ಸಾರಾಂಶ
ಜಿಲ್ಲೆಯಲ್ಲಿ ನೋಂದಣಿಗೆ ಎಫ್ಸಿ (ಫಿಟ್ನೆಸ್ ಸರ್ಟಿಫಿಕೇಟ್) ಮುಗಿದುಹೋಗಿರುವ ವಾಹನಗಳನ್ನು ಕೂಡಲೇ ವಶ ಪಡಿಸಿಕೊಳ್ಳಬೇಕು. ಈ ವಾಹನಗಳು ಇತರೆ ಅಪರಾಧ ಪ್ರಕಾರಣಗಳಲ್ಲಿ ಬಳಕೆಯಾಗುವ ಸಂಭವ ಇರುವುದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಎಫ್ಸಿ ಮುಗಿದ ವಾಹನಗಳು ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಾಗಿ ನಿಗಾವಹಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ಹಾವೇರಿ: ಜಿಲ್ಲೆಯಲ್ಲಿ ನೋಂದಣಿಗೆ ಎಫ್ಸಿ (ಫಿಟ್ನೆಸ್ ಸರ್ಟಿಫಿಕೇಟ್) ಮುಗಿದುಹೋಗಿರುವ ವಾಹನಗಳನ್ನು ಕೂಡಲೇ ವಶ ಪಡಿಸಿಕೊಳ್ಳಬೇಕು. ಈ ವಾಹನಗಳು ಇತರೆ ಅಪರಾಧ ಪ್ರಕಾರಣಗಳಲ್ಲಿ ಬಳಕೆಯಾಗುವ ಸಂಭವ ಇರುವುದರಿಂದ ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಎಫ್ಸಿ ಮುಗಿದ ವಾಹನಗಳು ರಸ್ತೆಗೆ ಇಳಿಯದಂತೆ ಕಟ್ಟುನಿಟ್ಟಾಗಿ ನಿಗಾವಹಿಸಬೇಕು ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ಸಾರಿಗೆ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಗೆ ಬುಧವಾರ ಸಂಜೆ ದಿಢೀರ್ ಭೇಟಿ ನೀಡಿದ ಅವರು ವಿವಿಧ ಕಡತಗಳನ್ನು ಪರಿಶೀಲಿಸಿ, ಜಿಲ್ಲೆಯಲ್ಲಿ ಓಡಾಡುತ್ತಿರುವ ಬೇರೆ ರಾಜ್ಯದ ವಾಹನಗಳ ಸಂಖ್ಯೆ ಹಾಗೂ ಆ ವಾಹನಗಳು ಟ್ಯಾಕ್ಸ್ ಪಾವತಿಸಿದ ಕುರಿತು ಮಾಹಿತಿ ಕೇಳಿದರು. ಜಿಲ್ಲೆಯಲ್ಲಿ ಟ್ರ್ಯಾಕ್ಟರ್ಗಳ ನೋಂದಣಿ, ಅಂತಾರಾಷ್ಟ್ರೀಯ ವಾಹನಗಳಿಗೆ 30 ದಿನಗಳ ನಂತರ ಟ್ಯಾಕ್ಸ್ ಅನ್ವಯವಾಗುತ್ತದೆ, ಇನ್ಸೂರೆನ್ಸ್ ಇಲ್ಲದ ವಾಹನಗಳ ಸಂಖ್ಯೆ, ಸಿಜ್ ಮಾಡಲಾದ ವಾಹನಗಳ ಸಂಖ್ಯೆ, ವೈಟ್ ಬೋರ್ಡ್ ವಾಹನಗಳ ಸಂಖ್ಯೆ ಹಾಗೂ ಎಷ್ಟು ವಾಹನ ಚಾಲನಾ ತರಬೇತಿ ಶಾಲೆಗಳಿಗೆ ಪರವಾನಗಿ ನೀಡಲಾಗಿದೆ ಎಂದು ಸಾರಿಗೆ ಪ್ರಾದೇಶಿಕ ಅಧಿಕಾರಿಗಳನ್ನು ಪ್ರಶ್ನಿಸಿದರು.