ಸಾರಾಂಶ
ನ್ಯಾಮತಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ನ್ಯಾಮತಿ ಸಿ.ಜಿ. ನಾಗರಾಜ್, ಉಪಾಧ್ಯಕ್ಷರಾಗಿ ಸಾಲಬಾಳ್ ಎಸ್ಡಿ. ಸೋಮ್ಲಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನ್ಯಾಮತಿ: ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಅಧ್ಯಕ್ಷರಾಗಿ ನ್ಯಾಮತಿ ಸಿ.ಜಿ. ನಾಗರಾಜ್, ಉಪಾಧ್ಯಕ್ಷರಾಗಿ ಸಾಲಬಾಳ್ ಎಸ್ಡಿ. ಸೋಮ್ಲಾ ನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ನ್ಯಾಮತಿ ಸಿ.ಜಿ. ನಾಗರಾಜ್, ಸುರಹೊನ್ನೆಯ ಜಿ.ಸಿ. ಗಿರೀಶ್ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಸಾಲಬಾಳ್ ಎಸ್.ಡಿ. ಸೋಮ್ಲಾ ನಾಯ್ಕ, ಸುರಹೊನ್ನೆಯ ಮಲ್ಲಮ್ಮ ಸ್ಪರ್ಧಿಸಿದ್ದರು. ನಿಗದಿತ ಸಮಯದ ಕೊನೆ ಗಳಿಗೆಯಲ್ಲಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ಸುರಹೊನ್ನೆಯ ಜಿ.ಸಿ. ಗಿರೀಶ್ಕುಮಾರ್, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿ ಮಲ್ಲಮ್ಮ ನಾಮಪತ್ರ ಹಿಂತೆಗೆದುಕೊಂಡರು.ಆದಕಾರಣ ಅಧ್ಯಕ್ಷರಾಗಿ ನ್ಯಾಮತಿ ಸಿ.ಜಿ. ನಾಗರಾಜ್, ಉಪಾಧ್ಯಕ್ಷರಾಗಿ ಸಾಲಬಾಳ್ ಎಸ್.ಡಿ. ಸೋಮ್ಲಾನಾಯ್ಕ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸಹಕಾರ ಅಭಿವೃದ್ಧಿ ಅಧಿಕಾರಿ ನವೀನ್ಕುಮಾರ್ ಘೋಷಿಸಿದರು.
ಚುನಾವಣೆ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಸುರಹೊನ್ನೆ ರೇವಣಪ್ಪ, ಸುರಹೊನ್ನೆ ಜಿ.ಸಿ. ಗಿರೀಶ್ಕುಮಾರ್, ನ್ಯಾಮತಿ ಎ.ವೀರಭದ್ರಪ್ಪ, ನ್ಯಾಮತಿ ಜೆ.ಎಂ. ಮದನ್ಕುಮಾರ್, ಸುರಹೊನ್ನೆ ಎಂ.ಎಚ್. ಬಸವರಾಜ್, ಸುರಹೊನ್ನೆ ಟಿ.ಕರಿಬಸಪ್ಪ, ಸುರಹೊನ್ನೆ ಬಸಮ್ಮ, ಸುರಹೊನ್ನೆ ಮಲ್ಲಮ್ಮ, ಸುರಹೊನ್ನೆ ಬಿ.ಸುರೇಶಾಚಾರ್, ಸುರಹೊನ್ನೆ ಎ.ಜಿ.ಶಿವನಗೌಡ ಭಾಗವಹಿಸಿದ್ದರು.ಅವಿರೋಧ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ತಾ.ಪಂ. ಮಾಜಿ ಅಧ್ಯಕ್ಷ ಎಸ್.ಪಿ. ರವಿಕುಮಾರ್, ಗ್ರಾ.ಪಂ. ಮಾಜಿ ಸದಸ್ಯ ಸುರಹೊನ್ನೆ ಸದಾಶಿವಪ್ಪ, ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕರು, ನ್ಯಾಮತಿ ಗಿರೀಶ್, ಸಹಾಯಕ ಚುನಾವಣಾಧಿಕಾರಿ ಎಂ.ಸಿದ್ದಪ್ಪ, ಮುಖ್ಯ ಕಾರ್ಯನಿರ್ವಾಹಕ ಮಲ್ಲಿಕ ನಾಯ್ಕ, ಪ್ರಭಾರ ಕಾರ್ಯದರ್ಶಿ ಚಂದ್ರಮ್ಮ ಮತ್ತಿತರರು ಅಭಿನಂದಿಸಿದರು.