Nilakantharao Mulage submitted an application for the post of Kalaburagi District Congress Committee President to Dr. Vishwajeet Kadam—an AICC in-charge, former Maharashtra Minister, and MLA who had visited the Kalaburagi district as part of the 'Sanghatana Srujan' campaign.
ಕಲಬುರಗಿ: ಸಂಘಟನಾ ಸೃಜನ್ ಅಭಿಯಾನದ ಅಂಗವಾಗಿ ಕಲಬುರಗಿ ಜಿಲ್ಲೆಗೆ ಆಗಮಿಸಿದ್ದ ಎಐಸಿಸಿ ಉಸ್ತುವಾರಿ, ಮಹಾರಾಷ್ಟ್ರದ ಮಾಜಿ ಸಚಿವ, ಶಾಸಕ ಡಾ.ವಿಶ್ವಜಿತ್ ಕದಮ್ ಅವರ ಬಳಿ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ನೀಲಕಂಠರಾವ ಮೂಲಗೆ ಅರ್ಜಿ ಸಲ್ಲಿಸಿದರು.
ಕಾಂಗ್ರೆಸ್ ಪಕ್ಷವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಜಿಲ್ಲೆಯ ಸಂಘಟನಾ ಚಟುವಟಿಕೆಗಳು, ಪಕ್ಷದ ಬಲವರ್ಧನೆ ಹಾಗೂ ಕಾರ್ಯಕರ್ತರ ಸಮನ್ವಯದ ಕುರಿತು ಚರ್ಚೆ ನಡೆಯಿತು.
ಅರ್ಜಿ ಸ್ವೀಕರಿಸಿದ ಡಾ.ವಿಶ್ವಜಿತ್ ಕದಮ್ ಪಕ್ಷದ ಸಂಘಟನಾ ಪ್ರಕ್ರಿಯೆಯಲ್ಲಿ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲಾಗುತ್ತಿದ್ದು, ಸೂಕ್ತ ಪರಿಶೀಲನೆಯ ಬಳಿಕ ಪಕ್ಷದ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ತಿಳಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು----ಫೋಟೊ----
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.