7 ಗ್ರಾ.ಪಂ.ಗಳಿಗೆ 15 ಕೋಟಿ ರು. ಅದಾನಿ ಸಿಎಸ್‌ಆರ್: ಕಿಶೋರ್‌ ಆಳ್ವ

| Published : Nov 15 2025, 02:30 AM IST

7 ಗ್ರಾ.ಪಂ.ಗಳಿಗೆ 15 ಕೋಟಿ ರು. ಅದಾನಿ ಸಿಎಸ್‌ಆರ್: ಕಿಶೋರ್‌ ಆಳ್ವ
Share this Article
  • FB
  • TW
  • Linkdin
  • Email

ಸಾರಾಂಶ

ಅದಾನಿ ಪವರ್ ಲಿಮಿಟೆಡ್ ಸಂಸ್ಥೆ ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ ಎಲ್ಲೂರು ಗ್ರಾಮದಲ್ಲಿ 17 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ ಮೂಲಭೂತ ಸೌಕರ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು 20 ಲಕ್ಷ ರು.ಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಾಯಿತು.

ಕಾಪು: ಇಲ್ಲಿನ ಅದಾನಿ ಪವರ್ ಲಿಮಿಟೆಡ್ ಸಂಸ್ಥೆ ತನ್ನ ಸಿಎಸ್‌ಆರ್ ಅಂಗವಾದ ಅದಾನಿ ಫೌಂಡೇಶನ್ ಮುಖಾಂತರ ಎಲ್ಲೂರು ಗ್ರಾಮದಲ್ಲಿ 17 ಲಕ್ಷ ರು.ವೆಚ್ಚದಲ್ಲಿ ನಿರ್ಮಿಸಿದ ಮೂಲಭೂತ ಸೌಕರ್ಯದ ಕಾಮಗಾರಿಗಳ ಉದ್ಘಾಟನೆ ಮತ್ತು 20 ಲಕ್ಷ ರು.ಗಳ ಕಾಮಗಾರಿಗಳಿಗೆ ಭೂಮಿ ಪೂಜೆ ನಡೆಸಲಾಯಿತು. ಇಲ್ಲಿನ ಈ ಯೋಜನೆಯಡಿ ಕಾಂಕ್ರೀಟೀಕರಿಸಲಾದ ಪಿಲಿಚಂಡಿ ರಸ್ತೆ, ಮಾಣಿಯೂರು ಮಠ ರಸ್ತೆ, ಕೃಷ್ಣ ನರ್ಸರಿ ರಸ್ತೆ, ಉಳ್ಳೂರು ರಸ್ತೆಗಳನ್ನು ಅದಾನಿ ಸಮೂಹದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮತ್ತು ಎಲ್ಲೂರು ಗ್ರಾ.ಪಂ. ಅಧ್ಯಕ್ಷ ರವಿರಾಜ್ ರಾವ್ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಕಿಶೋರ್ ಆಳ್ವ, ಅದಾನಿ ಸಂಸ್ಥೆಯು ಸಿಎಸ್‌ಆರ್‌ ಯೋಜನೆಯಡಿ ಕಳೆದ 10 ವರ್ಷಗಳಿಂದ 7 ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 15 ಕೋಟಿ ರು.ಗೂ ಅಧಿಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಡೆಸಲಾಗಿದೆ. ಎಲ್ಲೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 3.20 ಕೋಟಿ ರು.ಗಳ‍ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಿದೆ ಎಂದು ತಿಳಿಸಿದರು.

ಪಡುಬಿದ್ರಿ ಗ್ರಾ.ಪಂ. ಉಪಾಧ್ಯಕ್ಷೆ ಉಷಾ ಕೋಟಿಯಾನ್, ಸದಸ್ಯರಾದ ಹರೀಶ್, ದಯಾನಂದ ಶೆಟ್ಟಿಗಾರ್, ಯಶವಂತ ಶೆಟ್ಟಿ, ಶೋಭಾ ಶೆಟ್ಟಿ, ಜಯರಾಮ್ ದೇವಾಡಿಗ, ಶಾಂತಿ ಆಚಾರ್ಯ, ಸಂತೋಷ ಶೆಟ್ಟಿ ಅದಮಾರು, ಮಾಜಿ ಅಧ್ಯಕ್ಷೆ ವಸಂತಿ ಮಧ್ವರಾಜ್, ಅದಾನಿ ಯುಪಿಸಿಎಲ್ ಸಂಸ್ಥೆಯ ಏಜಿಎಂ ರವಿ ಆರ್. ಜೇರೆ ಹಾಗೂ ಅದಾನಿ ಫೌಂಡೇಶನ್‌ನ ಅನುದೀಪ್ ಇದ್ದರು.