ಸಾರಾಂಶ
ಮೈಸೂರು : ಸಿದ್ದರಾಮಯ್ಯ ಸಿಎಂ ಸ್ಥಾನದಲ್ಲಿದ್ದಾರೆ. ಅವರೇ ದಸರಾ ಉದ್ಘಾಟನೆ ಮಾಡುತ್ತಾರೆ. ಅವರೇ ಸಿಎಂ ಸ್ಥಾನದಲ್ಲಿ ಇರುತ್ತಾರೆ. ಇದು ಸತ್ಯ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ತಿಳಿಸಿದರು.
ಈ ಬಾರಿ ದಸರಾವನ್ನ ಸಿದ್ದರಾಮಯ್ಯ ಉದ್ಘಾಟನೆ ಮಾಡುವುದಿಲ್ಲ ಎಂಬ ಆರ್. ಅಶೋಕ್ ಹೇಳಿಕೆಗೆ ಭಾನುವಾರ ಪ್ರತಿಕ್ರಿಯಿಸಿದ ಅವರು, ಆರ್. ಅಶೋಕ್ ಕಾಂಗ್ರೆಸ್ ಹೈಕಮಾಂಡ್ ಅಲ್ಲ. ಆರ್. ಅಶೋಕ ಕೇವಲ ವಿರೋಧ ಪಕ್ಷದ ನಾಯಕ ಅಷ್ಟೇ. ಅವರಿಗೂ ಕಾಂಗ್ರೆಸ್ ಗೆ ಏನು ಸಂಬಂಧ ಹೇಳಿ ಎಂದು ತಿರುಗೇಟು ನೀಡಿದರು.ಆ ರೀತಿಯ ಯಾವ ಚರ್ಚೆಗಳು ಏನು ನಡೆದಿಲ್ಲ. ಅಧಿಕಾರದ ಯಾವ ಒಪ್ಪಂಗಳಿದೆ ಎಂಬುದು ಯಾವುದು ನನ್ನ ಗಮನಕ್ಕೆ ಬಂದಿಲ್ಲ.
5 ವರ್ಷವೂ ಕಾಂಗ್ರೆಸ್ ಸರ್ಕಾರ ಸ್ಥಿರವಾಗಿಯೇ ಇರುತ್ತದೆ. ನನ್ನ ಆತ್ಮ ವಿಶ್ವಾಸದ ಪ್ರಕಾರವೂ ಕಾಂಗ್ರೆಸ್ ಸರ್ಕಾರ ಗಟ್ಟಿಯಾಗಿರುತ್ತದೆ ಎಂದು ಅವರು ಹೇಳಿದರು.ಸಿದ್ದರಾಮಯ್ಯ ಸಿಎಂ ಆಗಿ ಇರುತ್ತಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾರೆ, ಇರುತ್ತಾರೆ ಕೂಡ. ಆನೆ ಹೋಗುತ್ತಿರುತ್ತದೆ ಅದನೋ ಬೀಳುತ್ತೆ ಅಂಥ ಕಾಯುವ ಸ್ಥಿತಿಯಲ್ಲಿ ಬಿಜೆಪಿ ಇದೆ. ಅದು ಬೀಳುವುದಿಲ್ಲ, ಇವರು ಕಾಯುವುದು ಬಿಡುವುದಿಲ್ಲ ಎಂದು ಅವರು ಕುಟುಕಿದರು.
ಶಾಸಕರು ಯಾವ ಅರ್ಥದಲ್ಲಿ ಮೂರು ತಿಂಗಳಲ್ಲಿ ಕ್ರಾಂತಿ ಎಂದು ಹೇಳಿದ್ದಾರೆ ಅವರನ್ನೇ ಕೇಳಿ. ಕೆಲವು ಶಾಸಕರು ಅವರವರ ಅನೂಕಲಕ್ಕೆ ತಕ್ಕಂತೆ ಹೇಳಿಕೆ ನೀಡಿರಬಹುದು. ಅದಕ್ಕೂ ನಮಗೂ ಸಂಬಂಧ ಇಲ್ಲ. ರಾಜಕೀಯವಾಗಿ ಕ್ರಾಂತಿಗಳು ಯಾವಗಲೂ ನಡೆಯುತ್ತಿರುತ್ತದೆ. ಸಂಕ್ರಾಂತಿಯನ್ನ ಜೋರಾಗಿ ಮಾಡೋಣಾ ಬಿಡಿ ಎಂದು ಅವರು ತಿಳಿಸಿದರು.