ಬಡಕುಟುಂಬಕ್ಕೆ ₹5 ಲಕ್ಷ ನೆರವು ನೀಡಿದ ಸಚಿವ ಜಮೀರ್

| Published : May 26 2025, 12:43 AM IST

ಸಾರಾಂಶ

ಆಪ್ತರೊಬ್ಬರ ಮಕ್ಕಳ ಮದುವೆಗೆಂದು ನಗರಕ್ಕೆ ಆಗಮಿಸಿದ್ದ ವಕ್ಫ್ ಸಚಿವ ಜಮೀರ್ ಅಹಮ್ಮದ್ ತಮ್ಮ ಬಳಿ ನೆರವು ಯಾಚಿಸಿದ ಬಡ ಕುಟುಂಬವೊಂದರ ಮಕ್ಕಳ ಮದುವೆ ಖರ್ಚಿಗೆಂದು ಸ್ಥಳದಲ್ಲೇ ₹5 ಲಕ್ಷ ಆರ್ಥಿಕ ಸಹಾಯ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

- ಮಕ್ಕಳ ಮದುವೆ, ಜೀವನ ನಿರ್ವಹಣೆ ಕಷ್ಟವೆಂದು ಕಣ್ಣೀರಿಟ್ಟ ಕುಟುಂಬ - ಆಪ್ತ ಮುಖಂಡನ ಮಗನ ಮದುವೆಗೆಂದು ಬೆಂಗಳೂರಿನಿಂದ ಹೆಲಿಕಾಫ್ಟರ್‌ನಲ್ಲಿ ಬಂದಿದ್ದ ಸಚಿವ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಆಪ್ತರೊಬ್ಬರ ಮಕ್ಕಳ ಮದುವೆಗೆಂದು ನಗರಕ್ಕೆ ಆಗಮಿಸಿದ್ದ ವಕ್ಫ್ ಸಚಿವ ಜಮೀರ್ ಅಹಮ್ಮದ್ ತಮ್ಮ ಬಳಿ ನೆರವು ಯಾಚಿಸಿದ ಬಡ ಕುಟುಂಬವೊಂದರ ಮಕ್ಕಳ ಮದುವೆ ಖರ್ಚಿಗೆಂದು ಸ್ಥಳದಲ್ಲೇ ₹5 ಲಕ್ಷ ಆರ್ಥಿಕ ಸಹಾಯ ಮಾಡುವ ಮೂಲಕ ಗಮನ ಸೆಳೆದರು.

ನಗರದ ಪ್ರತಿಷ್ಠಿತ ಕನ್ವೆನ್ಷನ್‌ ಹಾಲ್‌ನಲ್ಲಿ ಆಪ್ತ ಮುಖಂಡರೊಬ್ಬರ ಮಗನ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಹೆಲಿಕಾಫ್ಟರ್‌ನಲ್ಲಿ ಸಚಿವ ಜಮೀರ್ ಅಹಮ್ಮದ್ ಬಂದಿದ್ದರು. ಮದುವೆ ಮುಗಿಸಿಕೊಂಡು ಬಾಪೂಜಿ ಎಂಬಿಎ ಹೆಲಿಪ್ಯಾಡ್‌ಗೆ ವಾಪಸಾಗುತ್ತಿದ್ದರು. ಈ ವೇಳೆ ಬಡ ಮುಸ್ಲಿಂ ಕುಟುಂಬವೊಂದು ಸಚಿವರ ಬಳಿ ಮಕ್ಕಳ ಮದುವೆ ಹಾಗೂ ಕುಟುಂಬ ನಿರ್ವಹಣೆ ಬಗ್ಗೆ ಅಳಲನ್ನು ತೋಡಿಕೊಂಡಿತು.

ಬಡ ಕುಟುಂಬದ ಸಂಕಷ್ಟಕ್ಕೆ ಮರುಗಿದ ಸಚಿವ ಜಮೀರ್ ಅಹಮ್ಮದ್ ಸ್ಥಳದಲ್ಲೇ ₹5 ಲಕ್ಷ ಮೌಲ್ಯದ ನೋಟಿನ ಕಟ್ಟುಗಳನ್ನು ಬಡಕುಟುಂಬಕ್ಕೆ ಹಸ್ತಾಂತರಿಸಿದರು. ಈ ಹಣದಲ್ಲಿ ಮಕ್ಕಳ ಮದುವೆ ಮಾಡಿ, ನೆಮ್ಮದಿಯಿಂದ ಜೀವನ ನಿರ್ವಹಣೆ ಮಾಡುವಂತೆ ಶುಭ ಹಾರೈಸಿ, ಎಲ್ಲರ ಮನವನ್ನು ಗೆದ್ದರು. ಆರ್ಥಿಕ ನೆರವು ಕೋರಿದ ಕುಟುಂಬ ಕನಸು ಮನಸ್ಸಿನಲ್ಲಿ ಊಹಿಸಿರದಷ್ಟು ಹಣದ ನೆರವು ಜಮೀರ್‌ ನೀಡುವ ಮೂಲಕ ಮಾನವೀಯತೆ ಮೆರೆದರು.

- - - -25ಕೆಡಿವಿಜಿ3, 4, 5, 6:

ದಾವಣಗೆರೆ ಬಾಪೂಜಿ ಎಂಬಿಎ ಹೆಲಿಪ್ಯಾಡ್‌ನಲ್ಲಿ ಭಾನುವಾರ ಬಡ ಮುಸ್ಲಿಂ ಕುಟುಂಬವೊಂದು ಮಕ್ಕಳ ಮದುವೆ, ಜೀವನ ನಿರ್ವಹಣೆ ಸಂಕಷ್ಟ ತೋಡಿಕೊಂಡ ಹಿನ್ನೆಲೆ ಸಚಿವ ಜಮೀರ್ ಅಹಮ್ಮದ್ ₹5 ಲಕ್ಷ ನೋಟಿನ ಕಂತೆಗಳನ್ನು ನೀಡಿ ಮಾನವೀಯತೆ ಮೆರೆದರು.