ಯಾವ ವ್ಯಕ್ತಿಯಲ್ಲಿ ಯಾವ ಪ್ರತಿಭೆ ಅಡಗಿದೆ ಅನ್ನುವುದು ಯಾರಿಗೂ ತಿಳಿಯದ ವಿಷಯ
ಯಲಬುರ್ಗಾ: ಮಕ್ಕಳಲ್ಲಿರುವ ಸುಪ್ತ ಪ್ರತಿಭೆ ಅನಾವರಣಕ್ಕೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ಮುಖಂಡ ಗಂಗಪ್ಪ ಹವಳಿ ಹೇಳಿದರು.
ತಾಲೂಕಿನ ಕರಮುಡಿ ಗ್ರಾಮದ ಶಾಂತಮ್ಮ ಕಂಪಗೌಡ್ರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಿದ್ದ ಮುಧೋಳ ಕ್ಲಸ್ಟರ್ ಮಟ್ಟದ ೨೦೨೫-೨೬ನೇ ಸಾಲಿನ ಪ್ರತಿಭಾ ಕಾರಂಜಿ ಕಲೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಯಾವ ವ್ಯಕ್ತಿಯಲ್ಲಿ ಯಾವ ಪ್ರತಿಭೆ ಅಡಗಿದೆ ಅನ್ನುವುದು ಯಾರಿಗೂ ತಿಳಿಯದ ವಿಷಯ. ಇಂತಹ ಕಾರ್ಯಕ್ರಮದಲ್ಲಿ ಅವರಲ್ಲಿರುವ ಪ್ರತಿಭೆ ಪ್ರದರ್ಶನಗೊಳ್ಳಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವುದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ಜಗದೀಶ ಬಳಿಗಾರ ಮಾತನಾಡಿದರು.ಎಸ್ಡಿಎಂಸಿ ಅಧ್ಯಕ್ಷ ಶಾಮೀದ್ಸಾಬ್ ಮುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಲಿಂಗರಾಜ ಉಳ್ಳಾಗಡ್ಡಿ ಉದ್ಘಾಟಿಸಿದರು.
ಈ ಸಂದರ್ಭ ಮುಖ್ಯಶಿಕ್ಷಕ ಬಸವರಾಜ ಕರಾಟೆ, ಬಿಆರ್ಸಿ ಶರಣಗೌಡ ಪಾಟೀಲ್, ಶಿವಪುತ್ರಪ್ಪ ಮಲಿಗೋಡದ, ಗಂಗಮ್ಮ ಸೊಬಗಿನ, ಸುವರ್ಣಾ ಶಿಳ್ಳಿನ, ದಳಪತಿ ಶರಣಪ್ಪಗೌಡ ಪಾಟೀಲ್, ರಾಮಣ್ಣ ಹೊಕ್ಕಳದ, ದೇವಮ್ಮ ರಾಟಿ, ವಿರೂಪಾಕ್ಷಪ್ಪ ಉಳ್ಳಾಗಡ್ದಿ, ವೀರಣ್ಣ ನಿಂಗೋಜಿ, ಶಿವಪುತ್ರಪ್ಪ ಮಲಿಗೋಡದ, ಇಮಾಮ್ಸಾಬ್ ಗುಳೇದಗುಡ್ಡ, ನಿಖಿಲ್ ಗೊಂಗಡಶೆಟ್ಟಿ, ಗೌಡಪ್ಪ ಬಲಕುಂದಿ, ರವಿ ಕೆಂಚರಡ್ಡಿ, ಮುತ್ತಪ್ಪ ಗೊಂಗಡಶೆಟ್ಟಿ, ಮರ್ಧಾನ್ಸಾಬ್ ಮುಲ್ಲಾ, ಅನ್ನಮ್ಮ ಕುರಿ, ಯಮನೂರಪ್ಪ ಹವಳಿ, ಯಮನೂರಪ್ಪ ಹಾದಿಮನಿ, ಬಸವರಾಜ ವಡ್ಡರ, ಶರಣಪ್ಪ ಮುಗಳಿ, ವೀರನಗೌಡ ಲಿಂಬನಗೌಡರ, ಮಲ್ಲಿಕಾರ್ಜುನ ಸೇರಿದಂತೆ ಮತ್ತಿತರರು ಇದ್ದರು.