ಧರ್ಮಸ್ಥಳಕ್ಕೆ ಪದ್ಮರಾಜ್‌ ಪಾದಯಾತ್ರೆ

| Published : Mar 05 2024, 01:31 AM IST / Updated: Mar 05 2024, 10:04 AM IST

ಸಾರಾಂಶ

ಬಸವೇಶ್ವರ ನಗರದಿಂದ ಧರ್ಮಸ್ಥಳಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ನೇತೃತ್ವದ ಪಾದಯಾತ್ರೆ ತಂಡ ಹಾಸನ ಜಿಲ್ಲೆಯ ಬೇಲೂರು ಮೂಲಕ ಮೂಡಿಗೆರೆ ದಾಟಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಬಸವೇಶ್ವರ ನಗರದಿಂದ ಧರ್ಮಸ್ಥಳಕ್ಕೆ ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ನೇತೃತ್ವದ ಪಾದಯಾತ್ರೆ ತಂಡ ಹಾಸನ ಜಿಲ್ಲೆಯ ಬೇಲೂರು ಮೂಲಕ ಮೂಡಿಗೆರೆ ದಾಟಿದೆ.

ಪದ್ಮರಾಜ್ ನೇತೃತ್ವದಲ್ಲಿ ಸತತ 42ನೇ ವರ್ಷದ ಈ ಪಾದಯಾತ್ರೆ ತಂಡವು ಬೇಲೂರಿನ ಇತಿಹಾಸ ಪ್ರಸಿದ್ಧ ಚನ್ನಕೇಶವ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಧರ್ಮಸ್ಥಳದತ್ತ ಹೆಜ್ಜೆ ಹಾಕಿತು.

ದೇವರಿಗೆ ಪೂಜೆ ಸಲ್ಲಿಸಿದ ನಂತರ ಬಿಬಿಎಂಪಿ ಮಾಜಿ ಸದಸ್ಯ ಎಸ್.ಎಚ್.ಪದ್ಮರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಪಾದಯಾತ್ರೆ ಮಾಡುತ್ತಿದ್ದೇನೆ. ಕ್ಷೇತ್ರದ ಎಲ್ಲ ಜನರಿಗೂ ಒಳಿತಾಗಲೆಂದು ಈ ಪಾದಯಾತ್ರೆ ನಡೆಸಲಾಗುತ್ತಿದೆ. 

ಎಲ್ಲರಿಗೂ ಆರೋಗ್ಯ, ನೆಮ್ಮದಿ ಸಿಗಬೇಕು. ವೈಯಕ್ತಿಕವಾಗಿ ಹಾಗೂ ಸರ್ಕಾರದಿಂದ ಕೈಗೊಳ್ಳಬೇಕಾದ ಕೆಲಸಗಳನ್ನು ಮುಂದುವರೆಸುತ್ತೇನೆ. 

ಇದಕ್ಕೆ ಶಕ್ತಿ ಬಯಸಿ ಶ್ರೀ ಮಂಜುನಾಥನನ್ನು ಪ್ರಾರ್ಥಿಸುತ್ತೇನೆ. ಸಂಕಷ್ಟಗಳ ಸಂದರ್ಭದಲ್ಲಿ ಜನರ ಜೊತೆಗೇ ಇರುತ್ತೇನೆ ಎಂದು ಸ್ಪಷ್ಟಪಡಿಸಿದರು.

70 ಜನರ ತಂಡ ಈ ಪಾದಯಾತ್ರೆಯಲ್ಲಿದ್ದು ಸುಬ್ರಹ್ಮಣ್ಯನಗರ ಬಿಬಿಎಂಪಿ ಮಾಜಿ ಸದಸ್ಯ ಮಂಜುನಾಥ್ ಅವರೂ ಈ ಯಾತ್ರೆಗೆ ಸಾಥ್ ನೀಡಿದ್ದಾರೆ.