ಹೊಸ ರಥ ಅರ್ಪಿಸಿದ ಮಳಗಲಿ ದಂಪತಿ

| Published : May 17 2024, 12:30 AM IST

ಸಾರಾಂಶ

ಘಟಪ್ರಭಾ: ಸ್ಥಳೀಯ ಕಾಳಿಕಾದೇವಿ ದೇವಸ್ಥಾನಕ್ಕೆ ಮಲ್ಲಾಪೂರ ಪಿ.ಜಿ ನಿವಾಸಿ ಸಾಂವಕ್ಕ ಬಸವರಾಜ ಮಳಗಲಿ ದಂಪತಿ ಹೊಸ ರಥ ತಯಾರಿಸಿ ಅರ್ಪಿಸಿದರು. ಹೊಸ ರಥವನ್ನು ಮಲ್ಲಾಪೂರ ಪಿಜಿ ಪುಂಡಲಿಕ ಪತ್ತಾರ ಮನೆ ಬಳಿ ಅಲಂಕರಸಿ ಪೂಜೆ ವಿಧಿ ವಿಧಾನ, ಹೋಮ ಹವನಗಳನ್ನು ವಿಧಿವತ್ತಾಗಿ ಮಾಡಿ, ಭಕ್ತರ ಸಮೂಹ, ಸುಮಂಗಲೆಯರ ಆರತಿಗಳೊಂದಿಗೆ ಎಳೆದು ಕಾಳಿಕಾದೇವರ ಗುಡಿಗೆ ತರಲಾಯಿತು.

ಘಟಪ್ರಭಾ: ಸ್ಥಳೀಯ ಕಾಳಿಕಾದೇವಿ ದೇವಸ್ಥಾನಕ್ಕೆ ಮಲ್ಲಾಪೂರ ಪಿ.ಜಿ ನಿವಾಸಿ ಸಾಂವಕ್ಕ ಬಸವರಾಜ ಮಳಗಲಿ ದಂಪತಿ ಹೊಸ ರಥ ತಯಾರಿಸಿ ಅರ್ಪಿಸಿದರು. ಹೊಸ ರಥವನ್ನು ಮಲ್ಲಾಪೂರ ಪಿಜಿ ಪುಂಡಲಿಕ ಪತ್ತಾರ ಮನೆ ಬಳಿ ಅಲಂಕರಸಿ ಪೂಜೆ ವಿಧಿ ವಿಧಾನ, ಹೋಮ ಹವನಗಳನ್ನು ವಿಧಿವತ್ತಾಗಿ ಮಾಡಿ, ಭಕ್ತರ ಸಮೂಹ, ಸುಮಂಗಲೆಯರ ಆರತಿಗಳೊಂದಿಗೆ ಎಳೆದು ಕಾಳಿಕಾದೇವರ ಗುಡಿಗೆ ತರಲಾಯಿತು. ಬಂದ ಭಕ್ತರಿಗೆ ಮಹಾಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಡಾ.ವಿರುಪಾಕ್ಷಿ ಪತ್ತಾರ, ಉಮೇಶ ಶಿರಾಳಕರ, ಪಾಂಡುರಂಗ ಪೋತದಾರ, ಗಂಗಾದರ ಬಡಕುಂದ್ರಿ, ಕೆಂಚಪ್ಪ ಪಾಟೀಲ, ಮಲ್ಲಪ್ಪ ಹುಕ್ಕೇರಿ, ಕೆಂಪಣ್ಣ ಕರೋಶಿ, ಮಾರುತಿ ವಿಜಯನಗರ, ಬಸವರಾಜ ಹತ್ತರವಾಟ, ಸೇರಿದಂತೆ ಅನೇಕರು ಇದ್ದರು.