ಸಾರಾಂಶ
ಇ ತ್ಯಾಜ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು. ಪ್ರತಿವಾರ ಮೈಸೂರಿನ ವಿವಿಧ ಜಾಗಗಳಲ್ಲಿ ಇ- ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಮೈಸೂರು
ಇ- ತ್ಯಾಜ್ಯ ಇಂದು ಪ್ರಪಂಚದಲ್ಲಿ ಬಹು ಮುಖ್ಯವಾದ ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಲಯನ್ಸ್ ಜಿಲ್ಲೆ 317ಜಿ ಸಂಪುಟ ಕಾರ್ಯದರ್ಶಿ ಟಿ.ಎಚ್. ವೆಂಕಟೇಶ್ ತಿಳಿಸಿದರು.ಲಯನ್ಸ್ ಕ್ಲಬ್ ಆಫ್ ಮೈಸೂರ್ ಅಂಬಾಸಿಡರಸ್ ಆಯೋಜಿಸಿದ್ದ ಇ-ತ್ಯಾಜ್ಯ ಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇ ತ್ಯಾಜ್ಯದ ಬಗ್ಗೆ ಕಾಳಜಿ ವಹಿಸಿ ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಿದರೆ ಮುಂದೆ ಬಹುದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ಹೇಳಿದರು.
ಇ-ತ್ಯಾಜ್ಯ ಜಿಲ್ಲಾಧ್ಯಕ್ಷ ಮಕಾಳ ಶಿವಕುಮಾರ್ ಮಾತನಾಡಿ, ಪ್ರತಿವಾರ ಮೈಸೂರಿನ ವಿವಿಧ ಜಾಗಗಳಲ್ಲಿ ಇ- ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ ಎಂದರು.ಸಂಸ್ಥೆಯ ಅಧ್ಯಕ್ಷ ಎಚ್.ಸಿ. ಕಾಂತರಾಜು, ಕಾರ್ಯದರ್ಶಿ ಸಿ.ಆರ್. ದಿನೇಶ್, ಖಜಾಂಚಿ ಕೆ.ಟಿ. ವಿಷ್ಣು, ವಿ. ಶ್ರೀಧರ್, ಕೆ.ಆರ್. ಭಾಸ್ಕರಾನಂದಾ, ಎಚ್.ಕೆ. ಪ್ರಸನ್ನ, ರವಿಚಂದ್ರ, ಮಲ್ಲಿಕಾರ್ಜುನ್, ಮನು, ರವಿ, ಅಮರ ಭವಾನಿ, ಅರುಣ್ ಇದ್ದರು.