ಚಿಕ್ಕಮಗಳೂರು ,ಬೆಂಗಳೂರು- ತಿರುಪತಿ ರೈಲು ಸೇವೆಗೆ ಸಂಸದರ ಮನವಿ

| N/A | Published : Jun 01 2025, 03:09 AM IST / Updated: Jun 01 2025, 01:06 PM IST

ಚಿಕ್ಕಮಗಳೂರು ,ಬೆಂಗಳೂರು- ತಿರುಪತಿ ರೈಲು ಸೇವೆಗೆ ಸಂಸದರ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ದೆಹಲಿ ಯಲ್ಲಿ ರೈಲ್ವೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ವಿನಂತಿಸಿದರು.

ಚಿಕ್ಕಮಗಳೂರು: ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ದೆಹಲಿ ಯಲ್ಲಿ ರೈಲ್ವೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಅವರನ್ನು ಭೇಟಿ ಮಾಡಿ ಹಾಸನ- ಬೆಂಗಳೂರು ರೈಲ್ವೆ ವಿದ್ಯುದೀಕರಣವನ್ನು ಬೇಗನೆ ಮುಗಿಸುವಂತೆ ಮತ್ತು ಅದೇ ಸಂದರ್ಭದಲ್ಲಿ ಕರಾವಳಿ ರೈಲಿನ ಪ್ರಯಾಣಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಲು ವಿನಂತಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಜನರಿಗೆ ಬೆಂಗಳೂರು ಹಾಗೂ ತಿರುಪತಿ ಎರಡೂ ಕಡೆ ತಲುಪಿಸುವ ಚಿಕ್ಕಮಗಳೂರು-ಬೆಂಗಳೂರು-ತಿರುಪತಿ ರೈಲು ಸೇವೆ ಆರಂಭಿಸುವಂತೆ ಕೋರಿದ್ದು ರೈಲು ಮಂಡಳಿಯಲ್ಲಿ ಸಭೆ ನಡೆಸುವಂತೆ ವಿನಂತಿಸಿದ್ದಾರೆ ಈ ಮನವಿಗಳಿಗೆ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದು, ರೈಲು ಮಂಡಳಿಯಲ್ಲಿ ಸದ್ಯದಲ್ಲಿಯೇ ಸಭೆ ಕರೆದು ಈ ಎಲ್ಲಾ ವಿಷಯಗಳ ಕುರಿತು ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. 

31 ಕೆಸಿಕೆಎಂ 4ಉಡುಪಿ - ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಅವರು ದೆಹಲಿಯಲ್ಲಿ ರೈಲ್ವೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವರವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

Read more Articles on