ಮೂಡುಬಿದಿರೆ: ಸುವರ್ಣ ಸ್ಕ್ವೇರ್ ಶಾಪಿಂಗ್ ಮಾಲ್ ಶುಭಾರಂಭ

| Published : Feb 23 2025, 12:32 AM IST

ಸಾರಾಂಶ

ಬದ್ರಿಯಾ ಜುಮ್ಮಾ ಮಸೀದಿ ಬಳಿ ಮಂಗಳೂರಿನ ಶ್ರೀಮಾ ನಿಧಿ ಸಂಸ್ಥೆಯ ಸುವರ್ಣ ಸ್ಕ್ವೇರ್ ಬಹು ಮಹಡಿಯ ಶಾಪಿಂಗ್ ಮಾಲ್ ಉದ್ಘಾಟನೆ ಶುಕ್ರವಾರ ಮಾಲ್ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ಇಲ್ಲಿನ ಬದ್ರಿಯಾ ಜುಮ್ಮಾ ಮಸೀದಿ ಬಳಿ ಮಂಗಳೂರಿನ ಶ್ರೀಮಾ ನಿಧಿ ಸಂಸ್ಥೆಯ ಸುವರ್ಣ ಸ್ಕ್ವೇರ್ ಬಹು ಮಹಡಿಯ ಶಾಪಿಂಗ್ ಮಾಲ್ ಉದ್ಘಾಟನೆ ಶುಕ್ರವಾರ ಮಾಲ್ ಸಭಾಂಗಣದಲ್ಲಿ ನಡೆಯಿತು.

ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಗಳೂರಿನ ಬಾಲಕೃಷ್ಣ ಸುವರ್ಣ ಅವರ ಮಕ್ಕಳಾದ ಜೇಂಕಾರ್ ಕೃಷ್ಣ ಹಾಗೂ ಯುವಿಕಾ ಶ್ರೀಮಾ ನೂತನ ಮಾಲ್ ಸಂಕೀರ್ಣವನ್ನು ಉದ್ಘಾಟಿಸಿದರು.ಈ ಸಂದರ್ಭ ಆಲಂಗಾರು ಶ್ರೀ ಈಶ್ವರ ದೇವಸ್ಥಾನದ ಸುಬ್ರಹ್ಮಣ್ಯ ಭಟ್ ಶುಭಾಶಂಸನೆಗೈದರು.ಮಂಗಳೂರು ಮೂಲದ ಮಲೇಷ್ಯಾದ ಉದ್ಯಮಿ ಬಿಪಿನ್ ರೈ, ಬೆಳೆಯುತ್ತಿರುವ ಮೂಡುಬಿದಿರೆಗೆ ಸುಸಜ್ಜಿತ ಮಾಲ್ ಗರಿ ಮೂಡಿಸಿದೆ ಎಂದು ಶುಭ ಹಾರೈಸಿದರು.ಏಸ ಖ್ಯಾತಿಯ ತುಳು ಸಿನಿಮಾ ನಿರ್ದೇಶಕ ಉದಯ್ ಶೆಟ್ಟಿ ಕಾಂತಾವರ ಮಾತನಾಡಿ, ಸುಸಜ್ಜಿತ ಮಾಲ್ ಉದ್ಘಾಟನೆಯನ್ನು ಅತ್ಯಂತ ಸರಳತೆಯಿಂದ ಸಾರ್ವಜನಿಕರ ಗಮನ ಸೆಳೆಯುವಂತೆ ಮಾಡಿದೆ ಎಂದರು.ಹೊಸ ಉದ್ಯಮ, ಉದ್ಯಮಿಯನ್ನು ಪ್ರೋತ್ಸಾಹಿಸುವಂತೆ ಬಾಲಕೃಷ್ಣ ಸುವರ್ಣ ಕೋರಿದರು.

ಅವರ ಪತ್ನಿ ಸುಪ್ರೀತಾ ಬಿ. ಸುವರ್ಣ, ತಾಯಿ ನೀಲಮ್ಮ ಜಿನ್ನಪ್ಪ ಪೂಜಾರಿ, ಬೆಳ್ತಂಗಡಿ ಬಲ್ಪುಂಜದ ಜಯರಾಮ್ ಸಾಲ್ಯಾನ್, ಪ್ರೇಮಾ ಜೆ. ಸಾಲ್ಯಾನ್, ಮೂಡಾ ಅಧ್ಯಕ್ಷ ಹರ್ಷವರ್ಧನ್ ಪಡಿವಾಳ್, ಜಿ.ಪಂ. ಮಾಜಿ ಸದಸ್ಯ ಚಂದ್ರಹಾಸ ಸನಿಲ್, ಸಂತೋಷ್ ಶೆಟ್ಟಿ, ಉದ್ಯಮಿ ಜಬ್ಬಾರ್ ಮಾರಿಪಳ್ಳ, ಅಂಬೋಡಿ ಮಾರ್ ರಘುನಾಥ ದೇವಾಡಿಗ, ಸಂಸ್ಥೆಯ ಆಡಳಿತ ನಿರ್ದೇಶಕ ನಿಯಾಜ್, ಕಾನೂನು ಸಲಹೆಗಾರ ನ್ಯಾಯವಾದಿ ಮೋಹನ್ ರಾಜ್, ಉದ್ಯಮಿ ಎಂಎಫ್‌ಸಿ ಚಾಯ್ ಮಾರ್ಟ್‌ನ ಸಿದ್ಧಿಕ್ ಮಂಗಳೂರು ಮತ್ತಿತರರು, ಆಡಳಿತ ವರ್ಗದ ಸಿಬಂದಿ ಉಪಸ್ಥಿತರಿದ್ದರು.ಮನು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.