ಚಿತ್ರಕಲೆಯಿಂದ ಆಲೋಚನಾ ಶಕ್ತಿ ವೃದ್ಧಿ: ಅಪೂರ್ವ ಅಚ್ರಪಾಡಿ

| Published : Nov 20 2025, 01:30 AM IST

ಸಾರಾಂಶ

ಕನ್ನಡಪ್ರಭ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಮಹಾಸೇನ ಬುಕ್ಸ್ ಮತ್ತು ಸ್ಟೇಷನರಿ ಸೆಂಟರ್ ಸುಬ್ರಹ್ಮಣ್ಯ, ಅರಣ್ಯ ಇಲಾಖೆ ಸುಬ್ರಹ್ಮಣ್ಯ ಸಹಯೋಗದಲ್ಲಿ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು.ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಆಯೋಜಿಸಲಾದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಕಡಬ ತಾಲೂಕು ಮಟ್ಟದ ಸ್ಪರ್ಧೆ ಸಮಾರೋಪ ನಡೆಯಿತು.

ಸುಬ್ರಹ್ಮಣ್ಯದಲ್ಲಿ ಕನ್ನಡಪ್ರಭದ ಕಡಬ ತಾಲೂಕು ಚಿತ್ರಕಲಾ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಚಿತ್ರಕಲೆ ಎಂಬುದು ನಮ್ಮ ಆಲೋಚನೆ, ಕಲ್ಪನೆಯನ್ನು ಬಣ್ಣ, ರೇಖೆಗಳ ಮೂಲಕ ವ್ಯಕ್ತಪಡಿಸುವ ಮಾಧ್ಯಮ. ಅರಣ್ಯ ಮತ್ತು ವನ್ಯಜೀವಿ ಎಂಬ ವಿಷಯದಿಂದ ಈ ವಿಚಾರದಲ್ಲಿ ಮಕ್ಕಳಲ್ಲಿ ಆಲೋಚಿಸುವ ಗುಣ ಬೆಳೆಯಲು, ಅರಿವು ಮೂಡಲು ಕಾರಣವಾಗಲಿದೆ. ವಿಷಯದ ಬಗ್ಗೆ ಸೂಕ್ಷ್ಮತೆ, ಅಧ್ಯಯನ ನಡೆಸಿ ಭಾಗವಹಿಸುವುದು ಸೂಕ್ತ. ಅರಣ್ಯ, ಪರಿಸರದ ಬಗ್ಗೆ ಜವಾಬ್ದಾರಿ ಹೆಚ್ಚಿಸಲು ಕೂಡ ಈ ಕಾರ್ಯಕ್ರಮ ಪ್ರಯೋಜನವಾಗಲಿದೆ ಎಂದು ಉಪ ವಲಯ ಅರಣ್ಯಾಧಿಕಾರಿ ಅಪೂರ್ವ ಅಚ್ರಪಾಡಿ ಹೇಳಿದರು.

ಅವರು ಕನ್ನಡಪ್ರಭ ವತಿಯಿಂದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜು, ಪ್ರೆಸ್ ಕ್ಲಬ್ ಸುಬ್ರಹ್ಮಣ್ಯ, ರೋಟರಿ ಕ್ಲಬ್ ಸುಬ್ರಹ್ಮಣ್ಯ, ಮಹಾಸೇನ ಬುಕ್ಸ್ ಮತ್ತು ಸ್ಟೇಷನರಿ ಸೆಂಟರ್ ಸುಬ್ರಹ್ಮಣ್ಯ, ಅರಣ್ಯ ಇಲಾಖೆ ಸುಬ್ರಹ್ಮಣ್ಯ ಸಹಯೋಗದಲ್ಲಿ ಸುಬ್ರಹ್ಮಣ್ಯದ ಎಸ್.ಎಸ್.ಪಿ.ಯು.ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಬುಧವಾರ ಆಯೋಜಿಸಲಾದ ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯ ಕಡಬ ತಾಲೂಕು ಮಟ್ಟದ ಸ್ಪರ್ಧೆ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅರಣ್ಯ ವಿಚಾರದ ಚಿತ್ರಕಲಾ ಸ್ಪರ್ಧೆ ಮಕ್ಕಳಲ್ಲಿ ಅರಣ್ಯ, ಪರಿಸರ ಸಂರಕ್ಷಣೆ ಹಾಗೂ ಜಾಗೃತಿಗೆ ಪೂರಕವಾಗಲಿದೆ ಎಂದರು.ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್ ಮಾತನಾಡಿ, ರೋಟರಿ ಕ್ಲಬ್ ಸಮಾಜಮುಖಿ ಕೆಲಸ ಮಾಡುತ್ತಿದೆ. ಜೊತೆಗೆ ಮಕ್ಕಳ ಪ್ರತಿಭೆಗಳನ್ನು ಗುರುತಿಸುವ ಕಾರ್ಯವನ್ನು ಪ್ರೋತ್ಸಾಹಿಸುತ್ತಿದ್ದೇವೆ. ಮಕ್ಕಳ ಬೆಳವಣಿಗೆ ಚಿತ್ರಕಲಾ ಸ್ಪರ್ಧೆಯಿಂದ ಸಾಧ್ಯವಾಗಲಿದೆ ಎಂದರು.

