ಅಂಗವಿಕಲರಿಗೆ ಸಲಕರಣೆ ಪೂರೈಸಲು ರೆಡ್‌ಕ್ರಾಸ್‌ ಯೋಜನೆ: ಶಾಂತಾರಾಮ ಶೆಟ್ಟಿ

| Published : Jun 12 2024, 12:33 AM IST

ಅಂಗವಿಕಲರಿಗೆ ಸಲಕರಣೆ ಪೂರೈಸಲು ರೆಡ್‌ಕ್ರಾಸ್‌ ಯೋಜನೆ: ಶಾಂತಾರಾಮ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಸಂಘದ 32ನೇ ವಾರ್ಷಿಕ ಸಮಾವೇಶ, ಅಂಗವಿಕರಿಗೆ ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಂಗವಿಕಲರಿಗೆ ಬೇಕಾದ ಎಲ್ಲ ಸಲಕರಣೆಗಳನ್ನು ಅಗತ್ಯವಿರುವಾಗ ಪೂರೈಸಲು ರೆಡ್‌ಕ್ರಾಸ್‌ನಿಂದ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ದ.ಕ. ಜಿಲ್ಲಾ ರೆಡ್‌ ಕ್ರಾಸ್‌ ಸಂಸ್ಥೆಯ ಸಭಾಪತಿ ಸಿಎ ಶಾಂತಾರಾಮ ಶೆಟ್ಟಿ ಹೇಳಿದರು.

ದ.ಕ. ಮತ್ತು ಉಡುಪಿ ಜಿಲ್ಲಾ ವಿಶಿಷ್ಟಚೇತನರ ಸಂಘ, ಭಾರತೀಯ ರೆಡ್‌ಕ್ರಾಸ್‌ ಸಂಸ್ಥೆಯ ದ.ಕ.ಜಿಲ್ಲಾ ಶಾಖೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್‌ಕ್ರಾಸ್‌ ಘಟಕದ ಆಶ್ರಯದಲ್ಲಿ ಭಾನುವಾರ ಹಂಪನಕಟ್ಟೆ ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಸಂಘದ 32ನೇ ವಾರ್ಷಿಕ ಸಮಾವೇಶ, ಅಂಗವಿಕರಿಗೆ ವೈದ್ಯಕೀಯ ನೆರವು, ವೈದ್ಯಕೀಯ ತಪಾಸಣೆ ಮತ್ತು ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಾಸಕ ವೇದವ್ಯಾಸ ಕಾಮತ್‌ ಮಾತನಾಡಿ, ಅಂಗವಿಕಲತೆಯನ್ನು ನ್ಯೂನ್ಯತೆ ಎಂದು ತಿಳಿಯದೆ ಜೀವನದಲ್ಲಿ ಯಶಸ್ಸು ಸಾ​ಧಿಸಬೇಕು. ಮನಸ್ಸಿಗೆ ಶಕ್ತಿ ಕೊಟ್ಟಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗಲಿದೆ. ಇದಕ್ಕೆ ಸಂಘ ಸಂಸ್ಥೆಗಳ ಸಹಕಾರವೂ ಅಗತ್ಯ. ಅಂಗವಿಕಲರ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು.ಅಧ್ಯಕ್ಷತೆ ವಹಿಸಿದ್ದ ನಿಟ್ಟೆವಿವಿ ಸಹ ಕುಲಾ​ಪತಿ ಡಾ. ಎಂ. ಶಾಂತಾರಾಮ ಶೆಟ್ಟಿ ಮಾತನಾಡಿ, 20 ಮಂದಿ ಸದಸ್ಯರಿಂದ ಆರಂಭವಾದ ಸಂಸ್ಥೆಯಲ್ಲಿ ಪ್ರಸ್ತುತ 1,500 ಮಂದಿ ಸದಸ್ಯರಿದ್ದಾರೆ. 32 ವರ್ಷಗಳ ಪಯಣದಲ್ಲಿ ಸಂಸ್ಥೆ ಅಂಗವಿಕಲಗಾಗಿ ಬಹಳಷ್ಟು ಕೆಲಸ ಮಾಡಿದೆ. ತನ್ನದೇ ಕಾಲಿನಲ್ಲಿ ನಿಲ್ಲುವ ಶಕ್ತಿಯನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.ರೆಡ್‌ ಕ್ರಾಸ್‌ ದಿವ್ಯಾಂಗ ಕೋಶದ ಚೇರ್ಮನ್‌ ಡಾ. ಕೆ.ಆರ್‌. ಕಾಮತ್‌, ವಿವಿ ಕಾಲೇಜು ಪ್ರಾಂಶುಪಾಲ ಡಾ. ಗಣಪತಿ ಗೌಡ, ಮಂಗಳೂರು ವಿವಿ ಯುವ ರೆಡ್‌ ಕ್ರಾಸ್‌ ನೋಡಲ್‌ ಅ​ಧಿಕಾರಿ ಡಾ. ಗಾಯತ್ರಿ ಇದ್ದರು.ಡಾ. ಮುರಳೀಧರ ನಾಯಕ್‌ ಪ್ರಸ್ತಾವಿಸಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್‌ ಅವರು ವಿದ್ಯಾರ್ಥಿವೇತನ ಫಲಾನುಭವಿಗಳು ಮತ್ತು ವೈದ್ಯಕೀಯ ನೆರವು ಪಡೆದವರ ಹೆಸರು ವಾಚಿಸಿದರು. ನಾಗೇಶ್‌ ಶೆಟ್ಟಿ ವಂದಿಸಿದರು.ಇದೇ ಸಂದರ್ಭ ಕೆಎಂಸಿ ಹಾಗೂ ವೆನ್ಲಾಕ್‌ ವೈದ್ಯರಿಂದ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.