ಪೆರಾಜೆ ಸಹಕಾರ ಸಂಘ ನಿರ್ದೇಶಕ ಸ್ಥಾನಕ್ಕೆ ನಾರ್ಣಪ್ಪ ಜತ್ತನ ನಾಮ ನಿರ್ದೇಶನ
Author : KannadaprabhaNewsNetwork
Published : Feb 24 2026, 04:00 AM IST
23-ಎನ್ಪಿ ಕೆ-1.ಪೆರಾಜೆಪ್ರಾಥಮಿಕ ಕೃಷಿ ಪತ್ತಿನ ಸಹಕಾರಸಂಘದ ಆಡಳಿತ ಮಂಡಳಿ ಸಭೆಯಲ್ಲಿಸಂಘದ ಅಧ್ಯಕ್ಷರಾದ ನಾಗೇಶ್ಕುಂದಲ್ಪಾಡಿ ಯವರು ಸಹಕಾರ ಶಲ್ಯಹೊದಿಸಿ ನಾರ್ಣಪ್ಪ ಜತ್ತನ ಕೆ ಇವರನ್ನುಅಭಿನಂದಿಸಿದರು. | Kannada Prabha
Image Credit: KP
ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಸಹಕಾರ ಶಲ್ಯ ಹೊದಿಸಿ ನಾರ್ಣಪ್ಪ ಜತ್ತನ ಕೆ ಅವರನ್ನು ಅಭಿನಂದಿಸಿದರು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ತೆರವುಗೊಂಡಿರುವ ಒಂದು ನಿರ್ದೇಶಕ ಸ್ಥಾನಕ್ಕೆ ಸಾಮಾನ್ಯ ವರ್ಗ ನಾರ್ಣಪ್ಪ ಜತ್ತನ ಕೆ ಅವರನ್ನು ಸಹಕಾರ ಸಂಘಗಳ ಕಾಯ್ದೆಗಳಿಗನುಗುಣವಾಗಿ ಸಂಘದ ಆಡಳಿತ ಮಂಡಳಿಯಲ್ಲಿ ನಿರ್ಣಯಿಸಿ ನಾಮ ನಿರ್ದೇಶನ ಮಾಡಿಕೊಳ್ಳಲಾಯಿತು.
ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ಸಂಘದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಸಹಕಾರ ಶಲ್ಯ ಹೊದಿಸಿ ನಾರ್ಣಪ್ಪ ಜತ್ತನ ಕೆ ಅವರನ್ನು ಅಭಿನಂದಿಸಿದರು. ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ಅಶೋಕ ಪಿ ಎಂ, ನಿರ್ದೇಶಕರಾದ ಜಯರಾಮ ಎನ್ ಬಿ, ಸೀತಾರಾಮ ಕದಿಕಡ್ಕ, ಧನಂಜಯ ಕೋಡಿ, ಪ್ರಮೀಳ ಎನ್ ಬಂಗಾರಕೋಡಿ, ಪ್ರದೀಪ ಕೆ ಎಂ, ಧೀನರಾಜ್ ದೊಡ್ಡಡ್ಕ, ಶೇಷಪ್ಪ ನಾಯ್ಕ ನಿಡ್ಯಮಲೆ, ಕಿರಣ್ ಬಂಗಾರಕೋಡಿ, ಸಹಕಾರ ಸಂಘದ ಮೇಲ್ವಿಚಾರಕರಾದ ವಿನಿತಾ ಬಿ ಸಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ ಉಪಸ್ಥಿತರಿದ್ದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.