ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಪ್ರಸ್ತುತ ವರ್ಷದ ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದಿದ್ದು ೨೫ ವಿದ್ಯಾರ್ಥಿಗಳು ಶೇ. ೯೦ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಪುತ್ತೂರು ಆರ್ಯಾಪುವಿನ ಮಹಾಲಿಂಗೇಶ್ವರ ಭಟ್ ಎಂ ಮತ್ತು ಎಸ್ ವಿ ದುರ್ಗಮಾಲಾ ದಂಪತಿಯ ಪುತ್ರ ಶ್ರೇಯಸ್ ಎಂ (೯೮.೫೬೩೩) ತಾಲೂಕು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಪುತ್ತೂರು: ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆ ಹಾಗೂ ಬಪ್ಪಳಿಗೆಯ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳು ಪ್ರಸ್ತುತ ವರ್ಷದ ಇಂಜಿನಿಯರಿಂಗ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆಗೈದಿದ್ದು ೨೫ ವಿದ್ಯಾರ್ಥಿಗಳು ಶೇ. ೯೦ ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಿರುತ್ತಾರೆ. ಪುತ್ತೂರು ಆರ್ಯಾಪುವಿನ ಮಹಾಲಿಂಗೇಶ್ವರ ಭಟ್ ಎಂ ಮತ್ತು ಎಸ್ ವಿ ದುರ್ಗಮಾಲಾ ದಂಪತಿಯ ಪುತ್ರ ಶ್ರೇಯಸ್ ಎಂ (೯೮.೫೬೩೩) ತಾಲೂಕು ಟಾಪರ್ ಆಗಿ ಹೊರ ಹೊಮ್ಮಿದ್ದಾರೆ.

ಸಾಧಕರ ವಿವರ: ಪುತ್ತೂರು ನೈತಾಡಿಯ ಕೃಷ್ಣರಾಜ್ ಎಚ್ ಎಸ್ ಮತ್ತು ವಿದ್ಯಾ ಕೃಷ್ಣರಾಜ್ ದಂಪತಿ ಪುತ್ರ ಪ್ರಜ್ವಲ್ ಎಚ್ (೯೭.೭೫೦೯), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚಿತ್ರಾ ಕೆ ಪಿ (೯೭.೨೦೫೦), ಬೆಳ್ಳಾರೆ ಇಂದಿರಾನಗರದ ರವೀಂದ್ರನಾಥ್ ಮತ್ತು ಸುಗುಣ ಎ ದಂಪತಿಯ ಪುತ್ರಿ ಶಾರ್ವರಿ ಆರ್ ಎಸ್ (೯೭.೧೪೨೯), ಗದಗ ಜಿಲ್ಲೆಯ ಬೂದಿಹಾಳದ ಶಿವರುದ್ರಯ್ಯ ಪಟದಯ್ಯ ಹಿರೇಮಠ ಮತ್ತು ಶೈಲಾ ಶಿವರುದ್ರಯ್ಯ ಹಿರೇಮಠ ದಂಪತಿಯ ಪುತ್ರ ಪ್ರತೀಕ ಶಿವರುದ್ರಯ್ಯ ಹಿರೇಮಠ (೯೭.೧೪೦೨), ಬೆಂಗಳೂರು ಜಿಲ್ಲೆಯ ಅನೇಕಲ್‌ನ ಅನಂತ ಪದ್ಮನಾಭ ಶರ್ಮ ಮತ್ತು ರೇಷ್ಮ ಅನಂತ ಶರ್ಮ ದಂಪತಿಯ ಪುತ್ರ ಅಖಿಲೇಶ್ ಅನಂತ ಶರ್ಮ (೯೬.೧೭೭೯), ಕೇರಳ ಉರ್ಡೂರಿನ ಸತ್ಯನಾರಾಯಣ ಪಿ ಮತ್ತು ರಂಜಿನಿ ಕುಮಾರಿ ದಂಪತಿ ಪುತ್ರಿ ಅಸೀಮಾ ಅಗ್ನಿಹೋತ್ರಿ (೯೫.೫೦೧೨), ಪುತ್ತೂರು ದರ್ಬೆಯ ರಾಜ್ ಕುಮಾರ್ ರೈ ಮತ್ತು ಸುಪ್ರೀತಾ ರೈ ದಂಪತಿ ಪುತ್ರ ಪ್ರಖ್ಯಾತ್ ರಾಜ್ ರೈ (೯೫.