ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರ.ಮಹರ್ಷಿ ವಾಲ್ಮೀಕಿ ತಮ್ಮ ರಾಮಾಯಣದಲ್ಲಿ ರಾಮನ ಉದಾತ್ತ ಗುಣಗಳನ್ನು ಚಿತ್ರಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಎಂಎಸ್ಐಎಲ್ ಅಧ್ಯಕ್ಷ, ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.ನಗರದ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ನಡೆದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.ರಾಮಾಯಣದಲ್ಲಿ ಬರುವ ರಾಮಸೀತೆ, ಲವಕುಶರ ಪಾತ್ರಗಳು ಆದರ್ಶ ಕುಟುಂಬ ಹೇಗಿರಬೇಕು ಎಂಬ ಸಂದೇಶವನ್ನು ಅನಾವರಣಗೊಳಿಸಿವೆ. ಸಮಾಜದ ಪ್ರತಿಯೊಬ್ಬರು ಮಹರ್ಷಿ ವಾಲ್ಮೀಕಿ ಅವರ ಆದರ್ಶಗಳನ್ನು ಪಾಲನೆ ಮಾಡಬೇಕು ಎಂದರು.ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನಕಾರ್ಯದರ್ಶಿ ಚಿಕ್ಕಮಹಾದೇವ, ಚುಡಾಅಧ್ಯಕ್ಷ ಮಹಮದ್ ಅಸ್ಗರ್, ಗ್ರಾಮಾಂತರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಎ.ಎಸ್.ಗುರುಸ್ವಾಮಿ, ಮಹಿಳಾಘಟಕದ ಅಧ್ಯಕ್ಷೆ ನಾಗರತ್ನ, ನಗರಸಭೆ ಸದಸ್ಯರಾದ ಚಿನ್ನಮ್ಮ. ಸ್ವಾಮಿ. ಪಿಎಲ್ಡಿಬ್ಯಾಂಕ್ ನಿರ್ದೇಶಕ ಬಸುಮರಿ, ಮಾದಾಪುರ ಗ್ರಾಪಂ ಅಧ್ಯಕ್ಷ ರೂಪೇಶ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸದಸ್ಯ ಮರಿಯಾಲದಹುಂಡಿ ಕುಮಾರ್, ಮಾದಾಪುರ ಕುಮಾರ್, ಬೀದಿಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಅಧ್ಯಕ್ಷ ಜಬೀಉಲ್ಲಾ, ಉಪಾಧ್ಯಕ್ಷ ಅಕ್ರಂಪಾಷಾ, ಗ್ರಾಪಂ ಸದಸ್ಯ ಅಮಚವಾಡಿ ರಾಜು, ಜಿಪಂ ಮಾಜಿಸದಸ್ಯರಾದ ಕೆ.ನವೀನ್, ಕಾವೇರಿಶಿವಕುಮಾರ್. ರಮೇಶ್, ಚುಡಾ ಮಾಜಿ ಅಧ್ಯಕ್ಷ ಸುಹೇಲ್ ಅಲಿಖಾನ್, ಸೇವಾದಳದ ಉಪಾಧ್ಯಕ್ಷ ನಾಗರಾಜು,ನಗರಸಭೆ ಮಾಜಿಸದಸ್ಯರಾದ ಚಂಗುಮಣಿ, ಮಹದೇವಯ್ಯ, ಅಲ್ಷಸಂಖ್ಯಾತ ವಿಭಾಗದ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಇಂಬ್ರಾನ್ಅಹಮದ್, ಬಸವಣ್ಣ, ವಕೀಲಪೃಥ್ವಿ, ಮುಖಂಡರಾದ ನಯಾಜ್ ಪಾಷಾ, ಶಕುಂತಲಾ, ಮಹಮದ್ ರೆಹಮಾನ್, ಅಪ್ಸರ್ ಪಾಷಾ, ರವಿಗೌಡ, ಎಂ,ಬಸವರಾಜು ನಾಗಬಸವಣ್ಣ, ಪವನ್, ಪರ್ವೀಜ್ ಅಹಮದ್, ಹಾಜರಿದ್ದರು.