ಸಾರಾಂಶ
ಬಾಲ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದ ಡಾ. ಪುನೀತ್ ರಾಜ್ಕುಮಾರ್ ಅವರು ತಮ್ಮ ನಟನೆ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜತೆಗೆ ತಮ್ಮ ಮಾನವೀಯ ಗುಣಗಳಿಂದ ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ .
ಪಾಂಡವಪುರ: ತಾಲೂಕಿನ ಅರಳಕುಪ್ಪೆ ಬೆಳದಿಂಗಳ ಬಳಗ ಮತ್ತು ಫ್ರೆಂಡ್ಸ್ ಗ್ರೂಪ್ಸ್ ವತಿಯಿಂದ ಗ್ರಾಮ ಪಂಚಾಯ್ತಿ ಕಚೇರಿ ಮುಂಭಾಗ ನಟ ದಿ.ಡಾ.ಪುನೀತ್ ರಾಜ್ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ 3ನೇ ವರ್ಷದ ಪುಣ್ಯಸ್ಮರಣೆ ಆಚರಿಸಲಾಯಿತು. ಬಳಗದ ಅಧ್ಯಕ್ಷ ಎ.ಆರ್.ಹರೀಶ್ ಮಾತನಾಡಿ, ಬಾಲ ನಟನಾಗಿ ಸಿನಿಮಾ ರಂಗ ಪ್ರವೇಶಿಸಿದ ಡಾ. ಪುನೀತ್ ರಾಜ್ಕುಮಾರ್ ಅವರು ತಮ್ಮ ನಟನೆ ಮೂಲಕ ಪ್ರೇಕ್ಷಕರನ್ನು ರಂಜಿಸುವ ಜತೆಗೆ ತಮ್ಮ ಮಾನವೀಯ ಗುಣಗಳಿಂದ ಅಪಾರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ ಎಂದರು. ಅಲ್ಪ ಅವಧಿಯಲ್ಲಿ ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ತಂದೆ ಹಾದಿಯಲ್ಲಿ ನಡೆದು ಬಂದು ಕನ್ನಡಿರ ಮನಸ್ಸಿನಲ್ಲಿ ನೆಲೆಸಿರುವ ಅವರ ನಿಸ್ವಾರ್ಥ ಸೇವೆಗೆ ಎಂದೂ ಬೆಲೆ ಕಟ್ಟಲಾಗದು ಎಂದು ಹೇಳಿದರು. ಬಳಗದ ಸಂಚಾಲಕ ಸಚಿನ್, ಸದಸ್ಯರಾದ ಜಯರಾಮು, ಅರುಣೇಶ, ಸಿದ್ದೇಗೌಡ, ಪ್ರವೀಣ್, ರಾಕೇಶ್, ಪಾಪಣ್ಣ, ಗಿರೀಶ್, ಲೋಚನ್, ಕಿರಣ್ ಇತರರು ಇದ್ದರು.