ಸಾರಾಂಶ
ಬಾಗಲಕೋಟೆಯ ಜನಾಕ್ರೋಶ ಯಾತ್ರೆಯಲ್ಲಿ ಸ್ಥಳೀಯ ಬಿಜೆಪಿ ಬಣ ರಾಜಕೀಯ ಎದ್ದು ಕಂಡಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎದುರೇ ಎರಡು ಬಣಗಳ ನಡುವೆ ಪೈಪೋಟಿ ಕಂಡು ಬಂದಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಅವರ ಬಣಗಳ ನಡುವಿನ ಕಾರ್ಯಕರ್ತರ ಪೈಪೋಟಿಯಿಂದಾಗಿ ಜನಾಕ್ರೋಶ ಯಾತ್ರೆಯಲ್ಲಿ ತಮ್ಮ ತಮ್ಮ ನಾಯಕರ ಪರ ಕಾರ್ಯಕರ್ತರು ಘೋಷಣೆ ಕೂಗಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಬಾಗಲಕೋಟೆಯ ಜನಾಕ್ರೋಶ ಯಾತ್ರೆಯಲ್ಲಿ ಸ್ಥಳೀಯ ಬಿಜೆಪಿ ಬಣ ರಾಜಕೀಯ ಎದ್ದು ಕಂಡಿತು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಎದುರೇ ಎರಡು ಬಣಗಳ ನಡುವೆ ಪೈಪೋಟಿ ಕಂಡು ಬಂದಿತು. ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ್ ಅವರ ಬಣಗಳ ನಡುವಿನ ಕಾರ್ಯಕರ್ತರ ಪೈಪೋಟಿಯಿಂದಾಗಿ ಜನಾಕ್ರೋಶ ಯಾತ್ರೆಯಲ್ಲಿ ತಮ್ಮ ತಮ್ಮ ನಾಯಕರ ಪರ ಕಾರ್ಯಕರ್ತರು ಘೋಷಣೆ ಕೂಗಿದರು.ರಾಜ್ಯಾಧ್ಯಕ್ಷರ ಎದುರೇ ನಾಯಕರ ವೈಮನಸು, ಪರಸ್ಪರ ವಾಗ್ವಾದ ಸಹ ನಡೆಯಿತು. ಜನಾಕ್ರೋಶ ಯಾತ್ರೆ ಆರಂಭಕ್ಕೂ ಮೊದಲೇ ಶುರುವಾದ ಒಣ ರಾಜಕೀಯ ಒಂದೆಡೆಯಾದರೆ, ಬಿ.ವೈ.ವಿಜಯೇಂದ್ರ ಸ್ವಾಗತಕ್ಕೆ ನಿಂತ ಎಂಎಲ್ಸಿ ಪಿ.ಎಚ್.ಪೂಜಾರ ಪರ ಬಣವನ್ನು ಗಮನಿಸಿ ಎಂಎಲ್ಸಿ ಪಿ.ಎಚ್.ಪೂಜಾರ್ ಅವರನ್ನು ಕರೆಯಲು ಬಂದ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಅವರ ಜೊತೆಗೆ ಪೂಜಾರ್ ಪರ ಕೆಲ ಕಾರ್ಯಕರ್ತರು ಮಾತಿನ ಚಕಮಕಿ ನಡೆಸಿದರು.ನಂತರ ಡಾ.ಅಂಬೇಡ್ಕರ್ ಪ್ರತಿಮೆ ಬಳಿ ಎಂಎಲ್ಸಿ ಪಿ.ಎಚ್.ಪೂಜಾರ್ ಬಣ ತೆರಳಿತು. ಅಲ್ಲಿ ಮೊದಲೇ ಡಾ.ಅಂಬೇಡ್ಕರ್ ಪ್ರತಿಮೆಯ ಬಳಿ ಇದ್ದ ಮಾಜಿ ಶಾಸಕ ಡಾ.ಚರಂತಿಮಠ ಅವರ ಬಣದ ಕಾರ್ಯಕರ್ತರಿಂದ ಚರಂತಿಮಠ ಪರವಾಗಿ ಘೋಷಣೆ ಕೇಳಿ ಬಂತು. ತಮ್ಮ ತಮ್ಮ ನಾಯಕರ ಪರ ಪೈಪೋಟಿಗೆ ಬಿದ್ದ ಎರಡು ಬಣಗಳು ಸಹ ತಮ್ಮ ನಾಯಕರ ಪರ ಘೋಷಣೆ ಕೂಗಿ ಬಲಪ್ರದರ್ಶನಕ್ಕೆ ಮುಂದಾದರು.
ರಾಜ್ಯಾದ್ಯಕ್ಷ ವಿಜಯೇಂದ್ರ, ಕಾರಜೋಳ, ಚರಂತಿಮಠ ಅವರು ಮೊದಲು ಎತ್ತಿನ ಬಂಡಿ ಏರಿದ್ದರು. ಈ ವೇಳೆ ಜಾಗ ಸಿಗದೇ ಯಾತ್ರೆಯಿಂದ ಹಿಂದೆ ಸರಿಯಲು ಮುಂದಾದ ಪೂಜಾರ ಅವರನ್ನು ಮನವೊಲಿಸಿ ಮರಳಿ ಜನಾಕ್ರೋಶ ಯಾತ್ರೆಯ ವಾಹನವನ್ನು ಮುಖಂಡರು ಮುಂದುವರಿಸಿದರು.