ಆಪರೇಷನ್ ಸಿಂಧೂರ್: ಹಳಿಯಾಳದಲ್ಲಿ ಬಿಜೆಪಿ ಸಂಭ್ರಮ

| Published : May 08 2025, 12:38 AM IST

ಆಪರೇಷನ್ ಸಿಂಧೂರ್: ಹಳಿಯಾಳದಲ್ಲಿ ಬಿಜೆಪಿ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಗಣೇಶ ದೇವಸ್ಥಾನದಲ್ಲಿ ದೇಶದ ವೀರಯೋಧರಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಹಳಿಯಾಳ; ಕಾಶ್ಮೀರದ ಪಹಲ್ಗಾಮ್‌ನಲ್ಲಿ ದಾಳಿಗೈದ ಭಯೋತ್ಪಾದಕರಿಗೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಬೆಂಬಲಿಸಿ

ಬುಧವಾರ ಹಳಿಯಾಳ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.ಪಟ್ಟಣದ ಗಣೇಶ ದೇವಸ್ಥಾನದಲ್ಲಿ ದೇಶದ ವೀರಯೋಧರಿಗಾಗಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ನಂತರ ಪಟ್ಟಣದಲ್ಲಿ ರಾಣಿ ಚೆನ್ನಮ್ಮ, ಛತ್ರಪತಿ ಶಿವಾಜಿ ಪಟಾಕಿ ಸಿಡಿಸಿ ಭಾರತೀಯ ಸೇನೆಗೆ ಹಾಗೂ ಪ್ರಧಾನ ಮಂತ್ರಿಗಳಿಗೆ ಜೈಕಾರ ಹಾಕಲಾಯಿತು.

ಬಿಜೆಪಿ ಪ್ರಮುಖರಾದ ಸಂತೋಷ ಘಟಕಾಂಬಳೆ, ತಾನಾಜಿ ಪಟ್ಟೇಕರ, ಚೂಡಪ್ಪಾ ಬೊಬಾಟೆ, ಪ್ರಮೋದ ಹುನ್ಸವಾಡಕರ, ಜಯಲಕ್ಷ್ಮ ಚವ್ಹಾಣ ಇದ್ದರು.