ಮಯೂರ ನರ್ತನಕ್ಕೆ ಗೆಜ್ಜೆ ಸಾತ್‌!

| Published : Oct 20 2023, 01:01 AM IST

ಮಯೂರ ನರ್ತನಕ್ಕೆ ಗೆಜ್ಜೆ ಸಾತ್‌!
Share this Article
  • FB
  • TW
  • Linkdin
  • Email

ಸಾರಾಂಶ

ನರ್ತಿಸುವ ನವಿಲಿಗೆ ಗೆಜ್ಜೆ ಸಾತ್ತ್‌
ನವಿಲಿನ ನರ್ತನಕ್ಕೆ ಸರಿಸಾಟಿಯಿಲ್ಲ, ಎಲ್ಲರ ಕಣ್ಮನ ಸೆಳೆಯುತ್ತದೆ. ಆದರೆ ಇಲ್ಲಿನ ಮಯೂರ ನರ್ತನಕ್ಕೆ ಗೆಜ್ಜೆಯ ನಾದವೂ ಸೇರಿದೆ. ಮಂಗಳೂರು ಹೊರವಲಯದ ನೀರುಮಾರ್ಗ ಮಾಣೂರು ಶ್ರೀ ಸುಬ್ರಹ್ಮಣ್ಯ ದೇಗುಲಕ್ಕೆ ಪ್ರತಿನಿತ್ಯ ಬಂದು ನರ್ತಿಸಿಸುವ ನವಿಲಿಗೆ ಇಲ್ಲಿನ ಅರ್ಚಕರು ಈಗ ಗೆಜ್ಜೆ ಕಟ್ಟಿದ್ದು, ನವಿಲು ಇನ್ನಷ್ಟು ಖುಷಿಯಿಂದ ನರ್ತನ ಮಾಡುತ್ತಿದೆ. ನವಿಲಿನ ಗೆಜ್ಜೆ ನರ್ತನದ ವಿಡಿಯೋವಿಗ ಈಗ ವೈರಲ್‌ ಆಗಿದೆ. ಹಿಂದೆ ಇದೇ ನವಿಲು ಅರ್ಚಕರ ಮನೆಗೆ ಬಂದು ನಿತ್ಯವೂ ಕುಣಿಯುವ ವಿಡಿಯೋ ವೈರಲ್‌ ಆಗಿತ್ತು.