ಈ ವೇಳೆ ಸಭೆಯಲ್ಲಿ ಗದಗ ಮಹಿಳಾ ಕದಳಿ ವೇದಿಕೆಯ ಅಧ್ಯಕ್ಷೆ ಸುಧಾ ಹುಚ್ಚಣ್ಣವರ ಗದಗ ಜಿಲ್ಲಾ ಮಹಿಳಾ ಕದಳಿ ಸಮಾವೇಶ ಮಾಡುವ ಕುರಿತು ಹಾಗೂ ಮುಂದಿನ ದಿನಗಳಲ್ಲಿ ಎರಡು ವೇದಿಕೆಗಳ ಆಶ್ರಯದಲ್ಲಿ ನಡೆಯುವ ಕಾಯಕ್ರಮಗಳ ರೂಪು ರೇಷೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ವೇಳೆ ಸಿ.ಜಿ. ಹಿರೇಮಠ, ತಾಲೂಕು ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ, ನಿರ್ಮಲಾ ಅರಳಿ, ಅಶ್ವಿನಿ ಅಂಕಲಕೋಟಿ, ಪ್ರತಿಮಾ ಮಹಾಜನ ಶೆಟ್ಟರ್, ಜೆ.ಎಸ್. ರಾಮಶೆಟ್ಟರ, ಮಾಲಾದೇವಿ ದಂದರಗಿ, ಬಸಣ್ಣ ಬೆಂಡಿಗೇರಿ ಮಾತನಾಡಿದರು. ಸಭೆಯಲ್ಲಿ ಬೂದಪ್ಪ ಅಂಗಡಿ, ಲತಾ ತಟ್ಟಿ, ಎಂ.ಎಂ. ಹಿರೇಮಠ. ಬಸವರಾಜ ಸಂಗಪ್ಪಶೆಟ್ಟರ, ಕವಿತಾ ಅರಳಿಹಳ್ಳಿ, ರತ್ನಾ ಕರ್ಕಿ. ಎ.ಎಂ. ಮಠದ. ಎಂ.ಕೆ. ಕಳ್ಳಿಮಠ, ಗಂಗಾಧರ ಅರಳಿ, ಪಾರ್ವತಿ ಕಳ್ಳಿಮಠ ಇದ್ದರು.
ಅಶ್ವಿನಿ ಅಂಕಲಕೋಟಿ ಕಾರ್ಯಕ್ರಮ ನಿರ್ವಹಿಸಿದರು. ಶೋಭಾ ಗಾಂಜಿ ವಂದಿಸಿದರು.