ತಾಯ್ತನ ಎಂಬುದು ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಲತಾ ಮಂಜು ಹೇಳಿದರು.
ಸೋಮವಾರಪೇಟೆ: ತಾಯ್ತನ ಎಂಬುದು ಮಹಿಳೆಯರ ಜೀವನದ ಒಂದು ಪ್ರಮುಖ ಘಟ್ಟವಾಗಿದೆ ಎಂದು ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ಅಧ್ಯಕ್ಷೆ ಲತಾ ಮಂಜು ಹೇಳಿದರು.ತಾಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಹಿಲ್ಸ್ ವತಿಯಿಂದ ಈಚೆಗೆ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆರೋಗ್ಯವಂತ ಮಗು ಮತ್ತು ತಾಯಿ ಸಮಾಜಕ್ಕೆ ಅಗತ್ಯ. ಈ ಹಿನ್ನೆಲೆಯಲ್ಲಿ ನಮ್ಮ ಸಂಸ್ಥೆ ವತಿಯಿಂದ ಆಗಸ್ಟ್ ಮಾಸದ ಮೊದಲನೇ ವಾರದಲ್ಲಿ ವಿಶ್ವ ಸ್ತನ್ಯಪಾನ ದಿನ ಆಚರಿಸಲಾಗುತ್ತಿದ್ದು, ತಾಯಿ ಮತ್ತು ಗರ್ಭಿಣಿಯರಲ್ಲಿ ಆರೋಗ್ಯದ ಮಹತ್ವವನ್ನು ತಿಳಿಸಿಕೊಡಲಾಗುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಆಸ್ಪತ್ರೆಯ ಮಹಿಳಾ ತಜ್ಜ್ಞೆಅಶ್ವಿನಿ ಮಾತನಾಡಿ, ಮಗು ಹುಟ್ಟಿದ ಅರ್ಧ ಗಂಟೆಯಲ್ಲಿ ಮಗುವಿಗೆ ತಾಯಿಯ ಎದೆ ಹಾಲನ್ನು ಕಡ್ಡಾಯವಾಗಿ ಕುಡಿಸಬೇಕು. ಇದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು. ಹಾಲು ಕುಡಿಸುವ ಸಂದರ್ಭ ಮಗುವಿನ ಚಲನ ವಲನವನ್ನು ತಾಯಿ ಗಮನಿಸಬೇಕು ಎಂದರು.ಸಂಸ್ಥೆ ವತಿಯಿಂದ ಮಗು ಮತ್ತು ಬಾಣಂತಿಯರ ಬಳಕೆಗೆ ಥರ್ಮೋ ಪ್ಲಾಸ್ಕ್, ಕಂಬಳಿ ನೀಡಲಾಯಿತು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷೆ ಅಮೃತಾ ಕಿರಣ್, ಖಜಾಂಚಿ ಲತಾ ನಾಗೇಶ್, ಅಂಗನವಾಡಿ ಶಿಕ್ಷಕರು ಇದ್ದರು.