ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸೃಷ್ಟಿಯ ಅಮೂಲ್ಯ ಕೊಡುಗೆಗಳಾದ ಮಣ್ಣು ಹಾಗು ನೀರನ್ನು ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದು ಕೃಷ್ಣಾ ಕಾಡಾ ನಿಗಮದ ಮಾಜಿ ಅಧ್ಯಕ್ಷ ಬಸವರಾಜ ಕುಂಬಾರ ಹೇಳಿದರು.ನಗರದ ಕಸಾಪ ಸಭಾಂಗಣದಲ್ಲಿ ಆಧುನಿಕ ಕೃಷಿ - ಆವಿಷ್ಕಾರ ಎಂಬ ವಿಷಯಾಧಾರಿತ ದತ್ತಿ ಉಪನ್ಯಾಸ ಹಾಗೂ ಚರ್ಚಾಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು. ಸೃಷ್ಟಿಯು ನೀಡಿದ ಅಮೂಲ್ಯ ಮಣ್ಣು ಮತ್ತು ನೀರನ್ನು ಸಂರಕ್ಷಣೆ ಮಾಡುವ ಕತ೯ವ್ಯ ನಮ್ಮದಾಗಬೇಕು. ಇಂದು ವಿಜಯಪುರ ಜಿಲ್ಲೆಯ ಕೃಷಿ ತೋಟಗಾರಿಕೆ ತುಂಬ ಉಪಯುಕ್ತವಾಗಿದೆ. ರೈತರು ವಾಣಿಜ್ಯ ಬೆಳೆಗಳನ್ನು ಬೆಳೆಯಬೇಕು. ಕೃಷಿಕರರಿಗೆ ಯಂತ್ರೋಪಕರಣಗಳ ಬಳಕೆಯಿಂದ ವ್ಯವಸಾಯಕ್ಕೆ ಸಹಕಾರಿಯಾಗಿದೆ. ನಗರೀಕರಣ ಬೆಳೆದಂತೆ ಫಲವತ್ತಾದ ಭೂಮಿಯನ್ನು ಕಳೆದುಕೊಳ್ಳುತ್ತಿದ್ದೇವೆ. ಕೆರೆಗಳನ್ನು ಹಾಗು ಬಾಂದಾರಗಳನ್ನು ನಿಮಿ೯ಸಿ ಅಮೂಲ್ಯವಾದ ಮಳೆ ನೀರನ್ನು ಪೋಲಾಗದಂತೆ ಕೃಷಿಕರು ಗಮನಿಸಬೇಕು ಎಂದು ಸಲಹೆ ನೀಡಿದರು.ಆಧುನಿಕ ಕೃಷಿಯಲ್ಲಿ ಅವಿಷ್ಕಾರರ ವಿಷಯ ಕುರಿತು ಉಪನ್ಯಾಸ ನೀಡಿದ ಪ್ರೊ.ಶರಣಗೌಡ ಪಾಟೀಲ, ನಮ್ಮ ಪೂರ್ವಜರು ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ಆಹಾರ ಧಾನ್ಯ ಬೆಳೆಯುತ್ತಿದ್ದರು. ಇಂದು ಪ್ರತಿಯೊಂದು ಬೆಳೆಗಳಿಗೆ ರಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಸತ್ವವನ್ನು ಕಳೆದುಕೊಂಡಿದೆ. ಅನೇಕ ನೀರಾವರಿ ಭೂಮಿ ಜವಳು ಹತ್ತಿ ಹಾಳಾಗಿದೆ. ಜವಳು ಆಗದಂತೆ ಎಚ್ಚರ ವಹಿಸಿ ಕೃಷಿ ಮಾಡುವದು ಅತ್ಯವಶ್ಯ ಎಂದರು. ಸಾಹಿತಿ ಶಿಲ್ಪಾ ಭಸ್ಮೆ ಉಪನ್ಯಾಸ ನೀಡಿ, ಜಚನಿ ಅವರು ಶಬ್ದಬ್ರಹ್ಮ, ಆರು ಸಾವಿರ ವಚನಗಳನ್ನು ರಚಿಸುವ ಮೂಲಕ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ. ರಾಷ್ಟ್ರೀಯತೆ, ಭಾವೈಕ್ಯತೆ, ದೇಶ ಪ್ರೇಮ, ನಾಡು ನುಡಿಗೆ ಪ್ರಾಧ್ಯಾನತೆ ಅವರ ಸಾಹಿತ್ಯದಲ್ಲಿ ಅಡಕವಾಗಿತ್ತು. ಜ್ಞಾನ ಹಾಗೂ ವಿಜ್ಞಾನದ ಮಹತ್ವ ಸಾರುವ ವಚನಗಳನ್ನು ರಚಿಸಿದ್ದಾರೆ ಎಂದು ವಿವರಿಸಿದರು.ಅಧ್ಯಕ್ಷತೆ ವಹಿಸಿದ್ದ ಸಾಹಿತಿ ಸಿದ್ದಲಿಂಗ ಮನಹಳ್ಳಿ ಮಾತನಾಡಿದರು. ಕಸಾಪ ಜಿಲ್ಲಾಧ್ಕಕ್ಷ ಹಾಸಿಂಪೀರ ವಾಲೀಕಾರ, ಕಸಾಪ ಪದಾಧಿಕಾರಿಗಳಾದ ರವಿ ಕಿತ್ತೂರ, ವಿಜಯಲಕ್ಷ್ಮೀ ಹಳಕಟ್ಟಿ, ಶಶಿಕಲಾ ಇಜೇರಿ, ಅಶೋಕ ಗುಡದಿನ್ನಿ, ನಾಗರಾಜ ಹೊಸಳ್ಳಿ, ರಾಜೇಸಾಬ ಶಿವನಗುತ್ತಿ, ಬಿ.ಎಂ.ಆಜೂರ, ವಿ.ಎಸ್.ಖಾಡೆ, ಎನ್.ಆರ್.ಕುಲಕರ್ಣಿ, ಎಸ್.ಎಂ.ಕಣಬೂರ, ಶಂಕರ ಬಸವಪ್ರಭು, ಪ್ರೊ.ಯು.ಎನ್.ಕುಂಟೋಜಿ, ಜಿ.ಎಸ್.ಬಳ್ಳೂರ, ಭಾಗೀರಥಿ ಶಿಂಧೆ, ಫಕ್ರುದ್ದೀನ್ ಶೇಖ, ಪರವೀನ ಶೇಖ. ಶಿವಾಜಿ ಮೋರೆ,ಅಮಸಿದ್ದ ಪೂಜಾರಿ ಉಪಸ್ಥಿತರಿದ್ದರು. ಡಾ.ಸುರೇಖಾ ರಾಠೋಡ ಸ್ವಾಗತಿಸಿದರು. ಡಾ.ಶೈಲಾ ಬಳಗಾನೂರ ಕಾರ್ಯಕ್ರಮ ನಿರೂಪಿಸಿದರು. ಶೋಭಾ ಬಡಿಗೇರ ವಂದಿಸಿದರು.