ವ್ಯವಹಾರದ ಅರಿವು ಮೂಡಿಸಲು ಮಾರ್ಕೆಟ್ ಮೇಳ ಸಹಕಾರಿ: ಡಾ. ಮೂಡಲಗಿರಿಯಪ್ಪ

| Published : Nov 10 2025, 12:15 AM IST

ವ್ಯವಹಾರದ ಅರಿವು ಮೂಡಿಸಲು ಮಾರ್ಕೆಟ್ ಮೇಳ ಸಹಕಾರಿ: ಡಾ. ಮೂಡಲಗಿರಿಯಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರುವಿದ್ಯಾರ್ಥಿಗಳಲ್ಲಿ ಜ್ಞಾನ, ಕ್ರಿಯಾಶೀಲತೆ, ವ್ಯವಹಾರ ಕುರಿತು ಅರಿವು ಮೂಡಿಸಲು ಮಾರ್ಕೆಟ್ ಮೇಳ ಸಹಕಾರಿಯಾಗಲಿದೆ ಎಂದು ಪ್ರಾಂಶುಪಾಲ ಡಾ. ಮೂಡಲಗಿರಿಯಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ವಿದ್ಯಾರ್ಥಿಗಳಲ್ಲಿ ಜ್ಞಾನ, ಕ್ರಿಯಾಶೀಲತೆ, ವ್ಯವಹಾರ ಕುರಿತು ಅರಿವು ಮೂಡಿಸಲು ಮಾರ್ಕೆಟ್ ಮೇಳ ಸಹಕಾರಿಯಾಗಲಿದೆ ಎಂದು ಪ್ರಾಂಶುಪಾಲ ಡಾ. ಮೂಡಲಗಿರಿಯಪ್ಪ ಹೇಳಿದರು.

ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಪ್ರಾಧ್ಯಾಪಕರು ಆಯೋಜಿಸಿದ್ದ ಮಾರ್ಕೆಟ್ ಮೇಳ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಬದುಕು, ಚಟುವಟಿಕೆಗಳನ್ನು ಅರ್ಥ ಮಾಡಿಸಲು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಸ್ವಉದ್ಯೋಗ ಸ್ಥಾಪಿಸಿ ವ್ಯಾಪಾರ ವಹಿವಾಟು ನಡೆಸಲು ಪೂರಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಮಾರ್ಕೆಟ್ ಮೇಳ ಆಯೋಜಿಸಲಾಗಿದೆ ಎಂದರು.ವಿದ್ಯಾರ್ಥಿಗಳನ್ನು ವ್ಯಾವಹಾರಿಕ ಬದುಕಿನ ಬಗ್ಗೆ ಹುರಿದುಂಬಿಸಲು ಈ ಮಾರ್ಕೆಟ್ ಮೇಳ ಸಹಕಾರಿ. ವಿದ್ಯಾರ್ಥಿಗಳು ಇದರ ಸದುಪಡಿಸಿಕೊಳ್ಳಬೇಕೆಂದು ತಿಳಿಸಿದರು.ಉಪನ್ಯಾಸಕ ನಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರಗಳ ಕುರಿತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ರಿಟೇಲ್ ಗಲಾ ಎಂಬ ವಿನೂತನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.ವಿವಿಧ ರೀತಿ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ 13 ಮಳಿಗೆಗಳನ್ನು ನಿರ್ಮಿಸಲಾಗಿದೆ. ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿ ಗಳು ಒಗ್ಗಟ್ಟಿನಿಂದ ಭಾಗವಹಿಸಿದ್ದು, ವಿಶೇಷವಾಗಿ ಈ ಮಾರ್ಕೆಟ್ ಮೇಳದಲ್ಲಿ ಮನೆಯಲ್ಲಿ ಬೆಳೆದ ಪದಾರ್ಥ ಹೆಚ್ಚು ಬಳಕೆ ಮಾಡಲಾಗಿದೆ.ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವ ಕಾರಣದಿಂದ ಈ ಮೇಳ ಆಯೋಜನೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, ನಮಗೆ ರಿಟೇಲ್ ಮ್ಯಾನೇಜ್‌ಮೆಂಟ್ ಎಂಬ ವಿಷಯವಿದ್ದು, ಅದಕ್ಕೆ ಪೂರಕವಾಗಿ ಮಾರ್ಕೆಟ್ ಮೇಳದ ಮೂಲಕ ಆಚರಣೆ ಮಾಡುತ್ತಿದ್ದೇವೆ. ಇಲ್ಲಿ ಅಹಾರ ಪದಾರ್ಥ, ತರಕಾರಿ, ಮನೆಯಲ್ಲಿ ಕೈಯಿಂದ ತಯಾರಿ ಸಿದ ವಸ್ತುಗಳು ಮಾರಾಟಕ್ಕೆ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಅನಿಸಿಕೆ ಹಂಚಿಕೊಂಡರು.ಕಾರ್ಯಕ್ರಮದಲ್ಲಿ ದೀಕ್ಷಿತ್‌ ಕುಮಾರ್, ಪ್ರಾಧ್ಯಾಪಕರಾದ ಲೋಕೇಗೌಡ, ಪೃಥ್ವಿ, ಹೇಮಮಾಲಿನಿ ಉಪಸ್ಥಿತರಿದ್ದರು.

9 ಕೆಸಿಕೆಎಂ 1ಚಿಕ್ಕಮಗಳೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಾರ್ಕೆಟ್ ಮೇಳ ನಡೆಯಿತು.