ಸಹಬಾಳ್ವೆ, ಸಮಾನತೆ ತತ್ವದಡಿ ಸಹಕಾರ ಸಂಘದ ಹಿತ ಬಯಸಿ: ನಂದಿ ವಿರುಪಾಕ್ಷಪ್ಪ

| Published : Sep 29 2024, 01:47 AM IST

ಸಾರಾಂಶ

ವಿಶ್ವಾಸಾರ್ಹತೆ ಯೊಂದಿಗೆ ಕಾರ್ಯನಿರ್ವಹಿಸಿದರೆ ದೇಶದ ಸಾಮಾಜಿಕ ಅರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು.

ಕೂಡ್ಲಿಗಿ: ತಾಲೂಕಿನ ಹಿರೇಹೆಗ್ಡಾಳ್ ಗ್ರಾಮದ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದಿಂದ ವಾರ್ಷಿಕ ಮಹಾಜನ ಸಭೆ ಸಂಘದ ಕಾರ್ಯಾಲಯದಲ್ಲಿ ನೆಡೆಯಿತು.

ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಸಂಘದ ಮಾಜಿ ಅಧ್ಯಕ್ಷ ನಂದಿ ವಿರೂಪಾಕ್ಷಪ್ಪ ಮಾತನಾಡಿ, ಸಹಕಾರಿ ತತ್ವದಲ್ಲಿ ನಂಬಿಕೆ ಆಚರಣೆಯಲ್ಲಿ ಬದ್ಧತೆ ಇದೆ. ಸಹಬಾಳ್ವೆ ಸಮಾನತೆ ತತ್ವದಡಿ ಸಂಘದ ಸದಸ್ಯರ ಹಿತ ಬಯಸಿ ನಿಸ್ವಾರ್ಥವಾಗಿ ಸೇವಾ ಮನೋಭಾವದೊಂದಿಗೆ ಕೃಷಿಕರನ್ನ ಅರ್ಥಿಕವಾಗಿ ಸಬಲರನ್ನಾಗಿಸುವಂತಹ ಕೆಲಸ ಮಾಡುವಲ್ಲಿ ನಮ್ಮ ಸಹಕಾರ ಸಂಘ ಮೇಲ್ಪಂಕ್ತಿಯಾಗಿದೆ ಎಂದರು.

ಕೇಂದ್ರ ಸರ್ಕಾರ ಸಹಕಾರ ಸಚಿವಾಲಯ ಸ್ಥಾಪಿಸಿ ಗ್ರಾಮೀಣ ಭಾಗಗಳಲ್ಲಿ ಹೆಚ್ಚೆಚ್ಚು ಸಹಕಾರ ಸಂಘಗಳನ್ನು ತೆರೆದು ಕಟ್ಟಕಡೆಯ ಕೃಷಿಕರು ಸಹಕಾರ ಆಂದೋಲನದಲ್ಲಿ ಭಾಗಿಯಾಗಿ ಸಂಘದ ನೆರವನ್ನು ಪಡೆಯುವ ಮೂಲಕ ಅರ್ಥಿಕವಾಗಿ ಸದೃಢರಾಗಲು ಅದರಲ್ಲೂ ಸಹಕಾರ ಸಂಘಗಳನ್ನು ಗಣಿಕೀಕರಣ (ಡಿಜಿಟಲಿಕರಣ) ಜೊತೆಗೆ ಸಂಘದ ವ್ಯವಹಾರವನ್ನು ಅಧುನಿಕ ತಾಂತ್ರಿಕ ವ್ಯವಸ್ಥೆಯನ್ನು ಅಳವಡಿಕೆ ಮಾಡುವ ಮುಖಾಂತರ ಗ್ರಾಹಕ ಸ್ನೇಹಿಯಾಗಿ ಪಾರದರ್ಶಕತೆಯಿಂದ ನಂಬಿಕೆ ವಿಶ್ವಾಸಾರ್ಹತೆ ಯೊಂದಿಗೆ ಕಾರ್ಯನಿರ್ವಹಿಸಿದರೆ ದೇಶದ ಸಾಮಾಜಿಕ ಅರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಬಲ್ಲದು ಎಂದು ತಿಳಿಸಿದರು.

ಈ ಮಹಾಜನ್ ಸಭೆಯ ಅಧ್ಯಕ್ಷತೆಯನ್ನು ಎಸ್‌.ಎಸ್‌. ಕೊಟ್ರೇಶಪ್ಪ ವಹಿಸಿದ್ದರು ಸಂಘದ ಉಪಾಧ್ಯಕ್ಷ ಬಾರಿಕರ ದೊಡ್ಡ ಹನುಮಂತಪ್ಪ, ಮಾಜಿ ಅಧ್ಯಕ್ಷ ಜಿ.ಆರ್ ಚನ್ನಬಸಪ್ಪ ಮಾಜಿ ಉಪಾಧ್ಯಕ್ಷರುಗಳಾದ ತಿಂದಪ್ಪ, ಎ.ಬಸವರಾಜ ನಿರ್ದೇಶಕರಾದ ಎಂ.ಗುರುಬಸವರಾಜ, ಕರೂರು ಚಂದ್ರಯ್ಯ, ಚಲುವಾದಿ ಚನ್ನಬಸಮ್ಮ ಉಪಸ್ಥಿತರಿದ್ದರು.

ಸಂಘದ ಮುಖ್ಯ ಕಾರ್ಯ ನಿರ್ವಾಹಕ ಬಿ.ಕೊಟ್ರೇಶ್ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಬಿಸಿಎಂ ಹಾಸ್ಟೆಲ್ ನಿಲಯ ಪಾಲಕ ಮಂಜುನಾಥ್ ಪ್ರಾರ್ಥಿಸಿದರು ಸಿಬ್ಬಂದಿ ಯು.ಜಿ. ರವೀಂದ್ರ ನಿರೂಪಿಸಿದರು. ಎಸ್‌ ಎಂ ವಾಮದೇವಯ್ಯ ದಲಿತ ಮುಖಂಡ ಕೆ ಮಹೇಶ್ ಪಕ್ಕೀರಪ್ಪ ಚಿದಾನಂದಪ್ಪ ಅಮರಶೆಟ್ಟಿ ಕೊಟ್ರಪ್ಪ, ಬೆಣ್ಣೆಶೆಟ್ಟಿ ನೀಲಪ್ಪ, ಮೇಘರಾಜ್ , ಶಿವಪ್ರಕಾಶ್, ನಾಗರಜ್, ಮಹದೇವ, ಶಿವಣ್ಣ, ಕರಿಬಸವರಾಜ್, ಸಿ.ನಾಗಪ್ಪ ಇದ್ದರು.