ಪರವಾನಗಿ ಇಲ್ಲದ ವಾಹನಗಳ ಪರಿಶೀಲನೆ ಮಾಡಿ: 46 ಶಾಲಾ ಮಕ್ಕಳ ಬಸ್ಗಳಿಗೆ ಲೈಸೆನ್ಸ್ ಮತ್ತು ಇನ್ಶೂರೆನ್ಸ್ ಇಲ್ಲದೆ ಚಾಲನೆ ಮಾಡಿರುವ ಬಗ್ಗೆ ದೂರು ಬಂದಿದೆ. ಈ ಕುರಿತು ಯಾಕೆ ಪರಿಶೀಲನೆ ಮಾಡಿಲ್ಲ ಎಂದು ಕೇಳಿದರು.ನಾಲ್ಕು ಜನರಿಗೆ ನೋಟಿಸ್
ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಮೂರು ಜನ ಸಿಬ್ಬಂದಿಗಳು ಸೇರಿದಂತೆ ಒಟ್ಟು ನಾಲ್ಕು ಜನರಿಗೆ ನೋಟಿಸ್ ಜಾರಿ ಮಾಡಿ, ವರದಿ ಸಲ್ಲಿಸುವಂತೆ ಸೂಚನೆ ನೀಡಿದರು. ಈ ವೇಳೆ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಆರ್.ಮುತಾಲಿಕದೇಸಾಯಿ, ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು. ಶಾಲಾ ವಾಹನಗಳ ವಶಕ್ಕೆ ಸೂಚನೆ: ಜಿಲ್ಲೆಯಲ್ಲಿ 2.5 ಲಕ್ಷ ವಾಹನಗಳಿದ್ದು, ಈ ಪೈಕಿ 58,555 ವಾಹನಗಳ ಎಫ್.ಸಿ. ಅವಧಿ ಮುಗಿದಿದ್ದು, ಈ ವಾಹನಗಳ ಪೈಕಿ 26 ಶಾಲಾ ವಾಹನಗಳಿವೆ. ಈ ಶಾಲಾ ವಾಹನಗಳನ್ನು ವಶಕ್ಕೆ ಪಡೆದು ವರದಿ ನೀಡುವಂತೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಿದ್ಯಾರ್ಥಿ ನಿಲಯಕ್ಕೆ ಭೇಟಿ: ನಗರದ ದೇವರಾಜ ಅರಸು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತರು, 6ನೇ ತರಗತಿ ವಿದ್ಯಾರ್ಥಿನಿಯರೊಂದಿಗೆ ಮಾತನಾಡಿ, ಶೌಚಾಲಯ ವ್ಯವಸ್ಥೆ, ಊಟದ ವ್ಯವಸ್ಥೆ, ಪುಸ್ತಕ, ರಾತ್ರಿ ಕಾವಲುಗಾರರ ಬಗ್ಗೆ ಮಾಹಿತಿ ಪಡೆದುಕೊಂಡರು.ಬೆಳಗ್ಗೆ ಬೇಗ ಎದ್ದು ಯೋಗ ಮಾಡಿ ಒಳ್ಳೆಯ ಉದ್ದೇಶದೊಂದಿಗೆ ಚೆನ್ನಾಗಿ ಓದಿ ನಿಮ್ಮ ತಂದೆ-ತಾಯಿ ಹೆಸರು ಉಳಿಸಿ. ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಚೆನ್ನಾಗಿ ಓದಿ ಸರ್ಕಾರ ನಿಮಗಾಗಿ ಸಾಕಷ್ಟು ಸೌಕರ್ಯಗಳನ್ನು ಕಲ್ಪಿಸಿದೆ. ಅದನ್ನು ಸರಿಯಾಗಿ ಬಳಸಿಕೊಳುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.