ಸಾರಾಂಶ
ಕನ್ನಡಪ್ರಭ ವಾರ್ತೆ ಹರಿಹರ
ಹರಿಹರ ಕ್ಷೇತ್ರದ ಬಿಜೆಪಿ ಶಾಸಕ ಬಿ.ಪಿ.ಹರೀಶ್ ನಾಪತ್ತೆಯಾಗಿದ್ದಾರೆ. ಹುಡುಕಿ ಕೊಡಿ ಎಂದು ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಪ್ರವೀಣ್ ಕುಮಾರ್ ಎಸ್.ಕೆ. ವ್ಯಂಗ್ಯವಾಡಿದರು.ನಗರದ ರೈಲ್ವೆ ಮತ್ತು ಬಸ್ ನಿಲ್ದಾಣದಲ್ಲಿ ಶಾಸಕರು ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ಅಂಟಿಸುವ ಮೂಲಕ ಹುಡುಕಿಕೊಡುವಂತೆ ತಿಳಿಸಿದರು. ಕಳೆದ ಹಲವು ದಿನಗಳಿಂದ ಶಾಸಕ ಬಿ.ಪಿ.ಹರೀಶ್ ಅವರು ಕ್ಷೇತ್ರದಲ್ಲಿ ಕಾಣುತ್ತಿಲ್ಲ. ಕೇವಲ ಮಾಧ್ಯಮಗಳ ಮುಂದೆ ಬಂದು ಮತ್ತೆ ನಿಗೂಢವಾಗಿ ನಾಪತ್ತೆಯಾಗುತ್ತಿದ್ದಾರೆ ಎಂದು ಪ್ರವೀಣ್ ಕುಮಾರ್ ಆರೋಪಿಸಿದರು. ಹರಿಹರ ಕ್ಷೇತ್ರದ ಜನರು ಅವರನ್ನು ಗೆಲ್ಲಿಸಿ ಶಾಸಕರನ್ನಾಗಿ ಮಾಡಿದ್ದು, ಇವರು ಜನರ ಸೇವೆ ಮಾಡದೇ ಮಾದ್ಯಮಗಳ ಮುಂದೆ ಪೇಪರ್ ಹುಲಿಯಂತೆ ಬಂದು ಹೋಗುತ್ತಿದ್ದಾರೆ. ಶಾಸಕರನ್ನು ಕಾಣಬೇಕೆಂದರೆ, ಜನರಿಗೆ ಕಷ್ಟವಾಗುತ್ತಿದೆ ಎಂದರು.
ಹರಿಹರ ಕ್ಷೇತ್ರದಲ್ಲಿ ವಾಸವಿರದೇ, ದಾವಣಗೆರೆ ನಗರದಲ್ಲಿ ವಾಸವಿದ್ದು, ಕ್ಷೇತ್ರದ ಜನರಿಗೆ ಅಮಾವಾಸ್ಯೆ, ಹುಣ್ಣಿಮೆ ಎಂಬಂತೆ ಆಗಿದ್ದಾರೆ. ಇವರು ಎಲ್ಲೇ ಕಂಡರೂ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.ಕ್ಷೇತ್ರದ ಅಭಿವೃದ್ಧಿ ಕೆಲಸಗಳು ಕುಂಠತಗೊಂಡಿವೆ. ಜನರು ಶಾಸಕರನ್ನು ಕಾಣುವುದು ಕಷ್ಟವಾಗಿದೆ. ಈ ಕಾರಣ ಶಾಸಕ ಹರೀಶ್ ಅವರು ತಮ್ಮ ಕ್ಷೇತ್ರಕ್ಕೆ ಮರಳಬೇಕು, ಇಲ್ಲಿನ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಸೇವೆ ಮಾಡಲು ಸಾಧ್ಯವಾಗಲಿಲ್ಲ ಎಂದರೆ ರಾಜೀನಾಮೆ ನೀಡಬೇಕೆಂದು ಸಹ ಪ್ರವೀಣ್ ಕುಮಾರ್ ಒತ್ತಾಯಿಸಿದರು.
ಹರೀಶ್ ಅವರನ್ನು ಜನರು ಗೆಲ್ಲಿಸಿದ ಮೇಲೆ ಕ್ಷೇತ್ರದ ಸಮಸ್ಯೆ ಅಭಿವೃದ್ಧಿಗಿಂತ ವಿರೋಧ ಪಕ್ಷದ ನಾಯಕರನ್ನು ಟೀಕೆ ಮಾಡುವುದೇ ದೊಡ್ಡ ಸಾಧನೆಯಾಗಿದೆ ಎಂದರು.ಈ ವೇಳೆ ಹರಿಹರ ತಾಲೂಕು ಯುವ ಕಾಂಗ್ರೆಸ್ ಮುಖಂಡರಾದ ಶಿವಾಜಿ, ಶ್ರೀನಿಧಿ, ಹರೀಶ್ ಹಲವು ಮುಖಂಡರು ಹಾಜರಿದ್ದರು.
;Resize=(128,128))
;Resize=(128,128))
;Resize=(128,128))