ಮಾತೃಭಾಷೆ ನಮ್ಮ ಉಸಿರಾಗಿರಬೇಕು: ಶಾಸಕ ಸಿದ್ದು

| Published : Oct 07 2024, 01:36 AM IST

ಮಾತೃಭಾಷೆ ನಮ್ಮ ಉಸಿರಾಗಿರಬೇಕು: ಶಾಸಕ ಸಿದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ ಮಾತೃಭಾಷೆ ನಮ್ಮ ಸಂಸ್ಕೃತಿಯ ಮೂಲ ಸ್ತೋತ್ರವಾಗಿದ್ದು, ಕನ್ನಡ ನಮ್ಮ ಉಸಿರಾಗಬೇಕು ಎಂದು ಶಾಸಕ ಸಿದ್ದು ಸವದಿ ನುಡಿದರು. ತೇರದಾಳದಿಂದ ರಬಕವಿ-ಬನಹಟ್ಟಿಗೆ ಬಂದ ಕನ್ನಡ ರಥಕ್ಕೆ ರಬಕವಿ ಹೊಸ ಬಸ್‌ ನಿಲ್ದಾಣದ ಬಳಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮ ಮಾತೃಭಾಷೆಯನ್ನು ಮರೆಯದೇ ಬಳಸಬೇಕು. ನಮ್ಮ ನೆಲ, ಜಲ ಮತ್ತು ಭಾಷೆಗೆ ಅಭಿಮಾನದ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಮಾತೃಭಾಷೆ ನಮ್ಮ ಸಂಸ್ಕೃತಿಯ ಮೂಲ ಸ್ತೋತ್ರವಾಗಿದ್ದು, ಕನ್ನಡ ನಮ್ಮ ಉಸಿರಾಗಬೇಕು ಎಂದು ಶಾಸಕ ಸಿದ್ದು ಸವದಿ ನುಡಿದರು. ತೇರದಾಳದಿಂದ ರಬಕವಿ-ಬನಹಟ್ಟಿಗೆ ಬಂದ ಕನ್ನಡ ರಥಕ್ಕೆ ರಬಕವಿ ಹೊಸ ಬಸ್‌ ನಿಲ್ದಾಣದ ಬಳಿ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಾವು ಎಷ್ಟೇ ಉನ್ನತ ಸ್ಥಾನಕ್ಕೇರಿದರೂ ನಮ್ಮ ಮಾತೃಭಾಷೆಯನ್ನು ಮರೆಯದೇ ಬಳಸಬೇಕು. ನಮ್ಮ ನೆಲ, ಜಲ ಮತ್ತು ಭಾಷೆಗೆ ಅಭಿಮಾನದ ಗೌರವ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದರು.ನಗರಾಧ್ಯಕ್ಷೆ ವಿದ್ಯಾ ದಬಾಡಿ, ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ತಹಶೀಲ್ದಾರ ಗಿರೀಶ ಸ್ವಾದಿ, ತಾಪಂ ಇಒ ಸಿದ್ದಪ್ಪ ಪಟ್ಟಿಹಾಳ, ಗ್ರೇಡ್ ೨ ತಹಶೀಲ್ದಾರ ಎಸ್.ಬಿ.ಕಾಂಬಳೆ, ಬಿಇಒ ಅಶೋಕ ಬಸನ್ನವರ, ಪೌರಾಯುಕ್ತ ಜಗದೀಶ ಈಟಿ, ಸಂಜಯ ತೆಗ್ಗಿ, ಧರೆಪ್ಪ ಉಳ್ಳಾಗಡ್ಡಿ, ಯಲ್ಲಪ್ಪ ಕಟಗಿ, ಚಿದಾನಂದ ಹೊರಟ್ಟಿ, ಸಂಜಯ ತೇಲಿ, ಡಾ.ರವಿ ಜಮಖಂಡಿ, ಸೋಮಶೇಖರ ಕೊಟ್ರಶೆಟ್ಟಿ, ಶಿವಾನಂದ ಬಾಗಲಕೋಟಮಠ, ಚಿದಾನಂದ ಹೊರಟ್ಟಿ, ಈರಣ್ಣಾ ಗುಣಕಿ, ವಿದ್ಯಾಧರ ಸವದಿ, ಬಾಬು ಗಂಗಾವತಿ, ಎಂ.ಕೆ.ಮೇಗಾಡಿ, ಗೌರಿ ಮಿಳ್ಳಿ, ಶಿವಾನಂದ ಶೆಲ್ಲಿಕೇರಿ, ರವಿ ಗಡಾದ ಸೇರಿದಂತೆ ಪ್ರಮುಖರಿದ್ದರು.

ರಬಕವಿ ಮಾರ್ಗವಾಗಿ ಬೈಪಾಸ್ ರಸ್ತೆಯಲ್ಲಿ ಸಂಚರಿಸಿದ ರಥ ರಾಮಪುರ ಜ್ಞಾನೋದಯ, ಜ್ಞಾನದೀಪ, ಪೂರ್ಣಪ್ರಜ್ಞ, ಎಸ್‌ಇಟಿಸಿ ಕಾಲೇಜು ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಿಂದ ಗೌರವ ಪುಷ್ಪವೃಷ್ಟಿ ಮೂಲಕ ಬನಹಟ್ಟಿಗೆ ತೆರಳಿ ಗಾಂಧಿ ಸರ್ಕಲ್, ವೈಭವ ಚಿತ್ರಮಂದಿರ ಬಳಿಯ ರಾಯಣ್ಣ ವೃತ್ತದಲ್ಲಿ ಸೋಮವಾರಪೇಟ ದೈವ ಮಂಡಳದ ಗೌರವ ಸ್ವೀಕರಿಸಿ ಅವಳಿ ನಗರದಿಂದ ಬೀಳಗಿಯತ್ತ ನಿರ್ಗಮಿಸಿತು.--------------