ಸಾರಾಂಶ
ಸಿದ್ದು ಚಿಕ್ಕಬಳ್ಳೇಕೆರೆಕನ್ನಡಪ್ರಭ ವಾರ್ತೆ ಬೆಂಗಳೂರು
ಅತಿವೃಷ್ಟಿ-ಅನಾವೃಷ್ಟಿಯಿಂದ ಇತ್ತೀಚಿನ ವರ್ಷಗಳಲ್ಲಿ ತತ್ತರಿಸಿದ್ದ ರಾಜ್ಯದ ‘ಅನ್ನದಾತ’ರು ಇದೀಗ ತೆಂಗಿನ ಮರಗಳಿಗೆ ಮಾರಕವಾಗುತ್ತಿರುವ ‘ಕಪ್ಪು ತಲೆ ಹುಳ’ ಬಾಧೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರೋಬ್ಬರಿ 29,491 ಸಾವಿರ ಹೆಕ್ಟೇರ್ಗೂ ಅಧಿಕ ಪ್ರದೇಶದ ‘ಕಲ್ಪವೃಕ್ಷ’ಕ್ಕೆ ಕಂಟಕ ಉಂಟಾಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ.ರಾಜ್ಯದಲ್ಲಿ ತೆಂಗು ಪ್ರಮುಖ ವಾಣಿಜ್ಯ ಬೆಳೆಯಾಗಿದೆ. 5.96 ಲಕ್ಷ ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿದ್ದು 24.23 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆಯಿದೆ. ತುಮಕೂರು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿತ್ರದುರ್ಗ, ಕೊಡಗು, ದಾವಣಗೆರೆ ಸೇರಿದಂತೆ 13ಕ್ಕೂ ಅಧಿಕ ಜಿಲ್ಲೆಗಳಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಆದರೆ 29,491 ಹೆಕ್ಟೇರ್ಗೂ ಅಧಿಕ ಪ್ರದೇಶದಲ್ಲಿ ಬೆಳೆದಿದ್ದ ತೆಂಗಿನ ಮರಗಳಿಗೆ ಕಪ್ಪು ತಲೆ ಹುಳ (ಬ್ಲ್ಯಾಕ್ ಹೆಡೆಡ್ ಕ್ಯಾಟರ್ಪಿಲ್ಲರ್) ರೋಗ ಸಮರೋಪಾದಿಯಲ್ಲಿ ಬಾಧಿಸಿದೆ.ವರ್ಷದ 365 ದಿನವೂ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದ ತೆಂಗಿನ ಮರಗಳು ರೋಗಬಾಧೆಯಿಂದ ತಮ್ಮ ಕಣ್ಣೆದುರೇ ಧರೆಗುರುಳುತ್ತಿರುವುದನ್ನು ನೋಡಿ ರೈತರು ಕಣ್ಣೀರಾಗುತ್ತಿದ್ದಾರೆ. ತಂದೆ, ಅಜ್ಜನ ಕಾಲದಿಂದಲೂ ಫಸಲು ನೀಡುತ್ತಿದ್ದ ಮರಗಳ ಗರಿಗಳು ಒಣಗಿ ಬಳಿಕ ಸುಳಿ ಬಿದ್ದು ಹೋಗುತ್ತಿರುವುದನ್ನು ಕಂಡು ದಿಕ್ಕು ತೋಚದಂತಾಗಿದ್ದಾರೆ. ಮತ್ತೊಂದೆಡೆ, ಐದಾರು ವರ್ಷ ಕೈಯಾರೆ ಆರೈಕೆ ಮಾಡಿ ಬೆಳೆಸಿದ್ದ ತೆಂಗಿನ ಸಸಿಗಳು ಇನ್ನೇನು ಕೈಗೆ ಬಂದು, ಫಸಲು ಬಿಡಲಿವೆ ಎಂಬ ಸಂತಸದಲ್ಲಿದ್ದ ರೈತರು ರೋಗಬಾಧೆಯಿಂದ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಆದ್ದರಿಂದ ಸರ್ಕಾರ ತಕ್ಷಣ ಉಚಿತವಾಗಿ ಔಷಧಿ ನೀಡಬೇಕು. ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು, ಹಾಸನ, ತುಮಕೂರು ಅಧಿಕ:ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತ್ಯಧಿಕ, ಎಂದರೆ 11,278 ಹೆಕ್ಟೇರ್ ತೆಂಗಿಗೆ ರೋಗ ತಗುಲಿದೆ. ಚಿತ್ರದುರ್ಗ-4000, ಹಾಸನ-3342, ತುಮಕೂರು-2716, ದಾವಣಗೆರೆ ಜಿಲ್ಲೆಯಲ್ಲಿ -2610 ಹೆಕ್ಟೇರ್ ಸೇರಿದಂತೆ 13 ಕ್ಕೂ ಅಧಿಕ ಜಿಲ್ಲೆಯಲ್ಲಿ ರೋಗಬಾಧೆ ಕಂಡುಬಂದಿದೆ.
