ಕನ್ನಡಪ್ರಭ ವಾರ್ತೆ ಮಂಗಳೂರು

ಕೇರಳದಲ್ಲಿ ಮಲೆಯಾಳ ಭಾಷಾ ಕಡ್ಡಾಯ ಮಸೂದೆ ವಿರೋಧಿ ಹೋರಾಟ ಸಮಿತಿ ವತಿಯಿಂದ ಶಾಸಕರಾದ ಎಂ. ರಾಜಗೋಪಾಲ್, ಎ. ಕೆ. ಎಂ. ಅಶ್ರಫ್, ಸಿ. ಎಚ್. ಕುಞಂಬು, ಇ. ಚಂದ್ರಶೇಖರನ್ ಹಾಗೂ ಎನ್. ಎ. ನೆಲ್ಲಿಕುನ್ನು ಅವರಿಗೆ ಶನಿವಾರ ಮನವಿ ಸಲ್ಲಿಸಲಾಯಿತು.

ನಿಯೋಗದಲ್ಲಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಮುರಲೀಧರ ಬಳ್ಳಕುರಾಯ, ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಟಿ. ಶಂಕರನಾರಾಯಣ ಭಟ್, ಎ. ಆರ್. ಸುಬ್ಬಯಕಟ್ಟೆ ಇದ್ದರು.