೪ರಂದು ಪುತ್ತೂರು ಸುದಾನ ಶಾಲೆ ಆವರಣದಲ್ಲಿ ಸಂಗೀತೋತ್ಸವ

| Published : Jan 02 2025, 12:30 AM IST

೪ರಂದು ಪುತ್ತೂರು ಸುದಾನ ಶಾಲೆ ಆವರಣದಲ್ಲಿ ಸಂಗೀತೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಜ.೨೫ ರಂದು ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಇದೇ ತಂಡದಿಂದ ಹಾಡುಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಮನಜನ ಚಾರಿಟೇಬಲ್ ಟ್ರಸ್ಟ್‌ ವತಿಯಿಂದ ನಿರ್ಗನ್ ಹಾಗೂ ಸೂಫಿ ಹಾಡುಗಳ ‘ಅಸೀಮ’ ಮನಜನ ಸಂಗೀತೋತ್ಸವ ಜ.೪ ರಂದು ಪುತ್ತೂರಿನ ಮಂಜಲ್ಪಡ್ಪು ಸುದಾನ ಶಾಲೆಯ ಆವರಣದಲ್ಲಿ ನಡೆಯಲಿದ್ದು, ಸಂಗೀತೋತ್ಸವಕ್ಕೆ ಉಚಿತ ಪ್ರವೇಶವಿದೆ ಎಂದು ಮನಜನ ಟ್ರಸ್ಟ್‌ನ ಮ್ಯಾನೇಜಿಂಗ್‌ ಟ್ರಸ್ಟಿ ಸೌಮ್ಯ ಭಟ್ ತಿಳಿಸಿದ್ದಾರೆ.

ಅವರು ಮಂಗಳವಾರ ಪುತ್ತೂರು ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಇಂದೋರ್‌ನ ಪ್ರಹ್ಲಾದ್ ತಿಪಾನಿಯಾ ಹಾಗೂ ತಂಡ ಮತ್ತು ಬಸು ಖಾನ್ ಹಾಗೂ ತಂಡದಿಂದ ಸುಫಿ ಹಾಗೂ ನಿರ್ಗನ್ ಹಾಡುಗಳು ಪ್ರಸ್ತುತಗೊಳ್ಳಲಿವೆ ಎಂದು ತಿಳಿಸಿದರು.

ಜ.೨೫ ರಂದು ಪುತ್ತೂರಿನ ಡಾ.ಶಿವರಾಮ ಕಾರಂತ ಬಾಲವನದಲ್ಲಿ ಇದೇ ತಂಡದಿಂದ ಹಾಡುಗಳಿಗೆ ಸಂಬಂಧಿಸಿದಂತೆ ಕಾರ್ಯಾಗಾರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮನಜನ ಚಾರಿಟೇಬಲ್ ಟ್ರಸ್ಟ್ ಸದಸ್ಯೆ ಮೈತ್ರಿಶೀಲ ಕುಕ್ಕಾಜೆ ಹಾಜರಿದ್ದರು.