ಸಾರಾಂಶ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಕೃಷ್ಣಾ ನದಿ ತೀರದ ಹಲವಾರು ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಸುಕ್ಷೇತ್ರ ಶ್ರವಬೆಳಗೊಳಕ್ಕೆ ಪ್ರತಿನಿತ್ಯ ಹೋಗುತ್ತಾರೆ. ಅವರಿಗೆ ಅಥಣಿ ಡಿಪೋದಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಅವರಿಗೆ ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ ಹಾಗೂ ಮತ್ತಿತರರು ಮನವಿ ನೀಡಿದರು.
ಕನ್ನಡಪ್ರಭ ವಾರ್ತೆ ಕಾಗವಾಡ
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿ ಕೃಷ್ಣಾ ನದಿ ತೀರದ ಹಲವಾರು ಗ್ರಾಮಗಳಿಂದ ಪ್ರತಿನಿತ್ಯ ನೂರಾರು ಭಕ್ತರು ಸುಕ್ಷೇತ್ರ ಶ್ರವಬೆಳಗೊಳಕ್ಕೆ ಪ್ರತಿನಿತ್ಯ ಹೋಗುತ್ತಾರೆ. ಅವರಿಗೆ ಅಥಣಿ ಡಿಪೋದಿಂದ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕ ರಾಜು ಕಾಗೆ ಅವರಿಗೆ ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಚಾಲಕ ಅರುಣಕುಮಾರ ಯಲಗುದ್ರಿ ಹಾಗೂ ಮತ್ತಿತರರು ಮನವಿ ನೀಡಿದರು.ಹಾಸನ ಜಿಲ್ಲೆಯ ಶ್ರೀಕ್ಷೇತ್ರ ಶ್ರವಣಬೆಳಗೊಳವು ವಿಶ್ವವಿಖ್ಯಾತ ಏಕ ಶಿಲೆಯಿಂದ ನಿರ್ಮಾಣವಾದ 58 ಅಡಿ ಎತ್ತರದ ಗೊಮ್ಮಟೇಶ್ವರ ಭಗವಾನ್ ಬಾಹುಬಲಿ ಸ್ವಾಮಿ ನೆಲೆಸಿರುವ ಧಾರ್ಮಿಕ ಹಾಗೂ ಪವಿತ್ರ ಜೈನ ಯಾತ್ರಾ ತಾಣವಾಗಿದೆ. ಸುಮಾರು 2300 ವರ್ಷಗಳ ಇತಿಹಾಸವಿರುವ ಶ್ರವಣಬೆಳಗೊಳದಲ್ಲಿ ಜೈನ ಬಸದಿಗಳು, ಗುಹೆಗಳು, ಸ್ಮಾರಕಗಳು ನಿಷಿಧಿ ಮಂಟಪಗಳು 550ಕ್ಕೂ ಶಿಲಾ ಶಾಸನಗಳು ಇರುತ್ತವೆ. ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಹೋಗಿ ಬರಲು 2 ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದರು.ಜೈನ ಸಮುದಾಯದ ಮುಖಂಡರ ಮನವಿಯನ್ನು ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಹಾಗೂ ಕಾಗವಾಡ ಶಾಸಕ ರಾಜು ಕಾಗೆಯವರು ಮನವಿ ಸ್ವೀಕರಿಸಿ ಬೇಡಿಕೆ ಈಡೇರಿಕೆಗೆ ಭರವಸೆ ನೀಡಿದರು.ಈ ವೇಳೆ ಅಥಣಿ ಶಾಸಕ ಲಕ್ಷ್ಮಣ ಸವದಿ ಸೇರಿದಂತೆ ಮುಖಂಡರಾದ ಎ.ಸಿ.ಪಾಟೀಲ, ಶ್ರೀಕಾಂತ ಅಸ್ಕಿ, ನೇಮಿನಾಥ ಯಕ್ಸಂಬಿ, ಪ್ರದೀಪ ನಂದಗಾಂವೆ ಸೇರಿದಂತೆ ಅನೇಕರು ಇದ್ದರು.
ಈ ಕುರಿತು ನಮ್ಮ ನಿಗಮದ ಅಧ್ಯಕ್ಷರೊಂದಿಗೆ ಚರ್ಚಿಸಿ ಅಥಣಿಯಿಂದ ಶ್ರವಣಬೆಳಗೊಳಕ್ಕೆ ಯಾವಾಗ ಮತ್ತು ಯಾವ ಮಾರ್ಗವಾಗಿ ಬಸ್ ಓಡಿಸಬೇಕೆಂದು ಚರ್ಚಿಸಿ ಶೀಘ್ರ ಬಸ್ ಓಡಿಸುವ ವ್ಯವಸ್ಥೆ ಕಲ್ಪಿಸಲಾಗುವುದು.-ರಾಜು ಕಾಗೆ,
ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು.ಭಗವಾನ್ ಬಾಹುಬಲಿ ಸ್ವಾಮಿಯ ದರ್ಶನಕ್ಕೆ ದೇಶ-ವಿದೇಶಗಳಿಂದ ಯಾತ್ರಿಕರು, ಭಕ್ತರು ಪ್ರತಿನಿತ್ಯ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಪ್ರತಿ 1 ವರ್ಷಗಳಿಗೊಮ್ಮೆ ಮಹಾಮಸ್ತಕಾಭಿಷೇಕ ಜರುಗುತ್ತದೆ. ಆದ್ದರಿಂದ ಅಥಣಿ, ಕಾಗವಾಡ, ಚಿಕ್ಕೋಡಿ, ಬೆಳಗಾವಿ ಈ ಭಾಗದಲ್ಲಿ ಜೈನ ಸಮುದಾಯದವರು ಹೆಚ್ಚಾಗಿದ್ದಾರೆ. ಹೀಗಾಗಿ ಶ್ರೀಕ್ಷೇತ್ರ ಶ್ರವಣಬೆಳಗೊಳಕ್ಕೆ ಹೋಗಿ ಬರಲು ಬಸ್ ವ್ಯವಸ್ಥೆ ಮಾಡಿದರೇ ಭಕ್ತರಿಗೆ ಅನುಕೂಲವಾಗುವುದು.-ಅರುಣಕುಮಾರ ಯಲಗುದ್ರಿ,
ಭಾರತೀಯ ಜೈನ್ ಸಂಘಟನೆಯ ರಾಜ್ಯ ಸಂಚಾಲಕರು.