೪೫೨೮), ಪುತ್ತೂರು ಬನ್ನೂರಿನ ಚಂದ್ರಶೇಖರ ಮತ್ತು ಹರ್ಷಲತಾ ಕೆ ಪಿ ದಂಪತಿಯ ಪುತ್ರ ಶ್ಲೇಷ್ ಅಲೆಕ್ಕಾಡಿ ಚಂದ್ರಶೇಖರ (೯೫.೨೫೪೯), ಪುತ್ತೂರು ಕಬಕದ ಕೇಶವ ಮತ್ತು ವನಿತಾ ದಂಪತಿಯ ಪುತ್ರ ಜಸ್ವಿತ್ (೯೫.೦೦೫೧), ವಿಟ್ಲ ನಿಡ್ಯ ಚಂದಳಿಕೆ ಪುರುಷೋತ್ತಮ ಭಟ್ ಮತ್ತು ನೇತ್ರಾವತಿ ಎಸ್ ದಂಪತಿ ಪುತ್ರ ಸ್ಕಂದ ಗಣಪತಿ (೯೪.೦೪೨೨), ಪುತ್ತೂರು ಈಶ್ವರಮಂಗಳದ ಪಿ ಉದಯ ಶ್ಯಾಮ್ ಮತ್ತು ಪಿ ಶ್ರೀಲಕ್ಷ್ಮಿ ದಂಪತಿಯ ಪುತ್ರ ಶರಜ್ ಪಿ (೯೩.೯೮೦೫), ಮೈಸೂರು ಎಚ್ ಡಿ ಕೋಟೆಯ ಮುರುಗೇಶ್ ಮತ್ತು ಕನಕೇಶ್ವರಿ ವಿ ದಂಪತಿಯ ಪುತ್ರ ಎಂ ಶ್ರೀಶೈಲ್ (೯೩.೭೮೯೧), ಪುತ್ತೂರು ಹಾರಾಡಿಯ ದಾಮೋದರ ಎನ್ ಮತ್ತು ನವೀನ ಕುಮಾರಿ ಕೆ ಎಸ್ ದಂಪತಿ ಪುತ್ರ ತ್ರಿಶೂಲ್ ಎನ್ ಡಿ (೯೩.೫೨೬೧), ಕಾಸರಗೋಡು ಜಿಲ್ಲೆಯ ನೆಟ್ಟಣಿಗೆಯ ವಿಷ್ಣು ಪ್ರಕಾಶ್ ಎಂ ಮತ್ತು ವೀಣಾ ಸರಸ್ವತಿ ಸಿ ಹೆಚ್ ದಂಪತಿಯ ಪುತ್ರ ಶ್ರೀಶ ಎಂ (೯೨.೮೯೪೬), ಕಡಬ ಬಲ್ಯದ ಪದ್ಮಯ ಗೌಡ ಮತ್ತು ಜಯಲಕ್ಷ್ಮಿ ದಂಪತಿಯ ಪುತ್ರಿ ಯಶಸ್ವಿ ಸುರುಳಿ (೯೨.೮೯೪೬), ಪುತ್ತೂರು ಭಕ್ತಕೋಡಿ ಪಿಲಿಗುಂಡಿಯ ಕೃಷ್ಣಪ್ಪ ಮತ್ತು ಪುಷ್ಪ ದಂಪತಿ ಪುತ್ರ ಪಿ ಕೆ ರಕ್ಷಿತ್ (೯೨.೭೬೧೧), ಸುಳ್ಯ ಕೆಳಗಿನ ನಾವೂರಿನ ಕೆ ಆರ್ ಕೃಷ್ಣ ರಾವ್ ಮತ್ತು ಆಶಾ ಕೃಷ್ಣ ರಾವ್ ದಂಪತಿ ಪುತ್ರ ಆಯುಷ್ ರಾವ್ ಕೆ (೯೨.೪೭೭೫), ಸೋಮವಾರಪೇಟೆಯ ಬೇಕನಹಳ್ಳಿಯ ಶಿವಕುಮಾರ್ ಬಿ.ಎಸ್ ಮತ್ತು ಭಾರತಿ.ಬಿ ಎಸ್ ದಂಪತಿಯ ಪುತ್ರಿ ಶಿಲ್ಪಿತಾ ಬಿ.ಎಸ್ (೯೨.೪೬೫೪), ಪುತ್ತೂರು ನೆಹರು ನಗರದ ಪ್ರಶಾಂತ್ ಮತ್ತು ಮಾಲತಿ ದಂಪತಿಯ ಪುತ್ರಿ ಶ್ರೀಯಾ (೯೨.೩೨೪೭), ಪುತ್ತೂರು ಸೇಡಿಯಾಪು ಚೈತ್ರನಾರಾಯಣ ಮತ್ತು ಸ್ವಪ್ನ ಎಸ್ ಸಿ ದಂಪತಿಯ ಪುತ್ರಿ ಶ್ರೀ ಲಕ್ಷ್ಮಿ ಎಸ್ ಸಿ (೯೧.೯೩೮೫), ಪುತ್ತೂರು ಸಾಮೆತ್ತಡ್ಕದ ಪ್ರಶಾಂತ್ ಕೆ ಜಿ ಮತ್ತು ಪೂರ್ಣ ಚಂದ್ರಿಕಾ ದಂಪತಿಯ ಪುತ್ರಿ ಚೈತ್ರಾ ಕೆ ಪಿ (೯೧.೭೧೮೬), ಬಂಟ್ವಾಳ ಮಾಣಿಯ ಬಿ ವಿನೋದ್ ಕುಮಾರ್ ಮತ್ತು ಸರಿತಾ ವಿನೋದ್ ದಂಪತಿಯ ಪುತ್ರ ರಚಿತ್ ವಿ ಪೂಜಾರಿ (೯೧.೫೭೨೧), ಪುತ್ತೂರು ಹಾರಾಡಿಯ ಅಶೋಕ್ ಭಟ್ ಮತ್ತು ನಯನಾ ಎ ಭಟ್ ದಂಪತಿಯ ಪುತ್ರ ಅಭಿನವ್ ವಸಿಷ್ಠ (೯೦.೩೭೫೯), ಕೊಡುಗು ಜಿಲ್ಲೆಯ ಮಡಿಕೇರಿಯ ಎ.ಎಲ್ ಶರಣ್ ಮತ್ತು ಸಂಧ್ಯಾ ಎ.ಎಸ್ ದಂಪತಿಯ ಪುತ್ರ ಸಿತಾಂಶು ಎ ಎಸ್ (೯೦.೧೧೮೧) ಅವರು ಉತ್ತಮ ಸಾಧನೆ ತೋರಿದ್ದಾರೆ.