ತೀರ್ಪುಗಾರರಾಗಿ ಭಾಗವಹಿಸಿದ್ದ ವನ್ಯಜೀವಿ ಅಪರಾಧ ನಿಯಂತ್ರಣ ವಿಭಾಗದ ಭುವನೇಶ್ ಕೈಕಂಬ ಮಾತನಾಡಿ, ಮಕ್ಕಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಮುಂದೆ ಪ್ರಯೋಜನವಾಗಲಿದೆ. ಚಿತ್ರಕಲೆಯಲ್ಲಿ ನಮಗೆ ನೀಡಿರುವ ವಿಷಯದ ಬಗ್ಗೆ ಸರಿಯಾಗಿ ಮಾಹಿತಿ ಪಡೆದು ಅದರಂತೆ ಮುಂದುವರಿಯಬೇಕು. ನಮ್ಮ ಚಿತ್ರದಲ್ಲೇ ಅದರ ಬಗ್ಗೆ ವಿವರ ನೀಡುವಂತಿರಬೇಕು. ಮಕ್ಕಳಲ್ಲಿ ಅರಣ್ಯ, ಪರಿಸರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸಲು ಈ ಚಿತ್ರಕಲಾ ಸ್ಪರ್ಧೆ ಸೂಕ್ತ ಎಂದು ಹೇಳಿದರು.ಎಸ್‌ಎಸ್‌ಪಿಯು ಕಾಲೇಜಿ ಪ್ರಾಂಶುಪಾಲ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಶ್ರೀಕುಮಾರ್ ಬಿಲದ್ವಾರ, ಕಲಾವಿದ ಸುಬ್ರಹ್ಮಣ್ಯ ಏನೆಕಲ್ಲು, ಚಿತ್ರ ಕಲಾವಿದ ಶಿವ ಭಟ್ ಕಾಂಚನ, ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ಮುಖ್ಯಶಿಕ್ಷಕಿ ನಂದಾ ಹರೀಶ್ ಇದ್ದರು.

ಕನ್ನಡಪ್ರಭದ ಹಿರಿಯ ಪ್ರಧಾನ ವರದಿಗಾರ ಆತ್ಮಭೂಷಣ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಬ್ರಹ್ಮಣ್ಯ ವರದಿಗಾರ ಪ್ರಕಾಶ್ ಸುಬ್ರಹ್ಮಣ್ಯ ಸ್ವಾಗತಿಸಿದರು. ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ ನಿರೂಪಿಸಿ ವಂದಿಸಿದರು. ಕನ್ನಡಪ್ರಭ ಸಿಬ್ಬಂದಿಗಳಾದ ದೀಕ್ಷಿತ್‌ ಸಹಕರಿಸಿದರು. ಎಸ್‌ಎಸ್‌ಪಿಯು ಕಾಲೇಜಿನ ಪ್ರೌಢಶಾಲಾ ಮುಖ್ಯಶಿಕ್ಷಕಿ ನಂದಾ ಹರೀಶ್ ಬೆಳಗ್ಗೆ ಚಿತ್ರಕಲಾ ಸ್ಪರ್ಧೆಗೆ ಚಾಲನೆ ನೀಡಿದರು. ಕರ್ನಾಟಕದ ಅರಣ್ಯ ಅಥವಾ ಕರ್ನಾಟಕ ವನ್ಯಜೀವಿ (ವರ್ಣಚಿತ್ರ ಸ್ಪರ್ಧೆ) ವಿಷಯದಲ್ಲಿ ಚಿತ್ರ ಸ್ಪರ್ಧೆ ನಡೆಯಿತು.ಬಾಕ್ಸ್‌---

