ಸಾರಾಂಶ
ಆಧುನಿಕ ಬೆಂಗಳೂರು ನಗರವನ್ನು ನಿರ್ಮಿಸಲು ನಾಡಪ್ರಭು ಕೆಂಪೇಗೌಡರ ಕೊಡುಗೆಗಳು ಅನನ್ಯ, ಅದು ಅವರು ವಿಶ್ವದ ಪ್ರಮುಖ ತಾಂತ್ರಿಕ ಕೇಂದ್ರಗಳಲ್ಲಿ ಬೆಂಗಳೂರು ಒಂದಾಗಿದೆ ಎಂದು ಶಾಸಕ ಎ. ಮಂಜು ಬಣ್ಣಿಸಿದರು. ಅವರು ಅಪಾರ ಚಾತುರ್ಯ, ದೂರದೃಷ್ಟಿ, ನ್ಯಾಯ ಒದಗಿಸುವ ಮತ್ತು ಪ್ರಜೆಗಳಿಗೆ ಕ್ರಿಯಾಶೀಲ ಆಡಳಿತ ನೀಡುವ ಸಾಮರ್ಥ್ಯದಿಂದ ಅವರ ದಿಟ್ಟ ಸಾಧನೆಗಳು ಮತ್ತು ದೂರದೃಷ್ಟಿ ಇಂದಿಗೂ ನಮ್ಮ ಮೇಲೆ ಪ್ರಭಾವ ಬೀರುತ್ತಿವೆ ಎಂದು ಸ್ಮರಿಸಿದರು.
ರಾಮನಾಥಪುರ: ಆಧುನಿಕ ಬೆಂಗಳೂರು ನಗರವನ್ನು ನಿರ್ಮಿಸಲು ನಾಡಪ್ರಭು ಕೆಂಪೇಗೌಡರ ಕೊಡುಗೆಗಳು ಅನನ್ಯ, ಅದು ಅವರು ವಿಶ್ವದ ಪ್ರಮುಖ ತಾಂತ್ರಿಕ ಕೇಂದ್ರಗಳಲ್ಲಿ ಬೆಂಗಳೂರು ಒಂದಾಗಿದೆ ಎಂದು ಶಾಸಕ ಎ. ಮಂಜು ಬಣ್ಣಿಸಿದರು.
ರಾಮನಾಥಪುರ ಹೋಬಳಿ ಶಾಸಕರ ಸ್ವಗ್ರಾಮ ಹನ್ಯಾಳು ಗ್ರಾಮದಲ್ಲಿ ಇಂದು ಕೆಂಪೇಗೌಡರ ಜನ್ಮ ದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಮಾಡಿ ಮಾತನಾಡಿದ ಅವರು ಅಪಾರ ಚಾತುರ್ಯ, ದೂರದೃಷ್ಟಿ, ನ್ಯಾಯ ಒದಗಿಸುವ ಮತ್ತು ಪ್ರಜೆಗಳಿಗೆ ಕ್ರಿಯಾಶೀಲ ಆಡಳಿತ ನೀಡುವ ಸಾಮರ್ಥ್ಯದಿಂದ ಅವರ ದಿಟ್ಟ ಸಾಧನೆಗಳು ಮತ್ತು ದೂರದೃಷ್ಟಿ ಇಂದಿಗೂ ನಮ್ಮ ಮೇಲೆ ಪ್ರಭಾವ ಬೀರುತ್ತಿವೆ ಎಂದು ಸ್ಮರಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷರು ಗುಂಡಣ್ಣ, ನಿವೃತ್ತ ಮುಖ್ಯ ಶಿಕ್ಷಕರು ಕಾಳಬೋಯಿ, ಕೆಂಪೇಗೌಡ ಯುವಕರ ಸಂಘದ ಸದಸ್ಯರಾದ ಪವನ್, ಕಿರಣ್, ಶರತ್, ಶ್ರೀಕಾಂತ್, ಋಷಿ, ಯಶಸ್ಸು,ಜಯಣ್ಣ, ವಾಣಿ, ಮುಖ್ಯ ಶಿಕ್ಷಕರು ರವಿಕುಮಾರ್, ಶಿಕ್ಷಕ ಸಂತೋಷ ಮುಂತಾದವರು ಇದ್ದರು.