ಕನ್ನಡಪ್ರಭ ವಾರ್ತೆ ಬೆಳಗಾವಿ

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತಮದಡ್ಡಿ ಗ್ರಾಮದಲ್ಲಿ ಆಚಾರ್ಯ ಶ್ರೀ 108 ಶಾಂತಿಸೇನ ಮುನಿ ಮಹಾರಾಜ ಅವರಿಗೆ ವಿಜಯಪುರ ಜಿಲ್ಲೆಯ ತಿಕೋಟ ತಾಲೂಕಿನ ಶ್ರೀಕ್ಷೇತ್ರ ಬಾಬಾನಗರದ ಶ್ರೀ 1008 ಪಾರ್ಶ್ವನಾಥ ಜೈನ ಮಂದಿರ ಕಮಿಟಿ ವತಿಯಿಂದ ಯುಗಾದಿ ವಾರ್ಷಿಕ ಪೂಜೆಗಾಗಿ ಜಗದ್ಗುರು ಸ್ವಸ್ತಿಶ್ರೀ ಜಿನಸೇನ ಭಟ್ಟಾರಕ ಸ್ವಾಮೀಜಿ ಅವರ ಆದೇಶದಂತೆ ಆಹ್ವಾನಿಸಿ, ಆಶೀರ್ವಾದ ಪಡೆದುಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಭಾರತೀಯ ಜೈನ ಸಂಘಟನೆಯ ರಾಜ್ಯ ಸಂಚಾಲಕ ಅರುಣ ಎಸ್‌.ಯಲಗುದ್ರಿ, ಬಾಬಾನಗರದ ಶ್ರೀ 1008 ಪಾರ್ಶ್ವನಾಥ ಜೈನ ಮಂದಿರ ಕಮಿಟಿ ಉಪಾಧ್ಯಕ್ಷ ಪಿ.ಟಿ.ಪಾಟೀಲ, ಟ್ರಸ್ಟಿಗಳಾದ ಸುಕುಮಾರ ಪಾಟೀಲ, ಮಲಗೊಂಡ ಪಾಟೀಲ, ದೇವಗೊಂಡ ಪಾಟೀಲ ಸೇರಿದಂತೆ ಜೈನ ಹಿರಿಯ ಮುಖಂಡರು ಉಪಸ್ಥಿತರಿದ್ದರು.