ರೈತರಿಗೆ ಈಗಾಗಲೇ ಬೆಳೆ‌ ಪರಿಹಾರವು ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು ತಾವು ಬೆಳೆದ ಹೆಸರು ಮತ್ತು ಉದ್ದನ್ನು ಖರೀದಿ ಕೇಂದ್ರದಲ್ಲಿ ಪೂರೈಸುವ ಮೂಲಕ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಕೋನರಡ್ಡಿ ಹೇಳಿದರು.

ನವಲಗುಂದ:

ತಾಲೂಕಿನ ಶಿರಕೋಳ ಗ್ರಾಮದಲ್ಲಿ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಆರಂಭವಾದ ಹೆಸರು ಬೆಳೆ ಖರೀದಿ ಕೇಂದ್ರಕ್ಕೆ ಶಾಸಕ ಎನ್.ಎಚ್. ಕೋನರಡ್ಡಿ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ರೈತರಿಗೆ ಈಗಾಗಲೇ ಬೆಳೆ‌ ಪರಿಹಾರವು ಖಾತೆಗಳಿಗೆ ಜಮೆ ಮಾಡಲಾಗಿದೆ. ರೈತರು ತಾವು ಬೆಳೆದ ಹೆಸರು ಮತ್ತು ಉದ್ದನ್ನು ಖರೀದಿ ಕೇಂದ್ರದಲ್ಲಿ ಪೂರೈಸುವ ಮೂಲಕ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.

ಈ ವೇಳೆ ಸೊಸೈಟಿ ಅಧ್ಯಕ್ಷ ಶೇಖರಗೌಡ ಕಬ್ಬೂರ, ಉಪಾಧ್ಯಕ್ಷ ಧರ್ಮಪ್ಪ ಗಾಣಿಗೇರ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸೋಮಣ್ಣ ಬಳಿಗೇರ, ಸೊಸೈಟಿ ಸದಸ್ಯರಾದ ಈರಪ್ಪ ಕರ್ನಿ, ಮಲ್ಲಿಕಾರ್ಜುನ ಗಾಣಿಗೇರ, ಮಲ್ಲಿಕಾರ್ಜುನ ಪಾಟೀಲ, ಶಿವಶಂಕರಪ್ಪ ಹೂಲಿ, ಅಜ್ಜಪ್ಪ ಮೊರಬ, ಗುರಪ್ಪ ರಾಯಗೊಣ್ಣವರ, ನಾಗಪ್ಪ ತಳವಾರ, ಲೀಲಾವತಿ ಶಿರಗುಪ್ಪಿ, ಕಾರ್ಯದರ್ಶಿ ಮಂಜುನಾಥ ಗಾಣಿಗೇರ, ಮುಖಂಡರಾದ ಮಾಲತೇಶ ಹಂಚಿನಾಳ, ಯಲ್ಲಪ್ಪ ಯಾದವಾಡ, ಲಿಂಬಣ್ಣ ಗಾಣಿಗೇರ, ಪರಪ್ಪ ಗಾಣಿಗೇರ, ಅಡಿವೆಪ್ಪ ಗಾಣಿಗೇರ, ಸಿದ್ದಪ್ಪ, ಎಂ.ಎಂ. ಮುಲ್ಲಾ ಸೇರಿ ಹಲವರಿದ್ದರು.