ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಯೋಜನೆಗೆ ಕೇಂದ್ರ ಸರ್ಕಾರದ ಸಾಗರಮಾಲಾ - ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ)ಯಡಿ 78.28 ಕೋಟಿ ರು. ಮಂಜೂರಾತಿ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಹೇಳಿದ್ದಾರೆ.
ಉಡುಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆಗೆ ಕೇಂದ್ರ ಸಚಿವರ ಉತ್ತರ
ಉಡುಪಿ: ಉಡುಪಿ ಜಿಲ್ಲೆಯ ಹಂಗಾರಕಟ್ಟೆ ಮೀನುಗಾರಿಕಾ ಕಿರು ಬಂದರು ಯೋಜನೆಗೆ ಕೇಂದ್ರ ಸರ್ಕಾರದ ಸಾಗರಮಾಲಾ - ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್ವೈ)ಯಡಿ 78.28 ಕೋಟಿ ರು. ಮಂಜೂರಾತಿ ಪ್ರಕ್ರಿಯೆಯಲ್ಲಿದೆ ಎಂದು ಕೇಂದ್ರ ಸಚಿವ ಸರ್ಬಾನಂದ್ ಸೋನೊವಾಲ್ ಹೇಳಿದ್ದಾರೆ.ಲೋಕಸಭೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಲಿಖಿತ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.ಹಳೆಯ ಮಂಗಳೂರು ಬಂದರಿನಲ್ಲಿ ಸರಕು ಮತ್ತು ಕ್ರೂಸ್ ಟರ್ಮಿನಲ್ ಲಕ್ಷದ್ವೀಪ ಜಟ್ಟಿ ನಿರ್ಮಾಣದ ಅಭಿವೃದ್ಧಿಗೆ 75.75 ಕೋಟಿ ರು., ಮಲ್ಪೆ ಮೀನುಗಾರಿಕಾ ಬಂದರನ್ನು ಮೇಲ್ದರ್ಜೆಗೇರಿಸಲು 12.50 ಕೋಟಿ ರು. ಅಲ್ಲದೆ, ಮಲ್ಪೆ ಮೀನುಗಾರಿಕಾ ಬಂದರಿನ ಮೂಲ ಸೌಕರ್ಯಗಳ ಬಹು ಮಹಡಿ ಪಾರ್ಕಿಂಗ್ ಸೌಲಭ್ಯದ ಅಭಿವೃದ್ಧಿ, ಮೀನುಗಾರಿಕಾ ಬೋಟುಗಳ ತಂಗುದಾಣಕ್ಕಾಗಿ ಹೆಚ್ಚುವರಿ ಜಟ್ಟಿ, ಯಾಂತ್ರಿಕ ದೋಣಿಗಳ ಸಂಚಾರ ಸುಗಮಗೊಳಿಸಲು ಹೂಳೆತ್ತುವುದು ಸೇರಿದಂತೆ ಹಲವು ಪ್ರಸ್ತಾವನೆಗಳು ಮಂಜೂರಾತಿ ಹಂತದಲ್ಲಿದೆ ಎಂದು ಕೇಂದ್ರ ಸಚಿವರು ತಿಳಿಸಿದ್ದಾರೆ.ಮತ್ಸ್ಯ ಸಂಪದ ಯೋಜನೆಯಲ್ಲಿ ಕಾರವಾರ ಬಂದರು ಅಭಿವೃದ್ಧಿ 73 ಕೋಟಿ ರು., ಹಳೆಯ ಮಂಗಳೂರು ಬಂದರು ಅಭಿವೃದ್ಧಿಗೆ 65 ಕೋಟಿ ರು., ಗಂಗೊಳ್ಳಿ ಬಂದರು ಅಭಿವೃದ್ಧಿಗೆ 96 ಕೋಟಿ ರು., ಕಾರವಾರದ ಬಂದರಿನ ಬ್ರೇಕ್ ವಾಟರ್ ನಿರ್ಮಾಣಕ್ಕೆ 249 ಕೋಟಿ ರು. ಪ್ರಸ್ತಾವನೆ ಸ್ವೀಕೃತವಾಗಿದೆ ಎಂದಿದ್ದಾರೆ.ರಾಜ್ಯ ಸರ್ಕಾರದ ಖಾಸಗಿ (ಪಿ.ಪಿ.ಪಿ) ಸಹಭಾಗಿತ್ವದಲ್ಲಿ ಖೇಣಿ ಬಂದರು, ಮಾವಿನಕುರ್ವೆ ಬಂದರು, ಹೊನ್ನಾವರ ಬಂದರು, ಮಂಕಿ ಬಂದರುಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಂಡಿದೆ ಎಂದು ಕೇಂದ್ರ ಬಂದರು ಮಂತ್ರಿ ಸರ್ಬಾನಂದ್ ಸೋನೊವಾಲ್ ತಿಳಿಸಿದ್ದಾರೆ.