ಸಾರಾಂಶ
ಜಂಬೂರು ಮುಖ್ಯರಸ್ತೆಯಿಂದ ಮಾದಿಹಳ್ಳಿಗೆ ಹೋಗುವ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. 4 ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಹೇಮಾವತಿ ನೀರಾವರಿ ಯೋಜನೆಯಿಂದ 60 ಲಕ್ಷ ರು. ಹಣ ಬಿಡುಗಡೆಯಾಗಿತ್ತು. ತಾಂತ್ರಿಕ ದೋಷದ ಕಾರಣ ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು.
ಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಜಂಬೂರು ಗ್ರಾಮದ ಸಮುದಾಯ ಭವನದ ಅಭಿವೃದ್ಧಿಗೆ ಮಾಜಿ ಪ್ರಧಾನಿ ದೇವೇಗೌಡರಿಂದ 50 ಲಕ್ಷ ರು. ಹಣ ಬಿಡುಗಡೆ ಮಾಡಿಸಲಾಗಿತ್ತು ಎಂದು ಶಾಸಕ ಸಿ .ಎನ್. ಬಾಲಕೃಷ್ಣ ಗುರುವಾರ ತಿಳಿಸಿದರು.ಹೋಬಳಿಯ ಜಂಬೂರು ಗ್ರಾಮದಲ್ಲಿ ಜಂಬೂರು ಮುಖ್ಯರಸ್ತೆಯಿಂದ ಮಾದಿಹಳ್ಳಿಗೆ ಹೋಗುವ ಡಾಂಬರ್ ರಸ್ತೆ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು. 4 ವರ್ಷಗಳ ಹಿಂದೆ ಈ ರಸ್ತೆ ನಿರ್ಮಾಣ ಕಾಮಗಾರಿಗೆ ಹೇಮಾವತಿ ನೀರಾವರಿ ಯೋಜನೆಯಿಂದ 60 ಲಕ್ಷ ರು. ಹಣ ಬಿಡುಗಡೆಯಾಗಿತ್ತು. ತಾಂತ್ರಿಕ ದೋಷದ ಕಾರಣ ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ಜಂಬೂರು ಗ್ರಾಮದ ವಿದ್ಯುತ್ ಕಂಬಗಳು ಲೈನ್ ಅಳವಡಿಸಲು 40 ಲಕ್ಷ ಹಣ ಬಿಡುಗಡೆ ಮಾಡಿಸಲಾಗಿತ್ತು ಪುರಾಣ ಪ್ರಸಿದ್ಧ ಶ್ರೀ ಜಕ್ಕೇಶ್ವರ ಸ್ವಾಮಿ ಹಾಗೂ ಕೋಟೆ ಮಾರಮ್ಮ ದೇವಾಲಯಗಳ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಸಹಕಾರ ನೀಡುವ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹುಲಿಕೆರೆ ಸಂಪತ್ ಕುಮಾರ್, ಮುಖಂಡರಾದ ಉದ್ಯಮಿ ಪವಿತ್ರ, ಅಡಗೂರು ಲೋಹಿತ್, ಶಂಕರ್, ಅಣ್ಣಯ್ಯ, ಅರ್ಚಕರಾದ ಕೃಷ್ಣಮೂರ್ತಿ, ಸೋಮಣ್ಣ, ಶೃತಿ ಜೆ.ಎನ್. ಮಹೇಶ್, ರಮೇಶ್, ಧರಣಿ ಕುಮಾರ್, ಗುರುರಾಜ್, ಅಪ್ಪಾಜಿ, ಮಂಜು, ನಟರಾಜ, ಹೊನ್ನೇಗೌಡ, ಜಯರಾಮ್, ಜೆ.ಜೆ. ಕುಮಾರ್, ಮಂಜು, ಧರಣಿ, ನಂಜುಂಡಿ, ಇತರರು ಹಾಜರಿದ್ದರು.