ಹೆಚ್ಚಾಗಿ ಮಳೆಯನ್ನು ಅವಲಂಬಿಸದ, ಮುಂಗಾರು ಸಂದರ್ಭದಲ್ಲಿ ಮಳೆಯಾದರೆ ಸಾಕು ಇನ್ನುಳಿದಂತೆ ಮಳೆ ಬಾರದಿದ್ದರೂ ವರ್ಷಪೂರ್ತಿ ಫಸಲು ಸಿಗುವುದರಿಂದ ರೈತರ ಪಾಲಿಗೆ ತೆಂಗಿನ ಮರಗಳು ನಿಜಕ್ಕೂ ಕಾಮಧೇನುವಾಗಿವೆ. ಆದರೆ ಇದೀಗ ರೋಗದಿಂದ ಮರಗಳು ನೆಲಕ್ಕುರುಳುವ ಭೀತಿ ಆವರಿಸಿದೆ.‘ಯೂರಿಯಾ ಅಂಶ ಅಧಿಕವಾಗಿ, ಪೊಟ್ಯಾಷ್ ಕೊರತೆಯಿಂದ ಈ ರೋಗ ಕಂಡುಬರುತ್ತದೆ. ಅದರಲ್ಲೂ ಉಷ್ಣಾಂಶ ಹೆಚ್ಚಾಗಿದ್ದರಂತೂ ರೋಗ ಅಕ್ಕ-ಪಕ್ಕದ ತೋಟಗಳಿಗೂ ಕಡಿಮೆ ಅವಧಿಯಲ್ಲಿ ವ್ಯಾಪಿಸುತ್ತದೆ. ಬರಗಾಲದ ಹಿನ್ನೆಲೆಯಲ್ಲಿ ಕಪ್ಪು ತಲೆ ಹುಳದ ಸಂತಾನೋತ್ಪತ್ತಿಗೆ ಪೂರಕ ವಾತಾವರಣವಿದೆ. ರೋಗದಿಂದ ಗರಿಗಳು ಒಣಗಿ ಸುಳಿ ಬಿದ್ದು ತೆಂಗಿನ ಮರಗಳೂ ನೆಲಕ್ಕುರುಳುವ ಸಾಧ್ಯತೆ ಹೆಚ್ಚು’ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.ಜಿಲ್ಲೆ ತೆಂಗು ವಿಸ್ತೀರ್ಣ(ಹೆಕ್ಟೇರ್) ಹಾನಿ(ಹೆಕ್ಟೇರ್)ತುಮಕೂರು1,74,3762,716ಹಾಸನ97,9613342
ಮಂಡ್ಯ69,1621317ಚಿಕ್ಕಮಗಳೂರು54,33711,278ಚಿತ್ರದುರ್ಗ46,1254,000ದಕ್ಷಿಣ ಕನ್ನಡ36,57217
ರಾಮನಗರ27,640750ಮೈಸೂರು 20,442 468ಶಿವಮೊಗ್ಗ 10,092 133
ಚಾಮರಾಜನಗರ 9863 2145ಉತ್ತರ ಕನ್ನಡ 9,570 715ದಾವಣಗೆರೆ 7831 2610ಒಟ್ಟು 5,63,97329,491ಔಷಧ ಸಿಂಪಡಿಸಿ ರೋಗ ನಿಯಂತ್ರಿಸಿಭೂಮಿಯಲ್ಲಿ ಯೂರಿಯಾ ಅಂಶ ಹೆಚ್ಚಾಗಿ ಪೊಟ್ಯಾಷ್ ಕಡಿಮೆಯಾಗುವುದು, ಬೇಸಿಗೆ ವಾತಾವರಣವು ಕಪ್ಪು ತಲೆ ಹುಳಕ್ಕೆ ಪೂರಕ ವಾತಾವರಣ ಉಂಟು ಮಾಡುತ್ತದೆ. ರೈತರು ಸಾಮೂಹಿಕ ಔಷಧ ಸಿಂಪಡಣೆಗೆ ಮುಂದಾದರೆ ಮಾತ್ರ ರೋಗ ನಿಯಂತ್ರಣ ಸಾಧ್ಯ.-ಡಾ.ವಿ.ಬಿ.ಸನತ್ಕುಮಾರ್, ಸಸ್ಯರೋಗ ಶಾಸ್ತ್ರಜ್ಞ, ಮಂಡ್ಯ ವಿ.ಸಿ.ಫಾರಂ-ಸರ್ಕಾರ ಪರಿಹಾರ ನೀಡಲಿಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯು ರೋಗ ತಡೆಗಟ್ಟುವ ಸಂಬಂಧ ತಕ್ಷಣ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರವು ರೋಗಬಾಧೆಗೆ ಒಳಗಾಗಿರುವ ತೆಂಗಿನ ತೋಟಗಳ ಮಾಲೀಕರಿಗೆ ಶೀಘ್ರ ಪರಿಹಾರ ನೀಡಬೇಕು.-ಕುರುಬೂರು ಶಾಂತಕುಮಾರ್, ರೈತ ಮುಖಂಡ