ಸಮೀಪದ ಬಜೆಗುಂಡಿ ಖಿಳರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಂ ಭಾಂದವರು ಶುಕ್ರವಾರ ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿನಲ್ಲಿ ಪ್ರಾರ್ಥನೆ ಸಲ್ಲಿಸಿ ಹಬ್ಬದ ಆಚರಣೆ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಸೋಮವಾರಪೇಟೆ: ಸಮೀಪದ ಬಜೆಗುಂಡಿ ಖಿಳರಿಯಾ ಜುಮಾ ಮಸೀದಿಯಲ್ಲಿ ಮುಸ್ಲಿಂ ಭಾಂದವರು ಶುಕ್ರವಾರ ಈದ್ ಉಲ್ ಫಿತರ್ ಹಬ್ಬದ ಪ್ರಯುಕ್ತ ಬೆಳಿಗ್ಗೆ ಮಸೀದಿನಲ್ಲಿ ಪ್ರಾರ್ಥನೆ ಸಲ್ಲಿಸಿ ಹಬ್ಬದ ಆಚರಣೆ ಮಾಡಿ ಶುಭಾಶಯ ವಿನಿಮಯ ಮಾಡಿಕೊಂಡರು.

ಜಮಾಅತ್ ಅಧ್ಯಕ್ಷ ಕೆ.ಎ. ಯಾಕುಬ್ ಮಾತನಾಡಿ ವಿಶ್ವ ಶಾಂತಿಗಾಗಿ ಸರ್ವರೂ ಪ್ರಾರ್ಥಿಸೋಣ. ವಿಶ್ವದ ಎಲ್ಲೆಡೆ ಆವರಿಸಿರುವ ಯುದ್ಧ ಭೀತಿ ಮುಕ್ತಾಯವಾಗಿ ಸರ್ವರೂ ನೆಮ್ಮದಿ, ಶಾಂತಿಯಿಂದ ಜೀವನ ನಡೆಸುವಂತಾಗಲಿ ಎಂದು ತಿಳಿಸಿದರು. ಈ ಸಂದರ್ಭ ಜಮಾಅತ್ ಖತೀಬರಾದ ಉಬೈದ್ ಫೈಝಿ ಪ್ರಾರ್ಥನೆ ನೇತೃತ್ವ ವಹಿಸಿದರು. ಜಮಾಅತ್ ಕಮಿಟಿ ಸದಸ್ಯರು, ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.