ಸಾರಾಂಶ
ಮದುವೆಯಾದವರು ಸತಿ-ಪತಿ ಒಂದಾಗಿ, ಬೇವು ಬೆಲ್ಲದಂತೆ ಜೀವನ ನಡೆಸಬೇಕು. ಸಾಮೂಹಿಕ ಮದುವೆಗಳು ಬಡವರ ಪಾಲಿನ ವರದಾನವಾಗಿವೆ
ಹನುಮಸಾಗರ: ಮಕ್ಕಳಿಗೆ ಸಂಸ್ಕಾರದೊಂದಿಗೆ, ಗುಣಾತ್ಮಕ ಶಿಕ್ಷಣ ಕೊಡಿಸಬೇಕು ಎಂದು ಕುದರಿಮೋತಿ ವಿಜಯಮಹಾಂತ ಸ್ವಾಮೀಜಿ ಹೇಳಿದರು.
ಗ್ರಾಮದ ಶ್ರೀಕರಿಸಿದ್ದೇಶ್ವರ ಮಠದ ಜಾತ್ರೆಯ ನಿಮಿತ್ತ ಹಮ್ಮಿಕೊಳ್ಳಲಾಗಿದ್ದ ಸಾಮೂಹಿಕ ಮದುವೆ ಕಾರ್ಯಕ್ರಮದಲ್ಲಿ ಮಾತನಾಡಿದರು.ಮದುವೆಯಾದವರು ಸತಿ-ಪತಿ ಒಂದಾಗಿ, ಬೇವು ಬೆಲ್ಲದಂತೆ ಜೀವನ ನಡೆಸಬೇಕು. ಸಾಮೂಹಿಕ ಮದುವೆಗಳು ಬಡವರ ಪಾಲಿನ ವರದಾನವಾಗಿವೆ ಎಂದರು.
ಹಜರತ್ ಸೈಯ್ಯದಷಾ ಮುರ್ತುಜ ಉಲಾ ಖಾದರಿ, ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪುರ, ಗ್ರಾಪಂ ಅಧ್ಯಕ್ಷ ರುದ್ರಗೌಡ ಗೌಡಪ್ಪನವರ, ಕರಿಸಿದ್ಧಪ್ಪ ಕುಷ್ಟಗಿ, ರಾಚಪ್ಪ ಚಿನಿವಾಲರ, ಬಸವರಾಜ ಚಿನಿವಾಲರ, ವಿಶ್ವನಾಥ ಕನ್ನೂರ, ಬಸವಂತಪ್ಪ ಕಂಪ್ಲಿ, ಸಂಗಯ್ಯ ವಸ್ತ್ರದ, ಚಂದಪ್ಪ ಅಗಸಿಮುಂದಿನ, ಮಹಾಂತೇಶ ಅಗಸಿಮುಂದಿನ, ಪ್ರಶಾಂತ ಗಡಾದ, ಬಸವರಾಜ ಬಾಚಲಾಪುರ, ಅಂದಾನಯ್ಯ ಸೊಪ್ಪಿಮಠ, ಸಿದ್ಧಯ್ಯ ಬಾಳಿಹಳ್ಳಮಠ, ಮುತ್ತು ಪತ್ತಾರ, ನಿಂಗಪ್ಪ ಮೋಟಗಿ, ಮಹಾಂತಯ್ಯ ಕೋಮಾರಿ, ಶ್ರೀಶೈಲ್ ಮೋಟಗಿ, ಸಂಗಮೇಶ ಕರಂಡಿ, ನಿಂಗಪ್ಪ ಮೂಲಿಮನಿ, ರಮೇಶ ನಿಡಗುಂದಿ, ಶರಣಪ್ಪ ಹುಬ್ಬಳ್ಳಿ, ಈರಣ್ಣ ಹುನಗುಂಡಿ ಹಾಗೂ ಶ್ರೀಪತ್ರಿಬಸವೇಶ್ವರ ತರುಣ ಸಂಘದವರು ಇದ್ದರು.ಮಲ್ಲಯ್ಯ ಕೋಮಾರಿ ನಿರ್ವಹಿಸಿದರು.