ಸಾರಾಂಶ
ಮಾಗಡಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು 1983ರಿಂದಲೂ ರಾಜಕಾರಣದಲ್ಲಿದ್ದು, ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದೇ ಶುದ್ಧ ಹಸ್ತದ ರಾಜಕಾರಣಿಯಾಗಿದ್ದಾರೆ ಎಂದು ಸಂಬುದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ಮಾಗಡಿ: ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು 1983ರಿಂದಲೂ ರಾಜಕಾರಣದಲ್ಲಿದ್ದು, ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದೇ ಶುದ್ಧ ಹಸ್ತದ ರಾಜಕಾರಣಿಯಾಗಿದ್ದಾರೆ ಎಂದು ಸಂಬುದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಶಿವಶಂಕರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಮಕೂರಿನಲ್ಲಿರುವ ಸಿದ್ದಾರ್ಥ ಶಿಕ್ಷಣ ಸಂಸ್ಥೆಗಳ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದು, ಈ ಹಿಂದೆಯೂ ಇದೇ ಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಸಹ ದಾಳಿ ನಡೆಸಿದ್ದರು. ಡಾ.ಜಿ.ಪರಮೇಶ್ವರ್ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಪ್ರತಿವರ್ಷ ಸಾವಿರಾರು ವೈದ್ಯರು, ಇಂಜಿನಿಯರ್ಗಳನ್ನು, ಕಾನೂನು ಪದವೀಧರರನ್ನು ಹೊರತರುತ್ತಿದ್ದು, ಇಂತಹ ಸಂಸ್ಥೆ ಮೇಲೆ ಐಟಿ,ಇಡಿ ದಾಳಿ ಮಾಡುತ್ತಿರುವುದು ಸರಿಯಲ್ಲ. ದಲಿತರೊಬ್ಬರ ರಾಜಕೀಯ ಜೀವನ ಮೊಟಕುಗೊಳಿಸುವ, ದಲಿತರೊಬ್ಬರ ಸಿಎಂ ಅವಕಾಶ ತಡೆಯುವುದಕ್ಕಾಗಿಯೇ ಕೋಮುವಾದಿಗಳು ಈ ಷಡ್ಯಂತ್ರ ರೂಪಿಸಿದ್ದಾರೆ. ಮಾಗಡಿ ತಾಲೂಕಿನ ದಲಿತ ಸಮುದಾಯ ಪರಮೇಶ್ವರ ಜೊತೆ ನಿಂತು ಅವರಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆಂದು ಶಿವಶಂಕರ್ ಹೇಳಿದರು.ಟ್ರಸ್ಟ್ ಸದಸ್ಯರಾದ ಬ್ಯಾಲಕೆರೆ ಚಿಕ್ಕರಾಜು, ಸದಸ್ಯ ಬೆಳಿಯಪ್ಪ, ಮುಖಂಡರಾದ ನರಸಿಂಹಮೂರ್ತಿ, ಸುಗ್ಗನಹಳ್ಳಿ ಕೃಷ್ಣಮೂರ್ತಿ, ಬೀಚನಹಳ್ಳಿ ಸುರೇಶ್, ಚಕ್ರಬಾವಿ ನಾಗರಾಜ್, ಚಿಕ್ಕಮುದಿಗೆರೆ ಸುರೇಶ್ ಇದ್ದರು.
26ಕೆಆರ್ ಎಂಎನ್ 4.ಜೆಪಿಜಿ
ಸಂಬುದ್ಧ ಜನಸೇವಾ ಟ್ರಸ್ಟ್ ಅಧ್ಯಕ್ಷ ಶಿವಶಂಕರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.