ಖೋಟಾ ನೋಟು ತಯಾರಿಸಿ ಚಲಾವಣೆ: ಆರೋಪಿಗಳ ಬಂಧನ

| Published : Jan 26 2024, 01:49 AM IST

ಸಾರಾಂಶ

ಖೋಟಾ ನೋಟು ತಯಾರಿಸಿ ಚಲಾಯಿಸುತ್ತಿದ್ದ 6 ಮಂದಿ ಆರೋಪಿಗಳ ಬಂಧಿಸಿರುವ ಪೊಲೀಸರು, 500 ರು. ಮುಖಬೆಲೆಯ ಎರಡು ಬದಿ ಅಚ್ಚು ಹಾಕಿರುವ 718, ಒಂದು ಬದಿ ಅಚ್ಚಾದ 570 ಹಾಗೂ 200 ರು. ಮುಖಬೆಲೆಯ 803 ಖೋಟಾ ನೋಟು ಸೇರಿ ಕೃತ್ಯಕ್ಕೆ ಬಳಸಿದ್ದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ.

ದಾವಣಗೆರೆ: ಖೋಟಾ ನೋಟು ತಯಾರಿಸಿ ಚಲಾಯಿಸುತ್ತಿದ್ದ 6 ಮಂದಿ ಆರೋಪಿಗಳ ಬಂಧಿಸಿರುವ ಪೊಲೀಸರು, 500 ರು. ಮುಖಬೆಲೆಯ ಎರಡು ಬದಿ ಅಚ್ಚು ಹಾಕಿರುವ 718, ಒಂದು ಬದಿ ಅಚ್ಚಾದ 570 ಹಾಗೂ 200 ರು. ಮುಖಬೆಲೆಯ 803 ಖೋಟಾ ನೋಟು ಸೇರಿ ಕೃತ್ಯಕ್ಕೆ ಬಳಸಿದ್ದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಮಾಹಿತಿ ನೀಡಿ ತಾಲೂಕಿನ ಕುಕ್ಕವಾಡದ ತಳವಾರ ಕುಬೇರಪ್ಪ, ಐಗೂರಿನ ಹರೀಶ, ಭದ್ರಾವತಿ ತಾಲೂಕು ದೊಡ್ಡಗೊಪ್ಪನಹಳ್ಳಿಯ ಜೆ.ರುದ್ರೇಶ, ಮೈಸೂರು ಟಿ.ನರಸೀಪುರ ತಾಲೂಕು ಮಾಕನಹಳ್ಳಿಯ ಮನೋಜ್ ಗೌಡ, ಕೆ.ಆರ್. ನಗರ ತಾಲೂಕು ಬೋರೆಕಲ್ಲಹಳ್ಳಿಯ ಸಂದೀಪ, ಹೊಳಲ್ಕೆರೆ ತಾಲೂಕು ಕಲ್ಕೆರೆ ಲಂಬಾಣಿ ಹಟ್ಟಿಯ ಕೃಷ್ಣನಾಯ್ಕ ಬಂಧಿತ ಆರೋಪಿಗಳಾಗಿದ್ದಾರೆ ಎಂದರು.

ಪ್ರಕರಣ ಬೇಧಿಸಿದ ಹರಿಹರ ಸಿಪಿಐ ಸುರೇಶ ಸಗರಿ, ಗ್ರಾಮಾಂತರ ಠಾಣೆಯ ಪಿಎಸ್‌ಐ ಬಿ.ಎಸ್.ಅರವಿಂದ್, ಅಬ್ದುಲ್ ಖಾದರ್ ಜಿಲಾನಿ, ದಾವಣಗೆರೆ ಡಿಸಿಆರ್‌ಬಿ ವಿಭಾಗದ ಸಿಬ್ಬಂದಿಗಳಾದ ಮಜೀದ್, ಅಂಜನೇಯ, ರಾಘವೇಂದ್ರ, ರಮೇಶ್ ನಾಯ್ಕ, ಬಾಲರಾಜ್, ಹರಿಹರ ವೃತ್ತ ಕಛೇರಿಯ ಮಹ್ಮದ್ ಇಲಿಯಾಜ್, ನಾಗರಾಜ, ಮುರುಳಿಧರ, ಹರಿಹರ ಗ್ರಾಮಾಂತರ ಠಾಣೆಯ ಸಿಬ್ಬಂದಿಯವರಾದ ರಮೇಶ್, ನೀಲಮೂರ್ತಿ, ಬಣಕಾರ ಶ್ರೀಧರ, ಗಂಗಾಧರ, ಸಿದ್ದಪ್ಪ ಹಾಗೂ ಜಿಲ್ಲಾ ಪೊಲೀಸ್ ಕಚೇರಿಯ ಜಾಧವ್, ರಾಘವೇಂದ್ರ, ಶಾಂತಕುಮಾರ್‌ಗೆ ಬಹುಮಾನ ಘೋಷಿಸಿದರು.