ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ನೂತನ ಚಂದ್ರಮಂಡಲ ರಥದ ಮೆರವಣಿಗೆ ಹಾಗೂ ರಥೋತ್ಸವದ ಪ್ರಯುಕ್ತ ಹೊರೆಕಾಣಿಕೆಗೆ ದೇವಳದ ರೂವಾರಿ ನಾಡೋಜ ಡಾ. ಜಿ ಶಂಕರ್ ಅವರು ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಗೋವಿಂದ ಭಟ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಉಚ್ಚಿಲ: ದ.ಕ ಮೊಗವೀರ ಮಹಾಜನ ಸಂಘ ಸಂಚಾಲಿತ ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ನೂತನ ಚಂದ್ರಮಂಡಲ ರಥದ ಮೆರವಣಿಗೆ ಹಾಗೂ ರಥೋತ್ಸವದ ಪ್ರಯುಕ್ತ ಹೊರೆಕಾಣಿಕೆಗೆ ದೇವಳದ ರೂವಾರಿ ನಾಡೋಜ ಡಾ. ಜಿ ಶಂಕರ್ ಅವರು ಚಾಲನೆ ನೀಡಿದರು. ದೇವಸ್ಥಾನದ ಅರ್ಚಕ ಗೋವಿಂದ ಭಟ್ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದ.ಕ ಮೊಗವೀರ ಮಹಿಳಾ ಮಹಾಜನ ಸಂಘ ಮತ್ತು ಬೆಳ್ಳಿ ರಥ ಸಮಿತಿಯ ವತಿಯಿಂದ ಸಮರ್ಪಣೆ ಮಾಡಲಾದ ಈ ಚಂದ್ರಮಂಡಲ ರಥ ಮೆರವಣಿಗೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು, ಚೆಂಡೆ, ವಾದ್ಯ, ತಟ್ಟೀರಾಯ, ಭಜನಾ ತಂಡಗಳು ಮೆರುಗು ನೀಡಿದವು.ಈ ಸಂದರ್ಭ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಬೆಳ್ಳಂಪಳ್ಳಿ, ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಗಿರಿಧರ ಸುವರ್ಣ, ಮಹಿಳಾ ಮಹಾಜನ ಸಂಘದ ಅಧ್ಯಕ್ಷೆ ಕವಿತಾ ಶರತ್, ಕಾರ್ಯದರ್ಶಿ ಪೂರ್ಣಿಮಾ ಚಂದ್ರಶೇಖರ್, ಬೆಳ್ಳಿ ರಥ ಸಮಿತಿಯ ಅಧ್ಯಕ್ಷೆ ಉಷಾರಾಣಿ, ಕಾರ್ಯದರ್ಶಿ ಶುಭಾ ದಿನೇಶ್, ಪ್ರಮುಖರಾದ ಹರಿಯಪ್ಪ ಆರ್. ಕೋಟ್ಯಾನ್, ಶರಣ್ ಕುಮಾರ್ ಮಟ್ಟು, ವಿನಯ್ ಕರ್ಕೇರ ಮಲ್ಪೆ, ಸುಗುಣ ಕರ್ಕೇರ, ನಾರಾಯಣ ಕರ್ಕೇರಾ, ಸಂಜೀವ ಬಂಗೇರ, ಮೋಹನ್ ಬಂಗೇರ ಕಾಪು, ಮನೋಜ್ ಕಾಂಚನ್, ವಾಸುದೇವ ಸಾಲ್ಯಾನ್ ಕಟಪಾಡಿ, ನಾರಾಯಣ ಕರ್ಕೇರ ಪಡುಬಿದ್ರಿ, ರವೀಶ್ ಎಸ್. ಕೋಟೇಶ್ವರ, ಮನೋಜ್ ಕಾಂಚನ್, ಅಶೋಕ್ ಸಾಲ್ಯಾನ್ ಪಡುಬಿದ್ರಿ, ಕಿರಣ್ ಕುಮಾರ್ ಉದ್ಯಾವರ, ಶುಭಾಶ್ಚಂದ್ರ ಕಾಂಚನ್, ವಿಠಲ್ ಕರ್ಕೇರ, ಪುಂಡಲೀಕ ಹೊಸಬೆಟ್ಟು, ರವೀಂದ್ರ ಶ್ರೀಯಾನ್, ದಾಮೋದರ್ ಸುವರ್ಣ, ರತ್ನಾಕರ್ ಸಾಲ್ಯಾನ್ ಮಲ್ಪೆ, ಮಂಜುನಾಥ್ ಸುವರ್ಣ, ಶ್ರೀಧರ್ ಬಂಗೇರ ಎರ್ಮಾಳ್, ಸರ್ವೋತ್ತಮ ಕುಂದರ್, ಗುಂಡು ಬಿ ಅಮೀನ್, ಸುಜಿತ್ ಸಾಲ್ಯಾನ್, ದಿನೇಶ್ ಎರ್ಮಾಳು, ಸತೀಶ್ ಸಾಲ್ಯಾನ್ ಎರ್ಮಾಳ್ ಮತ್ತಿತರರು ಉಪಸ್ಥಿತರಿದ್ದರು.