ಆರೈಕೆ ಆಸ್ಪತ್ರೆಯಿಂದ ದಾದಿಯರ ದಿನಾಚರಣೆ

| Published : May 17 2024, 12:31 AM IST

ಸಾರಾಂಶ

ದಾವಣಗೆರೆ ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಂತರ ರಾಷ್ಟ್ರೀಯ ದಾದಿಯರ ದಿನ ಆಚರಿಸಲಾಯಿತು.

ದಾವಣಗೆರೆ: ನಗರದ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅಂತರ ರಾಷ್ಟ್ರೀಯ ದಾದಿಯರ ದಿನ ಆಚರಿಸಲಾಯಿತು.

ಆಸ್ಪತ್ರೆ ಮುಖ್ಯಸ್ಥ ಡಾ. ಟಿ.ಜಿ. ರವಿಕುಮಾರ ಮಾತನಾಡಿ, ಫ್ಲಾರೆನ್ಸ್ ನೈಟಿಂಗೇಲ್ ಅವರು ತಮ್ಮ ವೃತ್ತಿಯಲ್ಲಿ ''ಲೇಡಿ ವಿತ್ ಲ್ಯಾಂಪ್'' ಎಂದು ಏಕೆ ಕರೆಯುತ್ತಾರೆ. ಅವರು, ವಿಶ್ವಯುದ್ಧದ ಸಂದರ್ಭದಲ್ಲಿ ಗಾಯಗೊಂಡಿದ್ದ ಸೈನಿಕರಿಗೆ ರಾತ್ರಿಯ ಸಮಯದಲ್ಲಿ ತಮ್ಮ ನರ್ಸಿಂಗ್ ಸೇವೆಯನ್ನು ನೀಡಿ, ಆಧುನಿಕ ಪ್ರಪಂಚಕ್ಕೆ ತಮ್ಮ ಕೊಡುಗೆ ಯಾವ ರೀತಿ ಇರಬೇಕು ಎಂಬುದನ್ನು ತೋರಿಸಿಕೊಟ್ಟರು. ಯಾವುದೇ ಆಸ್ಪತ್ರೆ, ಉತ್ತಮ ಸೇವೆಯನ್ನು ನೀಡಲು ನರ್ಸ್‌ಗಳ ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಜಗಳೂರು ಮಾಜಿ ಶಾಸಕ, ಆರೈಕೆ ಗ್ರೂಪ್ಸ್ ಅಧ್ಯಕ್ಷ ಟಿ.ಗುರುಸಿದ್ದನ ಗೌಡ, ವೈದ್ಯರು, ಸಿಬ್ಬಂದಿ, ಇತರರು ಇದ್ದರು. ನರ್ಸಿಂಗ್ ಸೂಪರಿಂಟೆಂಡೆಂಟ್ ಎಚ್.ಕೆ.ರೂಪ ಅವರನ್ನು ಸನ್ಮಾನಿಸಲಾಯಿತು.

- - - -16ಕೆಡಿವಿಜಿ33ಃ:

ದಾವಣಗೆರೆಯ ಆರೈಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ದಾದಿಯರ ದಿನಾಚರಣೆಯಲ್ಲಿ ನರ್ಸಿಂಗ್ ಸೂಪರಿಂಟೆಂಡೆಂಟ್‌ ಎಚ್.ಕೆ.ರೂಪಾ ಅವರನ್ನು ಸನ್ಮಾನಿಸಲಾಯಿತು.