ಸಾರಾಂಶ
ರಾಯಚೂರು ನಗರದ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮoದಿರದಲ್ಲಿ ಶಂಕರಾಚಾರ್ಯ ಜಯಂತಿ ಆಚರಿಸಲಾಯಿತು.
ರಾಯಚೂರು: ಜಿಲ್ಲಾಡಳಿತ, ಜಿಪಂ, ನಗರಸಭೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶಂಕರಾಚಾರ್ಯ ಜಯಂತಿಯನ್ನು ಸ್ಥಳೀಯ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸರಳ ಹಾಗೂ ಅರ್ಥಪೂರ್ಣವಾಗಿ ರವಿವಾರ ಆಚರಿಸಲಾಯಿತು.
ಲೋಕಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಶಂಕರಾಚಾರ್ಯ ಜಯಂತಿಯನ್ನು ಸರಳ ಹಾಗೂ ಅರ್ಥಪೂರ್ಣವಾಗಿ ಆಚರಿಸುವ ಹಿನ್ನೆಲೆ ಶಂಕರಾಚಾರ್ಯರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಪುಷ್ಪ ನಮನ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಕೃಷ್ಣಮೂರ್ತಿ, ವೇಣುಗೋಪಾಲ, ವಸಂತರತಾವ್, ಹನುಮಂತರಾವ್, ಶ್ರೀಪಾದ ದೇಸಾಯಿ, ಹೇಮಚಂದ್ರ, ಸುಬ್ರಮಣ್ಯ, ಸದಾನಂದ, ಸಹಜಾನಂದ, ರಮಾಕಾಂತ, ಗುರುರಾಜ್, ನಂದೀಶ, ಸತೀಶ, ಗೋಪಾಲ ಜೋಶಿ, ರಮೇಶ ಜೋಶಿ, ಶ್ರೀಧರ, ಮುರುಳಿಧರ ಕುಲಕರ್ಣಿ, ಗಾಯತ್ರಿ, ಅರುಣಾ, ಜ್ಯೋತಿ, ಸಿಂಧು, ಅಂಜನಾ, ಚೇತನಾ, ಗೌರಿ, ಅಮೃತವಲ್ಲಿ, ಇಲಾಖೆಯ ಸಿಬ್ಬಂದಿ ಇಸ್ಮಾಯಿಲ್, ವಿನೋದ ಕುಮಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.