ಕೊಪ್ಪಳ: ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ರಥೋತ್ಸವದಲ್ಲಿ 15 ದಿನ ನಡೆಯುತ್ತಿದ್ದ ಮಹಾದಾಸೋಹ ಸೇವೆಯನ್ನು ಈ ವರ್ಷ 21 ದಿನಗಳಿಗೆ ವಿಸ್ತರಿಸಲಾಗಿದೆ. ರಥೋತ್ಸವ ಮುನ್ನಾದಿನ ಆರಂಭವಾಗಿ ಅಮವಾಸ್ಯೆಗೆ ಕೊನೆಗೊಳ್ಳುತ್ತಿದ್ದ ದಾಸೋಹ ಈ ವರ್ಷ ವಾರ ಮೊದಲೇ ಆರಂಭಿಸುವ ಮೂಲಕ ಸುಮಾರು 21 ದಿನ ನಡೆಯಲಿದೆ.ಜ.21ರಿಂದಲೇ ಮಹಾದಾಸೋಹ ಆರಂಭವಾಗಲಿದೆ. ಅಮವಾಸ್ಯೆಯಂದು ಕೊನೆಗೊಳ್ಳಲಿದೆ. ಅಮವಾಸ್ಯೆ ನಂತರ ದಾಸೋಹ ನಿತ್ಯ ನಿರಂತರವಾಗಿ ಇದ್ದೇ ಇರುತ್ತದೆ.6 ಎಕರೆ ವಿಸ್ತಾರ:ಮಹಾದಾಸೋಹ ಸುಮಾರು 6 ಎಕರೆ ವಿಸ್ತಾರ ಪ್ರದೇಶದಲ್ಲಿ ಜರುಗಲಿವೆ. ಏಕಕಾಲಕ್ಕೆ ಸುಮಾರು 5-6 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.ರೊಟ್ಟಿ ಕೋಣೆ: ಅಜ್ಜನ ಜಾತ್ರೆ ರೊಟ್ಟಿ ಜಾತ್ರೆಯೆಂದೇ ಪ್ರಸಿದ್ಧ. ಬೃಹಾದಾಕಾರದ 45*50 ವಿಸ್ತೀರ್ಣದ ಎರಡು ಕೋಣೆಗಳು ನಿರ್ಮಾಣಗೊಂಡಿವೆ. ಈಗಾಗಲೇ ಮಹಾದಾಸೋಹದಲ್ಲಿ ರೊಟ್ಟಿ ಸಂಗ್ರಹಣಾ ಕಾರ್ಯ ಭರದಿಂದ ಸಾಗಿದೆ.ನೀರಿನ ವ್ಯವಸ್ಥೆ: 70 ನೀರಿನ ನಲ್ಲಿ ಇರುವ ಎರಡು ನೀರಿನ ಕಟ್ಟೆಗಳು, 50 ನೀರಿನ ನಲ್ಲಿ ಇರುವ ಕಟ್ಟೆಯೊಂದನ್ನು ಸಿದ್ಧಪಡಿಸಲಾಗಿದೆ. 250-300 ಭಕ್ತರು ಏಕಕಾಲಕ್ಕೆ ನೀರನ್ನು ಸೇವಿಸುವ ಬೃಹತ್ ವ್ಯವಸ್ಥೆ ಕಲ್ಪಿಸಲಾಗಿದೆ.ಪ್ರಸಾದ ನಿಲಯದ ಸುತ್ತ ಪೋಲಿಸ್ ಕಣ್ಗಾವಲು ಇದ್ದು, ತಂತಿ ಬೇಲಿ ಅಳವಡಿಸಲಾಗಿದೆ.
ಕೊಪ್ಪಳದ ಗವಿಸಿದ್ದೇಶ್ವರ ಜಾತ್ರೆಯಲ್ಲಿ ಈ ವರ್ಷ 21 ದಿನ ಮಹಾದಾಸೋಹ
ಮಹಾದಾಸೋಹ ಸುಮಾರು 6 ಎಕರೆ ವಿಸ್ತಾರ ಪ್ರದೇಶದಲ್ಲಿ ಜರುಗಲಿವೆ. ಏಕಕಾಲಕ್ಕೆ ಸುಮಾರು 5-6 ಸಾವಿರ ಭಕ್ತರು ಪ್ರಸಾದ ಸ್ವೀಕರಿಸಲು ವ್ಯವಸ್ಥೆ ಮಾಡಲಾಗಿದೆ. ಪುರುಷರಿಗೆ, ಮಹಿಳೆಯರಿಗೆ, ಗರ್ಭಿಣಿಯರಿಗೆ, ವಿಶೇಷಚೇತನರಿಗೆ, ಹಿರಿಯ ನಾಗರಿಕರಿಗೆ ಪ್ರತ್ಯೇಕ ಮಾರ್ಗದ ವ್ಯವಸ್ಥೆ ಮಾಡಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.