ಸಾರಾಂಶ
ಮನುಕುಲದ ಸೇವೆಯೇ ತನ್ನ ಉದ್ದೇಶ ಎಂದು ಕಾರ್ಯಯೋನ್ಮುಖವಾಗಿರುವ ಲಯನ್ಸ್ ಸಂಸ್ಥೆ ಸೇವೆ ಮಾಡುವುದರಲ್ಲಿ ಮಾದರಿಯಾಗಿದೆ. ಸಂಸ್ಥೆ ಸಮಾಜಮುಖಿಯಾಗಿ ಮಾನವೀಯ ನೆಲಗಟ್ಟಿನ ಮೇಲೆ ಕೆಲಸ ಮಾಡುತ್ತಿದೆ. ನಾವುಗಳು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜ ಸೇವೆಗೆ ಮೀಸಲಿಡಿಸಿದೆ.
ಕನ್ನಡಪ್ರಭ ವಾರ್ತೆ ಮದ್ದೂರು
ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಯಾಗಿ ಲಯನ್ಸ್ ಸಂಸ್ಥೆ ವಿಶ್ವದ 28 ದೇಶಗಳಲ್ಲಿ ಸಮಾಜಮುಖಿಯಾಗಿ ಸೇವೆ ಸಲ್ಲಿಸುತ್ತಿದೆ ಎಂದು ಸಂಸ್ಥೆ 1ನೇ ಜಿಲ್ಲಾ ಉಪರಾಜ್ಯಪಾಲ ಕೆ.ಎಲ್.ರಾಜಶೇಖರ್ ಹೇಳಿದರು.ಪಟ್ಟಣದ ಮದ್ದೂರು ಕ್ರೀಡಾ ಬಳಗದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ 2024 - 25 ನೇ ಸಾಲಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಲಿಂಗನದೊಡ್ಡಿ ರಾಮಕೃಷ್ಣ ಮತ್ತು ತಂಡದ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದರು. ಮನುಕುಲದ ಸೇವೆಯೇ ತನ್ನ ಉದ್ದೇಶ ಎಂದು ಕಾರ್ಯಯೋನ್ಮುಖವಾಗಿರುವ ಲಯನ್ಸ್ ಸಂಸ್ಥೆ ಸೇವೆ ಮಾಡುವುದರಲ್ಲಿ ಮಾದರಿಯಾಗಿದೆ. ಸಂಸ್ಥೆ ಸಮಾಜಮುಖಿಯಾಗಿ ಮಾನವೀಯ ನೆಲಗಟ್ಟಿನ ಮೇಲೆ ಕೆಲಸ ಮಾಡುತ್ತಿದೆ. ನಾವುಗಳು ಸಂಪಾದಿಸಿದ ಹಣದಲ್ಲಿ ಅಲ್ಪ ಹಣವನ್ನು ಸಮಾಜ ಸೇವೆಗೆ ಮೀಸಲಿಡಿಸಿದೆ ಎಂದರು.
ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದ ಎರಡನೇ ಜಿಲ್ಲಾ ರಾಜ್ಯಪಾಲ ಎಸ್. ಮತಿದೇವಕುಮಾರ್ ಮಾತನಾಡಿ, ರಾಜ್ಯದ ಸುಮಾರು 2 ಸಾವಿರ ಲಯನ್ಸ್ ಸಂಸ್ಥೆಗಳ ಸಹಯೋಗದಲ್ಲಿ ಮಹಿಳಾ ಸ್ವಾವಲಂಬನೆ, ಮಕ್ಕಳ ಆರೋಗ್ಯ, ಶೈಕ್ಷಣಿಕ ಅಭಿವೃದ್ಧಿ ಮತ್ತು ವಿಕಲಚೇತನ ರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಸ್ಥೆ ಕೆಲಸ ಮಾಡುತ್ತಿದೆ ಎಂದರು.ಕಾರ್ಯಕ್ರಮವನ್ನು ಜಿಲ್ಲಾ ಸಂಪುಟ ಸಲಹೆಗಾರ ಕೆ. ದೇವೇಗೌಡ ಉದ್ಘಾಟಿಸಿದರು.ಮಲ್ಟಿಪಲ್ ಕೌನ್ಸಿಲ್ ಚೇರ್ಮನ್ ಡಾ.ಎನ್. ಕೃಷ್ಣೆಗೌಡ, ಅಂತಾರಾಷ್ಟ್ರೀಯ ನಿರ್ದೇಶಕ ಎಸ್. ರಾಮಚಂದ್ರನ್, ವಳೆಗೆರೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ವಿ.ಆಶಾರಾಣಿ. ಡಾ.ಎ.ವಿ.ಉಮೇಶ್ ಅವರುಗಳನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ನಿಕಟ ಪೂರ್ವ ಅಧ್ಯಕ್ಷ ಎಂ.ಎಚ್.ಸಿದ್ದೇಗೌಡ ಅಧ್ಯಕ್ಷತೆ ವಹಿಸಿದ್ದರು. ಲೈಫ್ ಸಂಸ್ಥೆ ಪುನೀತ್ ಕುಮಾರ್, ವಿ. ಹರ್ಷ, ವಿ.ಕೆ. ಜಗದೀಶ, ಕೆ.ಎಸ್. ಸುನಿಲ್ ಕುಮಾರ್, ಹನುಮಂತಯ್ಯ, ಎಸ್. ಪಿ.ಆದರ್ಶ, ನಾರಾಯಣಸ್ವಾಮಿ, ಎಸ್. ಸುರೇಶ್, ನಿಕಟಪೂರ್ವ ಕಾರ್ಯದರ್ಶಿ ಸಿದ್ದಯ್ಯ, ಖಜಾಂಚಿ ಕೆ. ಆರ್. ದಿನೇಶ್ ಹಾಗೂ ನೂತನ ಸದಸ್ಯರುಗಳು ಇದ್ದರು.