ರಸ್ತೆ ನಿರ್ಮಿಸಿದ್ದಕ್ಕೆ ಸಚಿವೆಗೆ ಸ್ಥಳೀಯರ ಕೃತಜ್ಞತೆ

| Published : Jun 28 2024, 12:55 AM IST

ರಸ್ತೆ ನಿರ್ಮಿಸಿದ್ದಕ್ಕೆ ಸಚಿವೆಗೆ ಸ್ಥಳೀಯರ ಕೃತಜ್ಞತೆ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಬೆಳಗಾವಿ: ಹಿಂಡಲಗಾ ಗಣೇಶ್ ನಗರದ ಬಂಜಾರ ಕಾಲೋನಿಯ ರಸ್ತೆಗಳನ್ನು‌ ನಿರ್ಮಾಣ ಮಾಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಗುರುವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ:

ಹಿಂಡಲಗಾ ಗಣೇಶ್ ನಗರದ ಬಂಜಾರ ಕಾಲೋನಿಯ ರಸ್ತೆಗಳನ್ನು‌ ನಿರ್ಮಾಣ ಮಾಡಿಸಿದ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿಗಳು ಗುರುವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ನಿವಾಸಕ್ಕೆ ಆಗಮಿಸಿ ಕೃತಜ್ಞತೆ ಸಲ್ಲಿಸಿದರು.

ನಮ್ಮ ಬೇಡಿಕೆಗೆ ಸ್ಪಂದಿಸಿ ಅತ್ಯಂತ ತ್ವರಿತವಾಗಿ ರಸ್ತೆ ನಿರ್ಮಿಸುವ ಮೂಲಕ ಕಷ್ಟವನ್ನು ಪರಿಹರಿಸಿದ್ದೀರಿ. ನಿಮ್ಮ ಸಹಾಯಕ್ಕೆ ಧನ್ಯವಾದ. ನಿಮ್ಮಂತ ಜನಪ್ರತಿನಿಧಿಯನ್ನು ಪಡೆದಿದ್ದು ನಮ್ಮ ಸುಧೈವ ಎಂದು ನಾಗರಿಕರು ಹೇಳಿದರು.

ನಿಮ್ಮಿಂದಾಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ನಾಗರಿಕರಲ್ಲಿ ಹೊಸ ಆಶಾಕಿರಣ ಮೂಡಿದೆ. ವ್ಯವಸ್ಥೆಯಲ್ಲಿ ಭರವಸೆ ಮೂಡಿದೆ. ಹಾಗಾಗಿ ಋಣಿಯಾಗಿದ್ದೇವೆ ಎಂದು ತಿಳಿಸಿದರು.

ಈ ಸಮಯದಲ್ಲಿ ರಫಿಕ್ ಶೇಖ್, ಜಾನ್ಸನ್, ಎಸಯ್ಯ, ಜಾ‌ನ್ ದಾಸ್, ಅನುಶ್ರೀಯಾ ಕೋಲೆ, ಸಂಗೀತಾ ಕೋಟ್ರೆ, ಮೊಬಿನಾ ಸನದಿ, ಅನಿತಾ ಶಹಾಪೂರಕರ್, ಈಬೂ, ಸೂರ್ಯಕಾಂತ ದೋಶಿ, ಉತ್ತಮ ಜಾಮದಾರ್, ರಾಮಯ್ಯ, ಅರೀಫ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.