ವಿದ್ಯಾರ್ಥಿ, ನೌಕರರಿಗೆ ಅನುಕೂಲಕ್ಕೆ ನೂತನ ಬಸ್‌ ಮಾರ್ಗಕ್ಕೆ ಚಾಲನೆ

| Published : Jul 01 2025, 12:47 AM IST

ಸಾರಾಂಶ

ಶಾಲಾ ಮಕ್ಕಳು ಸಾರ್ವಜನಿಕರು ಅಧಿಕಾರಿಗಳು ಸಕಾಲಕ್ಕೆ ಕೆಲಸಕ್ಕೆ ಹಾಜರಾಗಲು ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಶಾಲಾ ಮಕ್ಕಳು ಸಾರ್ವಜನಿಕರು ಅಧಿಕಾರಿಗಳು ಸಕಾಲಕ್ಕೆ ಕೆಲಸಕ್ಕೆ ಹಾಜರಾಗಲು ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು. ತಾಲೂಕಿನ ಪಾಳ್ಯ, ಮಾರ್ಗವಾಗಿ ಕೊಳ್ಳೇಗಾಲ ಚಿಕ್ಕಲೂರು, ತೆಳ್ಳನೂರು, ಬಂಡಳ್ಳಿ ಹಾಗೂ ಹನೂರಿಗೆ ನೂತನ ಬಸ್ ಮಾರ್ಗಕ್ಕೆ ಚಿಕ್ಕಲೂರಿನಲ್ಲಿ ಚಾಲನೆ ನೀಡಿ ಮಾತನಾಡಿದರು.

ಈ ಬಸ್ ಮುಖ್ಯವಾಗಿ ಶಾಲಾ ಮಕ್ಕಳು ದಿನಗೂಲಿ ಕೆಲಸಕ್ಕೆ ಹೋಗುವ ಸಾರ್ವಜನಿಕರು ಹಾಗೂ ನೌಕರರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಸರ್ಕಾರಿ ಬಸ್ ಗೆ ಚಾಲನೆ ನೀಡಲಾಗುತ್ತಿದೆ. ಮತ್ತು ಈ ಭಾಗದ ಜನರ ಬಹು ದಿನಗಳ ಬೇಡಿಕೆ ಆಗಿತ್ತು. ಅಲ್ಲದೆ ಸರ್ಕಾರಿ ಬಸ್ ನಲ್ಲಿ ಜನ ಸಾಮಾನ್ಯರ ಜೊತೆಗೂಡಿ ಸಂಚಾರ ಮಾಡುವ ಮೂಲಕ ಸರಳತೆ ಮೆರೆದರು.ಕ್ಷೇತ್ರ ವ್ಯಾಪ್ತಿಯಲ್ಲಿ ಗ್ರಾಮೀಣ ಭಾಗದ ಹಲವು ಕಡೆಗಳಲ್ಲಿ ಇನ್ನು ಸಾರಿಗೆ ಸೌಲಭ್ಯ ವ್ಯವಸ್ಥೆ ಸಮರ್ಪಕವಾಗಿ ಆಗಿಲ್ಲ. ಮುಂದಿನ ದಿನಗಳಲ್ಲಿ ಪ್ರತಿ ಹಳ್ಳಿಗಳಲ್ಲಿ ಸರ್ಕಾರಿ ಬಸ್ ಸಂಚರಿಸುವ ವ್ಯವಸ್ಥೆ ಮಾಡಲು ಚಿಂತನೆ ಮಾಡಲಾಗಿದೆ. ಅದಕ್ಕಾಗಿ ಸಂಬಂಧಿಸಿದ ಅಧಿಕಾರಿಗಳಿಂದ ಸಮಗ್ರ ಮಾಹಿತಿ ಪಡೆದು ಸಾರಿಗೆ ಸಚಿವರನ್ನು ಭೇಟಿ ಮಾಡಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.

ಡಿಪೋ ಮ್ಯಾನೇಜರ್ ಬೋಗನಾಯಕ್, ಚರಣ್ ಇನ್ನಿತರಿದ್ದರು.