ಚಿತ್ರಕಲಾ ಸ್ಪರ್ಧೆ ವಿಜೇತರ ವಿವರ

4 ಮತ್ತು 5ನೇ ತರಗತಿ ವಿಭಾಗ:

ಪ್ರಥಮ-ಸುಶಾಂತ್‌ ಎಂ.ಬಿ. ಏನೆಕಲ್ಲು ಹಿರಿಯ ಪ್ರಾಥಮಿಕ ಶಾಲೆ, ದ್ವಿತೀಯ-ಹೃತಿಕ್‌ ಶೆಟ್ಟಿ ಕುಮಾರಸ್ವಾಮಿ ವಿದ್ಯಾಲಯ, ತೃತೀಯ-ರತನ್‌, ಹಿರಿಯ ಪ್ರಾಥಮಿಕ ಶಾಲೆ ಸುಬ್ರಹ್ಮಣ್ಯ, ಸಮಾಧಾನಕರ ಬಹುಮಾನ-ಧೃತಿ ರೈ, ಕುಮಾರಸ್ವಾಮಿ ವಿದ್ಯಾಲಯ ಮತ್ತು ಧೃತಿ ಎ.ಪಿ. ಕುಮಾರಸ್ವಾಮಿ ವಿದ್ಯಾಲಯ

6 ಮತ್ತು 7ನೇ ತರಗತಿ ವಿಭಾಗ: ಪ್ರಥಮ-ಷಷ್ಠಿ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ದ್ವಿತೀಯ-ಅದ್ವಿತಿ ಎಸ್‌. ಶೆಟ್ಟಿ, ಸುಬ್ರಹ್ಮಣ್ಯ ಸರ್ಕಾರಿ ಪ್ರಾಥಮಿಕ ಶಾಲೆ, ತೃತೀಯ-ವಿಭಾ ಕೆ.ಎಸ್‌. ಸುಬ್ರಹ್ಮಣ್ಯ ಪ್ರಾಥಮಿಕ ಶಾಲೆ, ಸಮಾಧಾನಕರ ಬಹುಮಾನ-ಕುಶಿತ್‌ ಮಲ್ಲಾರ, ಕುಮಾರಸ್ವಾಮಿ ವಿದ್ಯಾಲಯ ಮತ್ತು ಶಾಶ್ವತ್‌ ವಿ.ಎ. ಸರಸ್ವತಿ ವಿದ್ಯಾಲಯ ಕಡಬ

8, 9, 10 ನೇ ತರಗತಿ ವಿಭಾಗ:

ಪ್ರಥಮ-ಆದ್ಯಬಿ. ಕುಮಾರಸ್ವಾಮಿ ಶಾಲೆ, ದ್ವಿತೀಯ-ಅನನ್ಯ ಎಂ., ಎಸ್‌.ಎಸ್‌.ಹೈಸ್ಕೂಲ್‌, ತೃತೀಯ-ಆದ್ಯತಾ ಎಂ., ಕುಮಾರಸ್ವಾಮಿ ಸ್ಕೂಲ್‌, ಸಮಾಧಾನಕರ ಬಹುಮಾನ-ಪೂಜಾ, ಎಸ್‌.ಎಸ್‌.ಹೈಸ್ಕೂಲ್‌ ಮತ್ತು ನಿಖಿಲ್‌ ಕೆ., ಗೋಪಾಲಕೃಷ್ಣ ಹೈಸ್ಕೂಲ್‌, ಬಿಳಿನೆಲೆ.

ಮೂರು ವಿಭಾಗಗಳಲ್ಲಿ ಒಟ್ಟು 90 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.