ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಮನಸ್ಸು, ಸಮಾಜ ಶುದ್ಧಿ

| Published : Nov 11 2024, 12:49 AM IST / Updated: Nov 11 2024, 12:50 AM IST

ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಮನಸ್ಸು, ಸಮಾಜ ಶುದ್ಧಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊಸದುರ್ಗ: ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಮನಸ್ಸು ಹಾಗೂ ಸಮಾಜ ಎರಡು ಶುದ್ಧಿಯಾಗುತ್ತದೆ ಎಂದು ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಹೊಸದುರ್ಗ: ಸಾಹಿತ್ಯ ರಚನೆಯಲ್ಲಿ ತೊಡಗುವುದರಿಂದ ಮನಸ್ಸು ಹಾಗೂ ಸಮಾಜ ಎರಡು ಶುದ್ಧಿಯಾಗುತ್ತದೆ ಎಂದು ಮಾಜಿ ಸಚಿವೆ, ಸಾಹಿತಿ ಬಿ.ಟಿ.ಲಲಿತಾ ನಾಯಕ್ ಹೇಳಿದರು.

ಪಟ್ಟಣದ ಎಸ್‌ಎಲ್‌ವಿ ಕನ್ವೆನ್ಷನ್ ಹಾಲ್‌ನಲ್ಲಿ ಅಪ್ಪ ಅವ್ವ ಅಕ್ಷರ ಪಬ್ಲಿಕೇಶನ್ ವತಿಯಿಂದ ಆಯೋಜಿಸಲಾಗಿದ್ದ 15 ಪುಸ್ತಕಗಳ ಲೋಕಾರ್ಪಣೆ, ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪ್ರದಾನ, ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಮತ, ಧರ್ಮ ಎಲ್ಲವನ್ನೂ ಬಿಟ್ಟು ನಾವೆಲ್ಲ ಒಂದೇ ಎಂದು ಕೊಂಡಾಗ ಮಾತ್ರ ಸಾಹಿತ್ಯದ ಕಡೆ ನಮ್ಮ ಒಲವು ಹೋಗುತ್ತದೆ. ಮನುಷ್ಯನಿಗೆ ಹಲವಾರು ಮಾನಸಿಕ ರೋಗಗಳಿವೆ. ಮತ್ತೊಬ್ಬರ ಬೆಳವಣಿಗೆ ಅಭಿವೃದ್ಧಿ ಸಹಿಸಲು ಆಗದಂತಹ ರೋಗ ಎಲ್ಲರಲ್ಲೂ ಇರುತ್ತದೆ. ಇಂತಹ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳನ್ನು ಮೆಟ್ಟಿ ನಿಂತು ಛಲದಿಂದ ಮುಂದೆ ಸಾಗಬೇಕು ಎಂದರು.

ಬಂಡಾಯ ಸಾಹಿತಿಗಳು ಎಂದರೆ ಮೂಢನಂಬಿಕೆಗಳನ್ನು ವಿರೋಧಿಸುವವರು. ಕೇವಲ ಉಪದೇಶ ಕೊಡುವುದು ಅಷ್ಟೇ ಅಲ್ಲ ನಮ್ಮ ಬದುಕೇ ಇತರರಿಗೆ ಸಂದೇಶವಾಗಬೇಕು. ನಾವು ಏನನ್ನು ಹೇಳುತ್ತೇವೋ ಅದನ್ನು ಮಾಡಬೇಕು ಅದನ್ನೇ ಪಾಲಿಸಬೇಕು. ಉತ್ತಮ ಹವ್ಯಾಸಗಳು ಮನುಷ್ಯನ ಬದುಕನ್ನು ಸಾರ್ಥಕಗೊಳಿಸುತ್ತವೆ ಎಂದು ಹೇಳಿದರು.

ಕನಕ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಎಚ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

ಇದೇ ವೇಳೆ ಕನ್ನಡ ನಾಡು, ನುಡಿಗೆ ಸೇವೆ ಸಲ್ಲಿಸಿದ 69 ಸಾಧಕರಿಗೆ ಸುವರ್ಣ ಕರ್ನಾಟಕ ಸಂಭ್ರಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿಯಲ್ಲಿ ಕನ್ನಡ ವಿಷಯದಲ್ಲಿ ಪೂರ್ಣ ಅಂಕಗಳಿಸಿದ ಹಾಗೂ ಎನ್.ಎಂ.ಎಂ.ಎಸ್ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಅಪ್ಪಅವ್ವ ಅಕ್ಷರ ಪಬ್ಲಿಕೇಶನ್ ಮುಖ್ಯಸ್ಥ ಮಾಚೇನಹಳ್ಳಿ ರಾಮಕೃಷ್ಣ, ಸಾಹಿತಿ ಮಂಜುನಾಥ ಮಾಗೋದಿ, ಆರ್.ಪಿ.ಕಾಲೇಜು ಪ್ರಾಂಶುಪಾಲ ರಮಣ ಪ್ರಸಾದ್, ಸಂಪಾದಕಿ ಬಿ.ವೈ.ವಾಣಿಶ್ರೀ, ಡಾ.ಸಂಜಯ್, ಸಮಾಜ ಸೇವಕ ತುಂಬಿನಕೆರೆ ಬಸವರಾಜ್ ಸೇರಿದಂತೆ ಮತ್ತಿತರರಿದ್ದರು.